ಬೃಂದಾವನಪತಿ

ಅಂದಿಗು ಪೂತನೆ ಇಂದಿಗು ಪೂತನೆ
ಎಂದೆಂದಿಗೂ ನೀನು ಮಂಗಳನೆ
ಮಂದಮತಿಗೆ ನಿನ್ನ ತಿಳಿಯಲು ಸಾಧ್ಯವೆ?
ಸುಂದಾರ ಸುಗುಣ ದಯಾಕರನೆ

ಒಂದೆಂಬೊ ಅದ್ವೈತ ಮಹಿಮ ನೀನಾದರು
ದ್ವಂದ್ವವ ನಿರ್ಮಿಸಿ ತೋರಿರುವೆ
ಮಂದರೋದ್ಧಾರನೆ ಚೋದ್ಯಮಿದೆಲ್ಲವು
ಬೃಂದಾವನಪತಿ ಗೋವಿಂದನೆ

ಓಹೋಹೊ ಏನಿವು? ಅದ್ಭುತ ಕೃತಿಗಳು
ಲೆಕ್ಕಕೆ ಮೀರಿದ ಭಾವಗಳು
ಆಹಾಹ ನಿನ್ನನು ಬಣ್ಣಿಸಲಳವೇನು?
ಬಹು ಘನವೋ ನಿನ್ನ ಮಹಿಮೆಗಳು

ಕೋಗಿಲೆ ದನಿಯೇನು? ಸಾಗರದಲೆಯೇನು?
ಆಗಸದಾ ಮಹಾಕಾಂತಿಯೇನು?
ರಾಗದ ಸೊಂಪೇನು? ಪಯಿರಿನ ಸೊಗಸೇನು?
ಯೋಗೀಶ ಚಿನ್ಮಯರೂಪ ನೀನು

ವಿಶ್ವದ ಸೊಬಗೇನು? ಜೀವನದಿಡುಗೇನು?
ಸತ್ಯ ಸೌಂದರ್ಯದ ಕಣಿಯೋ ನೀನು
ನಶ್ವರಮಿಲ್ಲದ ಸೃಷ್ಟಿಯ ಕಂಡೆನು
ತಲೆದೂಗಿ ಶಿರಬಾಗಿ ಮಣಿದೆ ನಾನು

ಆನಂದವೆಂಬುದೆ ನೀನೆಂದು ಪರಮ ಸು
ಜ್ಞಾನಿಗಳೆಲ್ಲರು ನುಡಿದಿಹರು
ನಾನೇನು ಬೆಲ್ಲೆನು? ಜನಕಜೆ ನಿನ್ನನು
ತಾನೆ ತಾನಾಗಿಹ ಸ್ವಾಮಿಯನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಫಕೀರಪ್ಪನ ಕತೆ
Next post ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…