ಜಪ

ನಾನೀಗ ದಾರಿ ದೀಪಗಳ ಹಿಡಿದು
ಹೆದ್ದಾರಿಯಲಿ ಹೆಜ್ಜೆ ಹಾಕುತ್ತಿರುವೆ.
ಇತಿಹಾಸದ ಹಳವಂಡಗಳು, ಕೋವಿಗಳ
ಸದ್ದುಗಳು, ಎಲ್ಲಿಯೋ ಆಳದಲಿ ಕೇಳುವ
ಬಿಕ್ಕಳಿಕೆಗಳು, ಕಸಾಯಖಾನೆಯ ಆಕ್ರಂದನಗಳು
ಚೆನ್ನಾಗಿ ನನ್ನ ಗುದ್ದುತ್ತಲಿದೆ. ಮತ್ತೆ ನಾನು
ಉಡಿಯಲ್ಲಿ ಕವಿತೆಗಳ ಕಟ್ಟಿಕೊಂಡು ಅಲೆಯುತ್ತಿರುವೆ.

ಕಲ್ಲುದೇವರ ಪೂಜಿಸಿದರ ಕಣ್ಣರೆಪ್ಪೆಗೆ
ಹಾಲೆರದ ಕೈಗಳಿಗೆ, ಅನಾಥಶ್ರಮದ ಪುಟ್ಟ
ಕಂದಮ್ಮಗಳು ಅಳು ಎದೆ ಅಲ್ಲಾಡಿಸುವದಿಲ್ಲ.
ಮದುವೆ ಮಂಟಪದಲಿ ಮೆನ್ಯುಗಳ ಸಾಲಿನಲ್ಲಿ
ಸ್ತುತಿಗಳ ಅವಲೋಕನ, ಗುಡಿಸಿಲುಗಳ
ಬದುಕಿನ ರಂಗನ್ನೂ ಹೊರದಬ್ಬಿದವರ ಸಾಲು
ಮಂದಿಯ ಮಾತುಗಳು ನನಗೆ ಅರ್ಥವಾಗುವುದಿಲ್ಲ.

ದಟ್ಟ ಅಡವಿಯಲಿ ಕಲ್ಲುಪುಡಿಯಲಿ ಒಸರಿದ ನನ್ನ
ಕವಿತೆ ನದಿಯಾಗಿ ಹರಿದು ಬಯಲ ಹಸಿರು,
ವನಸುಮದ ಪಿಸುಗುಡುವ ಕಸುವೆಲ್ಲಾ
ಕನಸಾಗಿ, ದುಮ್ಮಕ್ಕುವ ಶಕ್ತಿ, ಜೀವ ಸೆಲೆ ನನ್ನ
ಮಕ್ಕಳು, ಮರೆವಷ್ಟು ದೂರ ನಡೆದು ಜೀವನ
ದಾರಿ ಉದ್ದುದ್ದ ಬುದ್ಧ ಮಾರ್ಗ, ದಿಗಂತದ
ತುಂಬ ಚುಕ್ಕಿ ಚಂದ್ರ ತಾರೆಗಳು ಮರೆತು
ನಡೆಯಲಾರೆನು ನಾನು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...