ಕಣ್ಣು ತೆರೆಯಿತು

ಗುರುಗಳಲ್ಲಿ ನಮಸ್ಕರಿಸಿ ಶಿಷ್ಯ ಹೇಳಿದ-
“ಮಳೆ ಸುರಿದಾಗ ಮೋಡಕ್ಕೆ ಮುಕ್ತಿ.
ಗರಿಗೆದರಿದಾಗ ಹಕ್ಕಿಗೆ ಮುಕ್ತಿ.
ಹೂವರಳಿದಾಗ ಮೊಗ್ಗಿಗೆ ಮುಕ್ತಿ.
ಗುಡಿಗಿನಲ್ಲಿ ಮಿಂಚಿಗೆ ಮುಕ್ತಿ.
ನನಗಿಲ್ಲವೇ ಮುಕ್ತಿ?”
– ಎಂದು ಕಣ್ಣು ಮುಚ್ಚಿ ನಿಂತು ಬೇಡಿದ.

“ಶಿಷ್ಯಾ! ಕಣ್ಣಿನ ರೆಪ್ಪೆಯ ತರೆ ತೆರದಾಗ, ಕಣ್ಣಿನ ಪೊರೆ ಕಳಿಚಿದಾಗ, ನಿನ್ನಲ್ಲೇ ಸಿಗುತ್ತದೆ ನಿನಗೆ ಮುಕ್ತಿ” ಎಂದಾಗ ಶಿಷ್ಯನ ಕಣ್ಣು ತೆರೆಯಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇದ್ದಲ್ಲೇ ಮೇಲೇರ್‍ವ ಉದ್ಯೋಗವನಂತೆ ಅಡ್ಡ ಗೊಳಿಸಿದೊಡೆಂತು?
Next post ಒಲವೆಂಬ ಹೊತ್ತಿಗೆ

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…