Home / ಲೇಖನ / ವಿಜ್ಞಾನ / ಸ್ಮಾರ್‍ಟ್ ಮೆಟೀರಿಯಲ್ಸ್

ಸ್ಮಾರ್‍ಟ್ ಮೆಟೀರಿಯಲ್ಸ್

ದೇಹದೊಳಗಿನ ಮೂಳೆ, ರಕ್ತನಾಳ, ಇತರೆ ಚರ್‍ಮಕ್ಕೆ ಸಂಬಂಧಿಸಿದಂತೆ ಅಂಗಾಂಗಳು ಸಿಥಿಲಗೊಂಡಾಗ ಅವುಗಳ ಬದಲಿಗೆ ಬೇರೆ ಅಂಗಗಳನ್ನು ಜೋಡಿಸುವ ಪರಿಕರಗಳಿಗೆ ಸ್ಮಾರ್ಟ್‌ ಮೆಟೀರಿಯಲ್ಸ್, ಎಂದು ಕರೆಯುತ್ತಾರೆ. ಕೆಲವರಿಗೆ ಧ್ವನಿನಾಳಗಳನ್ನು ತೆಗೆದು ಹಾಕಲಾಗುತ್ತದೆ. ಅಂತವರಿಗೆ ಕೃತಕ ಧ್ವನಿನಾಳ ವರವಾಗಿ ಬಂದಿದೆ. ಮಾನವನ ದೇಹದ ಅಳವಡಿಕೆ ಅಥವಾ Implant ಗಳು ಗಟ್ಟಿಮುಟ್ಟಾಗಿರಬೇಕು. ದೇಹಕ್ಕೆ ಅದರಿಂದ ಯಾವದೇ ದುಷ್ಪರಿಣಾಮ ಆಗಬಾರದು. ಅದು ದೇಹಕ್ಕೆ ಲಗತ್ತಾಗಿ ಹೊಂದಿಕೊಂಡು ಕಾರ್ಯ ನಿರ್ವಹಿಸಬೇಕಾಗುತ್ತದೆ. ಇದರಲ್ಲಿ “ನಿಟಿಲಾನ್’ ಎಂಬ ಮಿಶ್ರವು ವಿಶೇಷವೆನಿಸಿದೆ. ಕೋಣೆಯ ತಾಪಮಾನಕ್ಕೆ ಮಾನವ ದೇಹದ ಶಾಖಕ್ಕೂ ಗಣನೀಯವಾಗಿ ಆಕಾರ ಬದಲಾಯಿಸುತ್ತದೆ. ಆದ್ದರಿಂದ ಮಾನವನ Intravascular stent ಗಳಿಗೆ ಇದನ್ನು ಬಳೆಸುವುದು ಸೂಕ್ತವೆಂದು ಬಗೆದು ಇದರಿಂದ ದೇಹದೊಳಗಿನ ಶಿಥಿಲ ಅಂಗಗಳನ್ನು ತಯಾರಿಸಿ ಸೇರಿಸಲಾಗುತ್ತದೆ. ಟೈಟಾನಿಯಮ್, ಎಂಬ ಧಾತು ಕೃತಕ ಹಲ್ಲು ಜೋಡಣೆಗೆ ಸೂಕ್ತವೆಂದು ಕಂಡುಕೊಳ್ಳಲಾಗಿದೆ. ದಂತ ಅಳವಡಿಕೆಗಾಗಿ ಇದು ವ್ಯಾಪಕ ಬಳಕೆಯಲ್ಲಿದೆ. ಇದರಂತೆ ಮಂಡಿಚಿಪ್ಪು, ಕೀಲುಗಳು ಇತರೆ ದೇಹದೊಳಗಿನ ಅಂಗಾಂಗಗಳು ರೋಗ ಗ್ರಸ್ಥವಾದರೆ ಅವುಗಳನ್ನು ತೆರವುಗೊಳಿಸಿ ಈ ಸ್ಮಾರ್ಟ್‌ ಮೆಟೇರಿಯಲ್ಸ್ ಗಳನ್ನು ಜೋಡಿಸಲಾಗುತ್ತದೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...