Home / ಕವನ / ಕವಿತೆ / ತಂದೆಯವರಿಗೆ

ತಂದೆಯವರಿಗೆ

ನೀವೀಗ ಕಲಿಸುತ್ತಿರಬಹುದು ಭೂಮಿತಿಯ ಪ್ರಮೇಯವೊಂದನ್ನು
ಎಸ್. ಎಸ್, ಎಲ್. ಸಿ. ಯಲ್ಲಿ ಗಣಿತಕ್ಕೆ
ನೂರಕ್ಕೆ ನೂರು ಪಡೆದ ವಿದ್ಯಾರ್ಥಿ ನೀವು
ಈಗ ವಿದ್ಯಾರ್ಥಿಗಳ ಎದುರು ನಿಂತಿದ್ದೀರಿ
ಹೇಳುತ್ತಿದ್ದೀರಿ : ಲುಕ್ ಹಿಯರ್

ಆ ಅದೇ ಬೆಂಚಿನ ಮೇಲೆ ನಾನು ಕೂತಿದ್ದೆ
ಹನ್ನೆರಡು ವರ್ಷಗಳ ಹಿಂದೆ
ಬೀಜಗಣಿತ, ಪೈಥಾಗೋರಸನ ನಿಯಮ
ಭೂಮಿತಿಯ ಆರು ಪ್ರಮೇಯಗಳು
ಎಲ್ಲಾ ಕಲಿಯುತ್ತ ಮುಂದೆ

ಕಾಲೇಜಿಗೆ ಬಂದೆ, ಅಲ್ಲಿಂದ ಯೂನಿವರ್ಸಿಟಿ
ತ್ರಿವೇಂದ್ರಂ-ಬೆಂಗಳೂರು
ಇಲ್ಲಿ ನಾನಿಲ್ಲದಾಗ ನೀವು ಬಂದು
ಬದುಕು ಅದರಾಚೆಗಿನ ಹೋರಾಟ ನಡೆಸಿದಿರಿ
ನಾನು ಬಂದಾಗ
ಒಂದು ಲೆಕ್ಕ ಬಿಡಿಸಿದ ನಿರಂಬಳದಲ್ಲಿ
ಮಲಗಿದ್ದಿರಿ ನನ್ನ ಪ್ರೀತಿಯ ಗಣಿತದ ಟೀಚರ್

ನಿಮ್ಮನ್ನು ಅಭಿನಂದಿಸಲೆ ? ತಪ್ಪಾದೀತು
ನನ್ನ ಪ್ರೀತಿಯ ಅಪ್ಪ
ನಾನು ಮಾಡಿದ ತಪ್ಪ
ಕ್ಷಮಿಸುತ್ತಲೇ ಬಂದಿರುವೆ, ನಿನಗೀಗ ಐವತ್ತೇಳು
ನಿನ್ನ ಸಾತ್ವಿಕ ಕೆಚ್ಚು, ಜೀವ ಮಾಧುರ್ಯ
ಲವಲವಿಕೆ, ಜೀವನ ದೃಷ್ಟಿ
ಎಲ್ಲವೂ ಲುಕ್ ಹಿಯರ್, ಲುಕ್ ಹಿಯರ್
ಎಂದು ಕರೆದಂತಾಗುತ್ತಿದೆ ನನಗೆ
ನೀವೋ
ಭೂತಾಕಾರದ ಹಳದಿ ಕಂಪಾಸ್ ಹಿಡಿದು
ವೃತ್ತ ರಚಿಸುತ್ತೀರಿ, ವ್ಯಾಸ ಎಳೆಯುತ್ತೀರಿ
ಮತ್ತೆ
ಇವನ್ನೆಲ್ಲ ಮೀರುತ್ತಲೇ ಬಂದಿದ್ದೀರಿ

ನನ್ನ ಕೃತಜ್ಞತೆಗಳು ನಿಮಗೆ.
*****

Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...