ಜಪ

ನಾನೀಗ ದಾರಿ ದೀಪಗಳ ಹಿಡಿದು
ಹೆದ್ದಾರಿಯಲಿ ಹೆಜ್ಜೆ ಹಾಕುತ್ತಿರುವೆ.
ಇತಿಹಾಸದ ಹಳವಂಡಗಳು, ಕೋವಿಗಳ
ಸದ್ದುಗಳು, ಎಲ್ಲಿಯೋ ಆಳದಲಿ ಕೇಳುವ
ಬಿಕ್ಕಳಿಕೆಗಳು, ಕಸಾಯಖಾನೆಯ ಆಕ್ರಂದನಗಳು
ಚೆನ್ನಾಗಿ ನನ್ನ ಗುದ್ದುತ್ತಲಿದೆ. ಮತ್ತೆ ನಾನು
ಉಡಿಯಲ್ಲಿ ಕವಿತೆಗಳ ಕಟ್ಟಿಕೊಂಡು ಅಲೆಯುತ್ತಿರುವೆ.

ಕಲ್ಲುದೇವರ ಪೂಜಿಸಿದರ ಕಣ್ಣರೆಪ್ಪೆಗೆ
ಹಾಲೆರದ ಕೈಗಳಿಗೆ, ಅನಾಥಶ್ರಮದ ಪುಟ್ಟ
ಕಂದಮ್ಮಗಳು ಅಳು ಎದೆ ಅಲ್ಲಾಡಿಸುವದಿಲ್ಲ.
ಮದುವೆ ಮಂಟಪದಲಿ ಮೆನ್ಯುಗಳ ಸಾಲಿನಲ್ಲಿ
ಸ್ತುತಿಗಳ ಅವಲೋಕನ, ಗುಡಿಸಿಲುಗಳ
ಬದುಕಿನ ರಂಗನ್ನೂ ಹೊರದಬ್ಬಿದವರ ಸಾಲು
ಮಂದಿಯ ಮಾತುಗಳು ನನಗೆ ಅರ್ಥವಾಗುವುದಿಲ್ಲ.

ದಟ್ಟ ಅಡವಿಯಲಿ ಕಲ್ಲುಪುಡಿಯಲಿ ಒಸರಿದ ನನ್ನ
ಕವಿತೆ ನದಿಯಾಗಿ ಹರಿದು ಬಯಲ ಹಸಿರು,
ವನಸುಮದ ಪಿಸುಗುಡುವ ಕಸುವೆಲ್ಲಾ
ಕನಸಾಗಿ, ದುಮ್ಮಕ್ಕುವ ಶಕ್ತಿ, ಜೀವ ಸೆಲೆ ನನ್ನ
ಮಕ್ಕಳು, ಮರೆವಷ್ಟು ದೂರ ನಡೆದು ಜೀವನ
ದಾರಿ ಉದ್ದುದ್ದ ಬುದ್ಧ ಮಾರ್ಗ, ದಿಗಂತದ
ತುಂಬ ಚುಕ್ಕಿ ಚಂದ್ರ ತಾರೆಗಳು ಮರೆತು
ನಡೆಯಲಾರೆನು ನಾನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಾಂತಿ ಸಮರಸದ ತೊರೆಯಲ್ಲಿ
Next post ಪಾಂಡು-ಮಾದ್ರಿಯರ ಪ್ರಸಂಗ

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…