Home / ಲೇಖನ / ಇತರೆ / ವಿಸ್ಮಯ ಹುಟ್ಟಿಸುವ ಮೂಷಿಕ ಪ್ರಪಂಚ

ವಿಸ್ಮಯ ಹುಟ್ಟಿಸುವ ಮೂಷಿಕ ಪ್ರಪಂಚ

ಆಶ್ಚರ್‍ಯವೆಂದರೆ ಭಾರತ ಒಂದರಲ್ಲಿಯೆ ೨೪೦೦ ರಿಂದ ೫೦೦೦ ಮಿಲಿಯನ್ ದಂಶಗಳಿವೆ ಎಂದು ಅಂದಾಜು ಮೂಡಲಾಗಿದೆ. ಇಲಿ, ಮೊಲ, ಅಳಿಲು, ಮುಂತಾದವುಗಳಿಗೆ ದಂಶಕಗಳೆನ್ನುತ್ತಾರೆ. ಪ್ರತಿವರ್‍ಷ ೧೧ ಮಿಲಿಯನ್ ಟನ್ ಧಾನ್ಯಗಳನ್ನು ಇಲಿಗಳು ತಿಂದು ಬಿಡುತ್ತವೆ. ವರ್‍ಷ ಒಂದಕ್ಕೆ ಒಂದು ಇಲಿ ಒಂದು ಕ್ವಿಂಟಲ್ ಧಾನ್ಯವನ್ನು ಹಾಳುಮಾಡುತ್ತದೆ. ಒಂದು ಜೊತೆ ಇಲಿ ಒಂದು ವರ್ಷದಲ್ಲಿ ೮೦೦ ಆಗಿ ೩ ವರ್ಷಗಳಲ್ಲಿ ೩೫ ಕೋಟಿಯಷ್ಟಾಗುತ್ತವೆ! ಅಮೇರಿಕ ಸಂಯುಕ್ತ ಸಂಸ್ಥಾನವೊಂದರಲ್ಲಿಯೇ ಕಳೆದ ೨೦ ವರ್‍ಷಗಳಲ್ಲಿ ಇಲಿಯ ಬೋನಿನ ವಿವರ ಮಾದರೀಯ ೩೦೦ ಪೇಟೆಂಟ್‌ಗಳನ್ನು ಪಡೆಯಲಾಯಿತೆಂದರೆ ಅಲ್ಲಿಯ ಅಗಣಿತ ಇಲಿಗಳ ಸಂಖ್ಯೆ ಎಷ್ಟೆಂದು ಅಚ್ಚರಿಯಾಗುತ್ತದೆ. ರಾಜಸ್ಥಾನದ ಬಿಕಾನೆರ್ ಜಿಲ್ಲೆಯ ದಕ್ಷಿಣಕ್ಕೆ ಡೆನ್ನಾಕ್, ಎಂಬ ಸಣ್ಣ ಪಟ್ಟಣವಿದ್ದು ಇಲ್ಲಿ ಕಾರ್‍ನಿದೇವಿ ದೇವಾಲಯ ೬೦೦ ವರ್ಷಗಳಿಂದಲೂ ಪ್ರಸಿದ್ಧವಾಗಿದೆ. ಬಂದ ಭಕ್ತರು ಇಲ್ಲಿವಾಸವಾಗಿರುವ ಸಾವಿರಾರು ಇಲಿಗಳಿಗೆ ಆಹಾರ ನೈವೇದ್ಯವನ್ನರ್‍ಪಿಸುತ್ತಾರೆ. ಇದೇ ಇಲ್ಲಿಯ ಭಕ್ತಿ. ಬೆಕ್ಕೂ, ಕಾಗೆ, ಹದ್ದುಗಳಿಂದ ಈ ಇಲಿಗಳನ್ನು ರಕ್ಷಿಸಲು ನೌಕರರ ಒಂದು ತಂಡವನ್ನು ನೇಮಿಸಿದ್ದಾರೆ. ಆದ್ಯಾಗ್ಯೂ ಇದುವರೆಗೆ ಪಟ್ಟಣದಲ್ಲಿ ಯಾವುದೇ ತರಹದ ರೋಗಗಳು ಹರಡಿಲ್ಲದಿರುವುದು ಆಶ್ಚರ್‍ಯ!?
*****

Tagged:

Leave a Reply

Your email address will not be published. Required fields are marked *

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...