Home / ಕವನ / ಕವಿತೆ / ಕೆಂಪು ದೀಪದ ಕೆಳಗೆ

ಕೆಂಪು ದೀಪದ ಕೆಳಗೆ

ಹಾಡು ೧ : ಯಾರು ಹಚ್ಚಿದರಣ್ಣ
ಕೆಂಪಾನೆ ದೀಪಾವ
ಯಾರು ಮಾಡಿದರಣ್ಣ
ಬಾಳನ್ನು ರಕ್ತಾವ ||

ನಗುವ ಹೂಗಳನೆಲ್ಲ
ಕಾಲಲ್ಲಿ ತುಳಿದು
ಸುಂದರ ಕನಸುಗಳ
ಬೆಂಕೀಗೆ ಸುರಿದು ||

ಮೆರೆಯುವ ಜನರ
ಗಮ್ಮತ್ತು ಕಾಣಿರಿ
ಬಲಿಯಾದ ಹೆಣ್ಣೀನ
ಬದುಕನ್ನು ನೋಡಿರಿ ||

ಹಾಡು ೨ : ಯಾರು ಹೇಳಿದಯ್ಯಾ
ಇದೆನೆಲ್ಲ ಮಾಡೆಂದು ||

ನಿನ್ನೆಂಡತಿ ಮನೆಯಲ್ಲಿ
ಪತಿಯ ಕನವರಿಕೆಯಲಿ
ನೀನೊ ಇಲ್ಲಿ ಅಬ್ಬಬ್ಬಾ
ಪರ ಹೆಣ್ಣ ತೆಕ್ಕೆಯಲಿ ||

ಏಕೆ ಇಂಥ ದಾಹ
ಕಡಿಮೆಯಾದರೂ ಏನು
ಹೆಂಡತಿ ಬಾಳಿಸದೆ ನೀನು
ಇವೆಲ್ಲಾ ಸರಿಯೇನು ||

ಪರಹೆಣ್ಣ ಕೂಡುವಾಗ
ನೆನಪಿರಲಿ ನಿನ್ನ ಮಗಳೂ
ಇಂಥ ಸ್ಥಿತಿಗೆ ಅವಳನ್ನು
ತಂದವನು ನೀನಲ್ಲವೇನು ||

ಹಾಡು ೩ : ದುಡ್ಡು ಕೊಟ್ಟು ಹೆಣ್ಣನ್ನು
ಮಜಾ ಮಾಡೊ ಅಣ್ಣರಿರಾ
ನಿಮಗೇಕೆ ಸೆಂಟಿಮೆಂಟು
ಮನಸೆಲ್ಲಾ ಕಾಂಕ್ರೀಟು ||

ಒಂದು ಹೆಣ್ಣು ಸಾಲದಲ್ಲ
ಎಷ್ಟಾದರೂ ಪರವಾಗಿಲ್ಲ
ಬೇಕು ಕೈ ಕಾಲಿಗೆಲ್ಲ
ಕೈಲಾಗದಿದ್ರು ಪರವಾಗಿಲ್ಲ ||

ಮನೆ ಬೀದಿ ಊರಲೆಲ್ಲ
ಮರ್ಯಾದೆಸ್ಥರು ಬರೇ
ಊರ ಹೊರಗೆ ಬಂದರಂದ್ರೆ
ಕಚ್ಚೆ ಕಿತ್ತು ಎಸೆದರಲ್ಲಾ ||

ಹಾಡು ೪ : ತಪ್ಪು ಯಾರದು ಇಲ್ಲಿ
ಹೇಳಣ್ಣ ಹೇಳೊ
ಒಪ್ಪಿತವೆಲ್ಲವು ಹಣಕೆ
ಕೇಳಣ್ಣ ಕೇಳೊ ||

ಹಿಡಿಗೂಳಿಗಾಗಿ ಬೆತ್ತಲಾಗರು
ಮುಡಿ ಹೂವಾಗಿ ಅರಳುವರು
ಬಡತನವೊಂದೆ ಮೂಲವಲ್ಲ
ನಾನಾ ತರದ ಸಿಕ್ಕುಗಳಲ್ಲ ||

ಆಹಾ ಜಾರಿಸಿ ನಲಿದರು
ಅಯ್ಯೊ ಜಾರಿ ನರಳಿದರು
ಜಾರಲೆಂದು ಬಂದವರಿಗೆ
ಜಾರುಗುಪ್ಪೆಗಳ್ಯಾರಣ್ಣ ||

ಹಾಡು ೫ : ಹೆಣ್ಣ ಬಯಸಿ ಹೋಗಿ
ನಲಿಯುವ ಅಣ್ಣರಿರಾ
ಒಮ್ಮೆ ಚಿಂತನೆ ಮಾಡಿ
ಬೇಕೆ ನಿಮಗೀ ಮೋಡಿ ||

ತಾಯಿ ತಂಗಿ ಅಕ್ಕ ಅಮ್ಮ
ಈ ಪದಗಳ ಅರ್ಥವೇನು
ಹೇಳಿರಣ್ಣಾ ಹೇಳಿರೊ
ಇದೆಲ್ಲ ನಿಜದ ಬದುಕೇನು ||

ಹಣದ ಎಣಿಕೆಯಲ್ಲಿ
ಸೆರಗ ಸರಿಸಿ ನಲಿಯೋರೆ
ನಿಮ್ಮದೆಂಥ ಬಾಳು
ನೋಡಿ ಹೆಣ್ಣಿನ ಗೋಳು ||

ಹಾಡು ೬ : ಎಂದಿಗೆ ಕೊನೆಯಣ್ಣ
ಬಟ್ಟೆ ಸುಲಿಗೆಗೆ ಅಣ್ಣಾ ||

ಹೆಣ್ಣಿಂದ ಹುಟ್ಟಿ ನೀನು
ಮುಟ್ಟುವೆ ಏನನ್ನ
ಮುಚ್ಚಿ ಇಂಥ ಬಾಳನ್ನ
ಗಳಿಸಿದೆ ಏನನ್ನ ||

ಮಗಳು ತಾಯಿ ತಂಗಿ
ಹೆಂಡತಿ ಎಂದರೇನರ್ಥ
ಬಾಳಿಸದೆ ಹೆಣ್ಣ ಬಾಳು
ಆಯಿತಲ್ಲ ವ್ಯರ್ಥ ||

*****

 

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...