ರಾಜಕಾರಣವೆಂದರೆ
ಏನೆಂದುಕೊಂಡಿರಿ
ವಿನಾಕಾರಣ ಹೊಡೆದಾಟ
ಬಡಿದಾಟ ದೊಂಬರಾಟ
ಕಣ್ಣು ಹಾಯಿಸಿ ತಿಹಾಸದತ್ತ
ಗದ್ದುಗೆಯೇರಲು ಅನಿವಾರ್ಯ
ಕೊಲೆ, ಸುಲಿಗೆ ರಕ್ತಪಾತ
ಚಾಣಕ್ಯನ ನೀತಿತಂತ್ರ
ಹಣ ಅಧಿಕಾರ ದಾಹಕ್ಕೆ
ಮುಗ್ಧ ಪ್ರಾಣಗಳ ಬೆಲೆ
ಮಾನವೀಯ ಸಂಬಂಧಗಳು
ಬತ್ತಿ ಹೋದ ಸೆಲೆ
ಬಾಯಲ್ಲಿ ಭಗವದ್ಗೀತೆ
ಕೈಯಲ್ಲಿ ಮಚ್ಚುಗತ್ತಿ
ಮಾತಿನ ಬಂಡವಾಳ ಹಾಕಿ
ಮತದಾರರ ವ್ಯಾಪಾರ
ಪೊಳ್ಳು ಆಶ್ವಾಸನೆಗಳ ಸಮಾಧಿ
ಸಿಂಹಾಸನ ಪ್ರತಿಷ್ಠಾನ
ತತ್ತ್ವ ಸಿದ್ಧಾಂತ ಆದರ್ಶಗಳೆಲ್ಲಿ
ಸೂತ್ರ ಕಿತ್ತ ಗಾಳಿಪಟ
ರಾಮ ರಹೀಮರಲ್ಲಿ
ಯೇಸು ಬುದ್ಧರಲ್ಲಿ
ಭೇದಭಾವದ ಬಿತ್ತನೆ
ಕೋಮು ಭ್ರಷ್ಟಾಚಾರದ ಬೋಧನೆ
ಅಧರ್ಮ ಅನೀತಿಗಳ ಕಾರಸ್ಥಾನ
ನ್ಯಾಯನಿಷ್ಠೆಗಳ ಪರ್ಯಾವಸಾನ
ರಾಜಕಾರಣವೆಂದರೆ ಇಷ್ಟೆ
ಸ್ವಾರ್ಥ ರಾಜಕಾರಣಿಗಳ ಪ್ರತಿಷ್ಠೆ.
*****
Related Post
ಸಣ್ಣ ಕತೆ
-
ಕಳಕೊಂಡವನು
ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…
-
ಗೋಪಿ
ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…
-
ಕೂನನ ಮಗಳು ಕೆಂಚಿಯೂ….
ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…
-
ನಿರಾಳ
ಮಂಗಳೂರಿನ ಟೌನ್ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…
-
ಅವರು ನಮ್ಮವರಲ್ಲ
ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…