Home / ಕವನ / ಕವಿತೆ / ರಂಜಾನ ಹಬ್ಬದ ಈದೀ

ರಂಜಾನ ಹಬ್ಬದ ಈದೀ

ಯುದ್ಧ ದಾಳಿಗಳಿಗೆ ತತ್ತರಿಸಿದ್ದಾರೆ ನನ್ನ ಜನ.
ರಂಜಾನ ಹಬ್ಬದ ಈದೀಯಾಗಿ ಕೇಳುತ್ತಿದ್ದೇನೆ
ಒಂದು ಚುಟುಕು ನೆಮ್ಮದಿಯ ಚೂರು
ದಯಾಮಯ ಅಲ್ಲಾಹ್‌ನಲಿ ಕೈಯತ್ತಿ ಬೇಡುತ್ತಿರುವೆ
ನಮಗೆ ಮನುಷ್ಯತ್ವದ ವರವ ನೀಡೆಂದು.
ಜಗತ್ತು ಎಷ್ಟೇ ಹೊತ್ತಿ ಉರಿದರೂ ಏನಂತೆ
ನಂದಿಸುವ ಶಕ್ತಿ ನನ್ನ ಮಮತೆಗಿದೆ.
ಅವರೆಂತಹ ಕ್ರೂರ ಪ್ರಾಣಿಗಳಾಗಿದ್ದರೂ
ಮನುಷ್ಯರನ್ನಾಗಿಸುವ ಶಕ್ತಿ
ನಾನು ಕುಡಿಸಿದ ಆ ಎದೆ ಹಾಲಿಗಿದೆ.
ಎಷ್ಟಾದರೂ ಈ ಲೋಕ ನನ್ನ ಮಡಿಲ ಕೂಸಲ್ಲವೇ?
ಪೈಗಂಬರರ ಪಡಿಯಚ್ಚನು ಸಂತೆಯಲಿ
ಕಾಬಾದಲ್ಲಿ, ಆರಾಫಾತ್ ಮೈದಾನದಲ್ಲಿ
ಹುಡುಕುತ್ತಿರುವ ತಾಯಿ ನಾನು,
ಏಕಾಂಗಿಯಾಗಿ ನಿಂತಿದ್ದೇನೆ ಧೃತಿಗೆಡದೆ ಕೇಳುತ್ತಿದ್ದೇನೆ,
ಯುದ್ಧಗಳೇ ಅದೆಷ್ಟು ಕಂದಮ್ಮಗಳ ಬಲಿ ಕೇಳುವಿರಿ.
ಹಿಂಸೆಯ ಆಯುಷ್ಯ ಅತ್ಯಲ್ಪ.
ರಚ್ಚೇ ಹಿಡಿದ ಮಗುವನು ತಟ್ಟಿ ಮಲಗಿಸುವ
ಕಲೆ ಗೊತ್ತಿದೆ ನನಗೆ.
ಅವರೂ ನನ್ನದೇ ಕುಡಿಗಳು ತಾನೆ?
ಯುದ್ಧ ಮಾರಿಗೆ ಜೀವಗಳ ಬಲಿ ನೀಡಿದ
ಬಸವಳಿದ ತಾಯಿ ನಾನು
ಮನುಕುಲ ನಾಶವಾಗುವುದಕ್ಕೆ ಮುನ್ನ
ಅಳಿದುಳಿದ ಮನುಷ್ಯತ್ವ ಮಾಯವಾಗುವ ಮುನ್ನ
ರಂಜಾನ್ ಹಬ್ಬದ ಈದೀಯಾಗಿ*
ಚುಟುಕು ನೆಮ್ಮದಿ ಕೇಳುತ್ತಿರುವೆನು
ಯುದ್ಧಗಳ ವಿರೋಧಿಸುತ್ತಿರುವೆ
*****
* ಹಣ, ವಸ್ತುವಿನ ರೂಪದಲ್ಲಿ ಹಿರಿಯರು ಕಿರಿಯರಿಗೆ ನೀಡುವ ಹಬ್ಬದ ಖುಷಿ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...