ಬೃಂದಾವನಪತಿ

ಅಂದಿಗು ಪೂತನೆ ಇಂದಿಗು ಪೂತನೆ
ಎಂದೆಂದಿಗೂ ನೀನು ಮಂಗಳನೆ
ಮಂದಮತಿಗೆ ನಿನ್ನ ತಿಳಿಯಲು ಸಾಧ್ಯವೆ?
ಸುಂದಾರ ಸುಗುಣ ದಯಾಕರನೆ

ಒಂದೆಂಬೊ ಅದ್ವೈತ ಮಹಿಮ ನೀನಾದರು
ದ್ವಂದ್ವವ ನಿರ್ಮಿಸಿ ತೋರಿರುವೆ
ಮಂದರೋದ್ಧಾರನೆ ಚೋದ್ಯಮಿದೆಲ್ಲವು
ಬೃಂದಾವನಪತಿ ಗೋವಿಂದನೆ

ಓಹೋಹೊ ಏನಿವು? ಅದ್ಭುತ ಕೃತಿಗಳು
ಲೆಕ್ಕಕೆ ಮೀರಿದ ಭಾವಗಳು
ಆಹಾಹ ನಿನ್ನನು ಬಣ್ಣಿಸಲಳವೇನು?
ಬಹು ಘನವೋ ನಿನ್ನ ಮಹಿಮೆಗಳು

ಕೋಗಿಲೆ ದನಿಯೇನು? ಸಾಗರದಲೆಯೇನು?
ಆಗಸದಾ ಮಹಾಕಾಂತಿಯೇನು?
ರಾಗದ ಸೊಂಪೇನು? ಪಯಿರಿನ ಸೊಗಸೇನು?
ಯೋಗೀಶ ಚಿನ್ಮಯರೂಪ ನೀನು

ವಿಶ್ವದ ಸೊಬಗೇನು? ಜೀವನದಿಡುಗೇನು?
ಸತ್ಯ ಸೌಂದರ್ಯದ ಕಣಿಯೋ ನೀನು
ನಶ್ವರಮಿಲ್ಲದ ಸೃಷ್ಟಿಯ ಕಂಡೆನು
ತಲೆದೂಗಿ ಶಿರಬಾಗಿ ಮಣಿದೆ ನಾನು

ಆನಂದವೆಂಬುದೆ ನೀನೆಂದು ಪರಮ ಸು
ಜ್ಞಾನಿಗಳೆಲ್ಲರು ನುಡಿದಿಹರು
ನಾನೇನು ಬೆಲ್ಲೆನು? ಜನಕಜೆ ನಿನ್ನನು
ತಾನೆ ತಾನಾಗಿಹ ಸ್ವಾಮಿಯನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಫಕೀರಪ್ಪನ ಕತೆ
Next post ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

cheap jordans|wholesale air max|wholesale jordans|wholesale jewelry|wholesale jerseys