ಬೃಂದಾವನಪತಿ

ಅಂದಿಗು ಪೂತನೆ ಇಂದಿಗು ಪೂತನೆ
ಎಂದೆಂದಿಗೂ ನೀನು ಮಂಗಳನೆ
ಮಂದಮತಿಗೆ ನಿನ್ನ ತಿಳಿಯಲು ಸಾಧ್ಯವೆ?
ಸುಂದಾರ ಸುಗುಣ ದಯಾಕರನೆ

ಒಂದೆಂಬೊ ಅದ್ವೈತ ಮಹಿಮ ನೀನಾದರು
ದ್ವಂದ್ವವ ನಿರ್ಮಿಸಿ ತೋರಿರುವೆ
ಮಂದರೋದ್ಧಾರನೆ ಚೋದ್ಯಮಿದೆಲ್ಲವು
ಬೃಂದಾವನಪತಿ ಗೋವಿಂದನೆ

ಓಹೋಹೊ ಏನಿವು? ಅದ್ಭುತ ಕೃತಿಗಳು
ಲೆಕ್ಕಕೆ ಮೀರಿದ ಭಾವಗಳು
ಆಹಾಹ ನಿನ್ನನು ಬಣ್ಣಿಸಲಳವೇನು?
ಬಹು ಘನವೋ ನಿನ್ನ ಮಹಿಮೆಗಳು

ಕೋಗಿಲೆ ದನಿಯೇನು? ಸಾಗರದಲೆಯೇನು?
ಆಗಸದಾ ಮಹಾಕಾಂತಿಯೇನು?
ರಾಗದ ಸೊಂಪೇನು? ಪಯಿರಿನ ಸೊಗಸೇನು?
ಯೋಗೀಶ ಚಿನ್ಮಯರೂಪ ನೀನು

ವಿಶ್ವದ ಸೊಬಗೇನು? ಜೀವನದಿಡುಗೇನು?
ಸತ್ಯ ಸೌಂದರ್ಯದ ಕಣಿಯೋ ನೀನು
ನಶ್ವರಮಿಲ್ಲದ ಸೃಷ್ಟಿಯ ಕಂಡೆನು
ತಲೆದೂಗಿ ಶಿರಬಾಗಿ ಮಣಿದೆ ನಾನು

ಆನಂದವೆಂಬುದೆ ನೀನೆಂದು ಪರಮ ಸು
ಜ್ಞಾನಿಗಳೆಲ್ಲರು ನುಡಿದಿಹರು
ನಾನೇನು ಬೆಲ್ಲೆನು? ಜನಕಜೆ ನಿನ್ನನು
ತಾನೆ ತಾನಾಗಿಹ ಸ್ವಾಮಿಯನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಫಕೀರಪ್ಪನ ಕತೆ
Next post ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…