Home / ಲೇಖನ / ಇತರೆ / ವಿಸ್ಮಯ ಹುಟ್ಟಿಸುವ ಮೂಷಿಕ ಪ್ರಪಂಚ

ವಿಸ್ಮಯ ಹುಟ್ಟಿಸುವ ಮೂಷಿಕ ಪ್ರಪಂಚ

ಆಶ್ಚರ್‍ಯವೆಂದರೆ ಭಾರತ ಒಂದರಲ್ಲಿಯೆ ೨೪೦೦ ರಿಂದ ೫೦೦೦ ಮಿಲಿಯನ್ ದಂಶಗಳಿವೆ ಎಂದು ಅಂದಾಜು ಮೂಡಲಾಗಿದೆ. ಇಲಿ, ಮೊಲ, ಅಳಿಲು, ಮುಂತಾದವುಗಳಿಗೆ ದಂಶಕಗಳೆನ್ನುತ್ತಾರೆ. ಪ್ರತಿವರ್‍ಷ ೧೧ ಮಿಲಿಯನ್ ಟನ್ ಧಾನ್ಯಗಳನ್ನು ಇಲಿಗಳು ತಿಂದು ಬಿಡುತ್ತವೆ. ವರ್‍ಷ ಒಂದಕ್ಕೆ ಒಂದು ಇಲಿ ಒಂದು ಕ್ವಿಂಟಲ್ ಧಾನ್ಯವನ್ನು ಹಾಳುಮಾಡುತ್ತದೆ. ಒಂದು ಜೊತೆ ಇಲಿ ಒಂದು ವರ್ಷದಲ್ಲಿ ೮೦೦ ಆಗಿ ೩ ವರ್ಷಗಳಲ್ಲಿ ೩೫ ಕೋಟಿಯಷ್ಟಾಗುತ್ತವೆ! ಅಮೇರಿಕ ಸಂಯುಕ್ತ ಸಂಸ್ಥಾನವೊಂದರಲ್ಲಿಯೇ ಕಳೆದ ೨೦ ವರ್‍ಷಗಳಲ್ಲಿ ಇಲಿಯ ಬೋನಿನ ವಿವರ ಮಾದರೀಯ ೩೦೦ ಪೇಟೆಂಟ್‌ಗಳನ್ನು ಪಡೆಯಲಾಯಿತೆಂದರೆ ಅಲ್ಲಿಯ ಅಗಣಿತ ಇಲಿಗಳ ಸಂಖ್ಯೆ ಎಷ್ಟೆಂದು ಅಚ್ಚರಿಯಾಗುತ್ತದೆ. ರಾಜಸ್ಥಾನದ ಬಿಕಾನೆರ್ ಜಿಲ್ಲೆಯ ದಕ್ಷಿಣಕ್ಕೆ ಡೆನ್ನಾಕ್, ಎಂಬ ಸಣ್ಣ ಪಟ್ಟಣವಿದ್ದು ಇಲ್ಲಿ ಕಾರ್‍ನಿದೇವಿ ದೇವಾಲಯ ೬೦೦ ವರ್ಷಗಳಿಂದಲೂ ಪ್ರಸಿದ್ಧವಾಗಿದೆ. ಬಂದ ಭಕ್ತರು ಇಲ್ಲಿವಾಸವಾಗಿರುವ ಸಾವಿರಾರು ಇಲಿಗಳಿಗೆ ಆಹಾರ ನೈವೇದ್ಯವನ್ನರ್‍ಪಿಸುತ್ತಾರೆ. ಇದೇ ಇಲ್ಲಿಯ ಭಕ್ತಿ. ಬೆಕ್ಕೂ, ಕಾಗೆ, ಹದ್ದುಗಳಿಂದ ಈ ಇಲಿಗಳನ್ನು ರಕ್ಷಿಸಲು ನೌಕರರ ಒಂದು ತಂಡವನ್ನು ನೇಮಿಸಿದ್ದಾರೆ. ಆದ್ಯಾಗ್ಯೂ ಇದುವರೆಗೆ ಪಟ್ಟಣದಲ್ಲಿ ಯಾವುದೇ ತರಹದ ರೋಗಗಳು ಹರಡಿಲ್ಲದಿರುವುದು ಆಶ್ಚರ್‍ಯ!?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...