Home / ಕವನ / ಕವಿತೆ / ತಂದೆಯವರಿಗೆ

ತಂದೆಯವರಿಗೆ

ನೀವೀಗ ಕಲಿಸುತ್ತಿರಬಹುದು ಭೂಮಿತಿಯ ಪ್ರಮೇಯವೊಂದನ್ನು
ಎಸ್. ಎಸ್, ಎಲ್. ಸಿ. ಯಲ್ಲಿ ಗಣಿತಕ್ಕೆ
ನೂರಕ್ಕೆ ನೂರು ಪಡೆದ ವಿದ್ಯಾರ್ಥಿ ನೀವು
ಈಗ ವಿದ್ಯಾರ್ಥಿಗಳ ಎದುರು ನಿಂತಿದ್ದೀರಿ
ಹೇಳುತ್ತಿದ್ದೀರಿ : ಲುಕ್ ಹಿಯರ್

ಆ ಅದೇ ಬೆಂಚಿನ ಮೇಲೆ ನಾನು ಕೂತಿದ್ದೆ
ಹನ್ನೆರಡು ವರ್ಷಗಳ ಹಿಂದೆ
ಬೀಜಗಣಿತ, ಪೈಥಾಗೋರಸನ ನಿಯಮ
ಭೂಮಿತಿಯ ಆರು ಪ್ರಮೇಯಗಳು
ಎಲ್ಲಾ ಕಲಿಯುತ್ತ ಮುಂದೆ

ಕಾಲೇಜಿಗೆ ಬಂದೆ, ಅಲ್ಲಿಂದ ಯೂನಿವರ್ಸಿಟಿ
ತ್ರಿವೇಂದ್ರಂ-ಬೆಂಗಳೂರು
ಇಲ್ಲಿ ನಾನಿಲ್ಲದಾಗ ನೀವು ಬಂದು
ಬದುಕು ಅದರಾಚೆಗಿನ ಹೋರಾಟ ನಡೆಸಿದಿರಿ
ನಾನು ಬಂದಾಗ
ಒಂದು ಲೆಕ್ಕ ಬಿಡಿಸಿದ ನಿರಂಬಳದಲ್ಲಿ
ಮಲಗಿದ್ದಿರಿ ನನ್ನ ಪ್ರೀತಿಯ ಗಣಿತದ ಟೀಚರ್

ನಿಮ್ಮನ್ನು ಅಭಿನಂದಿಸಲೆ ? ತಪ್ಪಾದೀತು
ನನ್ನ ಪ್ರೀತಿಯ ಅಪ್ಪ
ನಾನು ಮಾಡಿದ ತಪ್ಪ
ಕ್ಷಮಿಸುತ್ತಲೇ ಬಂದಿರುವೆ, ನಿನಗೀಗ ಐವತ್ತೇಳು
ನಿನ್ನ ಸಾತ್ವಿಕ ಕೆಚ್ಚು, ಜೀವ ಮಾಧುರ್ಯ
ಲವಲವಿಕೆ, ಜೀವನ ದೃಷ್ಟಿ
ಎಲ್ಲವೂ ಲುಕ್ ಹಿಯರ್, ಲುಕ್ ಹಿಯರ್
ಎಂದು ಕರೆದಂತಾಗುತ್ತಿದೆ ನನಗೆ
ನೀವೋ
ಭೂತಾಕಾರದ ಹಳದಿ ಕಂಪಾಸ್ ಹಿಡಿದು
ವೃತ್ತ ರಚಿಸುತ್ತೀರಿ, ವ್ಯಾಸ ಎಳೆಯುತ್ತೀರಿ
ಮತ್ತೆ
ಇವನ್ನೆಲ್ಲ ಮೀರುತ್ತಲೇ ಬಂದಿದ್ದೀರಿ

ನನ್ನ ಕೃತಜ್ಞತೆಗಳು ನಿಮಗೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...