ಜಪ

ನಾನೀಗ ದಾರಿ ದೀಪಗಳ ಹಿಡಿದು
ಹೆದ್ದಾರಿಯಲಿ ಹೆಜ್ಜೆ ಹಾಕುತ್ತಿರುವೆ.
ಇತಿಹಾಸದ ಹಳವಂಡಗಳು, ಕೋವಿಗಳ
ಸದ್ದುಗಳು, ಎಲ್ಲಿಯೋ ಆಳದಲಿ ಕೇಳುವ
ಬಿಕ್ಕಳಿಕೆಗಳು, ಕಸಾಯಖಾನೆಯ ಆಕ್ರಂದನಗಳು
ಚೆನ್ನಾಗಿ ನನ್ನ ಗುದ್ದುತ್ತಲಿದೆ. ಮತ್ತೆ ನಾನು
ಉಡಿಯಲ್ಲಿ ಕವಿತೆಗಳ ಕಟ್ಟಿಕೊಂಡು ಅಲೆಯುತ್ತಿರುವೆ.

ಕಲ್ಲುದೇವರ ಪೂಜಿಸಿದರ ಕಣ್ಣರೆಪ್ಪೆಗೆ
ಹಾಲೆರದ ಕೈಗಳಿಗೆ, ಅನಾಥಶ್ರಮದ ಪುಟ್ಟ
ಕಂದಮ್ಮಗಳು ಅಳು ಎದೆ ಅಲ್ಲಾಡಿಸುವದಿಲ್ಲ.
ಮದುವೆ ಮಂಟಪದಲಿ ಮೆನ್ಯುಗಳ ಸಾಲಿನಲ್ಲಿ
ಸ್ತುತಿಗಳ ಅವಲೋಕನ, ಗುಡಿಸಿಲುಗಳ
ಬದುಕಿನ ರಂಗನ್ನೂ ಹೊರದಬ್ಬಿದವರ ಸಾಲು
ಮಂದಿಯ ಮಾತುಗಳು ನನಗೆ ಅರ್ಥವಾಗುವುದಿಲ್ಲ.

ದಟ್ಟ ಅಡವಿಯಲಿ ಕಲ್ಲುಪುಡಿಯಲಿ ಒಸರಿದ ನನ್ನ
ಕವಿತೆ ನದಿಯಾಗಿ ಹರಿದು ಬಯಲ ಹಸಿರು,
ವನಸುಮದ ಪಿಸುಗುಡುವ ಕಸುವೆಲ್ಲಾ
ಕನಸಾಗಿ, ದುಮ್ಮಕ್ಕುವ ಶಕ್ತಿ, ಜೀವ ಸೆಲೆ ನನ್ನ
ಮಕ್ಕಳು, ಮರೆವಷ್ಟು ದೂರ ನಡೆದು ಜೀವನ
ದಾರಿ ಉದ್ದುದ್ದ ಬುದ್ಧ ಮಾರ್ಗ, ದಿಗಂತದ
ತುಂಬ ಚುಕ್ಕಿ ಚಂದ್ರ ತಾರೆಗಳು ಮರೆತು
ನಡೆಯಲಾರೆನು ನಾನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಾಂತಿ ಸಮರಸದ ತೊರೆಯಲ್ಲಿ
Next post ಪಾಂಡು-ಮಾದ್ರಿಯರ ಪ್ರಸಂಗ

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys