ಕೆಂಪು ದೀಪದ ಕೆಳಗೆ

ಹಾಡು ೧ : ಯಾರು ಹಚ್ಚಿದರಣ್ಣ
ಕೆಂಪಾನೆ ದೀಪಾವ
ಯಾರು ಮಾಡಿದರಣ್ಣ
ಬಾಳನ್ನು ರಕ್ತಾವ ||

ನಗುವ ಹೂಗಳನೆಲ್ಲ
ಕಾಲಲ್ಲಿ ತುಳಿದು
ಸುಂದರ ಕನಸುಗಳ
ಬೆಂಕೀಗೆ ಸುರಿದು ||

ಮೆರೆಯುವ ಜನರ
ಗಮ್ಮತ್ತು ಕಾಣಿರಿ
ಬಲಿಯಾದ ಹೆಣ್ಣೀನ
ಬದುಕನ್ನು ನೋಡಿರಿ ||

ಹಾಡು ೨ : ಯಾರು ಹೇಳಿದಯ್ಯಾ
ಇದೆನೆಲ್ಲ ಮಾಡೆಂದು ||

ನಿನ್ನೆಂಡತಿ ಮನೆಯಲ್ಲಿ
ಪತಿಯ ಕನವರಿಕೆಯಲಿ
ನೀನೊ ಇಲ್ಲಿ ಅಬ್ಬಬ್ಬಾ
ಪರ ಹೆಣ್ಣ ತೆಕ್ಕೆಯಲಿ ||

ಏಕೆ ಇಂಥ ದಾಹ
ಕಡಿಮೆಯಾದರೂ ಏನು
ಹೆಂಡತಿ ಬಾಳಿಸದೆ ನೀನು
ಇವೆಲ್ಲಾ ಸರಿಯೇನು ||

ಪರಹೆಣ್ಣ ಕೂಡುವಾಗ
ನೆನಪಿರಲಿ ನಿನ್ನ ಮಗಳೂ
ಇಂಥ ಸ್ಥಿತಿಗೆ ಅವಳನ್ನು
ತಂದವನು ನೀನಲ್ಲವೇನು ||

ಹಾಡು ೩ : ದುಡ್ಡು ಕೊಟ್ಟು ಹೆಣ್ಣನ್ನು
ಮಜಾ ಮಾಡೊ ಅಣ್ಣರಿರಾ
ನಿಮಗೇಕೆ ಸೆಂಟಿಮೆಂಟು
ಮನಸೆಲ್ಲಾ ಕಾಂಕ್ರೀಟು ||

ಒಂದು ಹೆಣ್ಣು ಸಾಲದಲ್ಲ
ಎಷ್ಟಾದರೂ ಪರವಾಗಿಲ್ಲ
ಬೇಕು ಕೈ ಕಾಲಿಗೆಲ್ಲ
ಕೈಲಾಗದಿದ್ರು ಪರವಾಗಿಲ್ಲ ||

ಮನೆ ಬೀದಿ ಊರಲೆಲ್ಲ
ಮರ್ಯಾದೆಸ್ಥರು ಬರೇ
ಊರ ಹೊರಗೆ ಬಂದರಂದ್ರೆ
ಕಚ್ಚೆ ಕಿತ್ತು ಎಸೆದರಲ್ಲಾ ||

ಹಾಡು ೪ : ತಪ್ಪು ಯಾರದು ಇಲ್ಲಿ
ಹೇಳಣ್ಣ ಹೇಳೊ
ಒಪ್ಪಿತವೆಲ್ಲವು ಹಣಕೆ
ಕೇಳಣ್ಣ ಕೇಳೊ ||

ಹಿಡಿಗೂಳಿಗಾಗಿ ಬೆತ್ತಲಾಗರು
ಮುಡಿ ಹೂವಾಗಿ ಅರಳುವರು
ಬಡತನವೊಂದೆ ಮೂಲವಲ್ಲ
ನಾನಾ ತರದ ಸಿಕ್ಕುಗಳಲ್ಲ ||

ಆಹಾ ಜಾರಿಸಿ ನಲಿದರು
ಅಯ್ಯೊ ಜಾರಿ ನರಳಿದರು
ಜಾರಲೆಂದು ಬಂದವರಿಗೆ
ಜಾರುಗುಪ್ಪೆಗಳ್ಯಾರಣ್ಣ ||

ಹಾಡು ೫ : ಹೆಣ್ಣ ಬಯಸಿ ಹೋಗಿ
ನಲಿಯುವ ಅಣ್ಣರಿರಾ
ಒಮ್ಮೆ ಚಿಂತನೆ ಮಾಡಿ
ಬೇಕೆ ನಿಮಗೀ ಮೋಡಿ ||

ತಾಯಿ ತಂಗಿ ಅಕ್ಕ ಅಮ್ಮ
ಈ ಪದಗಳ ಅರ್ಥವೇನು
ಹೇಳಿರಣ್ಣಾ ಹೇಳಿರೊ
ಇದೆಲ್ಲ ನಿಜದ ಬದುಕೇನು ||

ಹಣದ ಎಣಿಕೆಯಲ್ಲಿ
ಸೆರಗ ಸರಿಸಿ ನಲಿಯೋರೆ
ನಿಮ್ಮದೆಂಥ ಬಾಳು
ನೋಡಿ ಹೆಣ್ಣಿನ ಗೋಳು ||

ಹಾಡು ೬ : ಎಂದಿಗೆ ಕೊನೆಯಣ್ಣ
ಬಟ್ಟೆ ಸುಲಿಗೆಗೆ ಅಣ್ಣಾ ||

ಹೆಣ್ಣಿಂದ ಹುಟ್ಟಿ ನೀನು
ಮುಟ್ಟುವೆ ಏನನ್ನ
ಮುಚ್ಚಿ ಇಂಥ ಬಾಳನ್ನ
ಗಳಿಸಿದೆ ಏನನ್ನ ||

ಮಗಳು ತಾಯಿ ತಂಗಿ
ಹೆಂಡತಿ ಎಂದರೇನರ್ಥ
ಬಾಳಿಸದೆ ಹೆಣ್ಣ ಬಾಳು
ಆಯಿತಲ್ಲ ವ್ಯರ್ಥ ||

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೩
Next post ನಿಸರ್ಗ ಸ್ವರ್ಗ

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…