Home / ಕವನ / ಕವಿತೆ / ಕೆಂಪು ದೀಪದ ಕೆಳಗೆ

ಕೆಂಪು ದೀಪದ ಕೆಳಗೆ

ಹಾಡು ೧ : ಯಾರು ಹಚ್ಚಿದರಣ್ಣ
ಕೆಂಪಾನೆ ದೀಪಾವ
ಯಾರು ಮಾಡಿದರಣ್ಣ
ಬಾಳನ್ನು ರಕ್ತಾವ ||

ನಗುವ ಹೂಗಳನೆಲ್ಲ
ಕಾಲಲ್ಲಿ ತುಳಿದು
ಸುಂದರ ಕನಸುಗಳ
ಬೆಂಕೀಗೆ ಸುರಿದು ||

ಮೆರೆಯುವ ಜನರ
ಗಮ್ಮತ್ತು ಕಾಣಿರಿ
ಬಲಿಯಾದ ಹೆಣ್ಣೀನ
ಬದುಕನ್ನು ನೋಡಿರಿ ||

ಹಾಡು ೨ : ಯಾರು ಹೇಳಿದಯ್ಯಾ
ಇದೆನೆಲ್ಲ ಮಾಡೆಂದು ||

ನಿನ್ನೆಂಡತಿ ಮನೆಯಲ್ಲಿ
ಪತಿಯ ಕನವರಿಕೆಯಲಿ
ನೀನೊ ಇಲ್ಲಿ ಅಬ್ಬಬ್ಬಾ
ಪರ ಹೆಣ್ಣ ತೆಕ್ಕೆಯಲಿ ||

ಏಕೆ ಇಂಥ ದಾಹ
ಕಡಿಮೆಯಾದರೂ ಏನು
ಹೆಂಡತಿ ಬಾಳಿಸದೆ ನೀನು
ಇವೆಲ್ಲಾ ಸರಿಯೇನು ||

ಪರಹೆಣ್ಣ ಕೂಡುವಾಗ
ನೆನಪಿರಲಿ ನಿನ್ನ ಮಗಳೂ
ಇಂಥ ಸ್ಥಿತಿಗೆ ಅವಳನ್ನು
ತಂದವನು ನೀನಲ್ಲವೇನು ||

ಹಾಡು ೩ : ದುಡ್ಡು ಕೊಟ್ಟು ಹೆಣ್ಣನ್ನು
ಮಜಾ ಮಾಡೊ ಅಣ್ಣರಿರಾ
ನಿಮಗೇಕೆ ಸೆಂಟಿಮೆಂಟು
ಮನಸೆಲ್ಲಾ ಕಾಂಕ್ರೀಟು ||

ಒಂದು ಹೆಣ್ಣು ಸಾಲದಲ್ಲ
ಎಷ್ಟಾದರೂ ಪರವಾಗಿಲ್ಲ
ಬೇಕು ಕೈ ಕಾಲಿಗೆಲ್ಲ
ಕೈಲಾಗದಿದ್ರು ಪರವಾಗಿಲ್ಲ ||

ಮನೆ ಬೀದಿ ಊರಲೆಲ್ಲ
ಮರ್ಯಾದೆಸ್ಥರು ಬರೇ
ಊರ ಹೊರಗೆ ಬಂದರಂದ್ರೆ
ಕಚ್ಚೆ ಕಿತ್ತು ಎಸೆದರಲ್ಲಾ ||

ಹಾಡು ೪ : ತಪ್ಪು ಯಾರದು ಇಲ್ಲಿ
ಹೇಳಣ್ಣ ಹೇಳೊ
ಒಪ್ಪಿತವೆಲ್ಲವು ಹಣಕೆ
ಕೇಳಣ್ಣ ಕೇಳೊ ||

ಹಿಡಿಗೂಳಿಗಾಗಿ ಬೆತ್ತಲಾಗರು
ಮುಡಿ ಹೂವಾಗಿ ಅರಳುವರು
ಬಡತನವೊಂದೆ ಮೂಲವಲ್ಲ
ನಾನಾ ತರದ ಸಿಕ್ಕುಗಳಲ್ಲ ||

ಆಹಾ ಜಾರಿಸಿ ನಲಿದರು
ಅಯ್ಯೊ ಜಾರಿ ನರಳಿದರು
ಜಾರಲೆಂದು ಬಂದವರಿಗೆ
ಜಾರುಗುಪ್ಪೆಗಳ್ಯಾರಣ್ಣ ||

ಹಾಡು ೫ : ಹೆಣ್ಣ ಬಯಸಿ ಹೋಗಿ
ನಲಿಯುವ ಅಣ್ಣರಿರಾ
ಒಮ್ಮೆ ಚಿಂತನೆ ಮಾಡಿ
ಬೇಕೆ ನಿಮಗೀ ಮೋಡಿ ||

ತಾಯಿ ತಂಗಿ ಅಕ್ಕ ಅಮ್ಮ
ಈ ಪದಗಳ ಅರ್ಥವೇನು
ಹೇಳಿರಣ್ಣಾ ಹೇಳಿರೊ
ಇದೆಲ್ಲ ನಿಜದ ಬದುಕೇನು ||

ಹಣದ ಎಣಿಕೆಯಲ್ಲಿ
ಸೆರಗ ಸರಿಸಿ ನಲಿಯೋರೆ
ನಿಮ್ಮದೆಂಥ ಬಾಳು
ನೋಡಿ ಹೆಣ್ಣಿನ ಗೋಳು ||

ಹಾಡು ೬ : ಎಂದಿಗೆ ಕೊನೆಯಣ್ಣ
ಬಟ್ಟೆ ಸುಲಿಗೆಗೆ ಅಣ್ಣಾ ||

ಹೆಣ್ಣಿಂದ ಹುಟ್ಟಿ ನೀನು
ಮುಟ್ಟುವೆ ಏನನ್ನ
ಮುಚ್ಚಿ ಇಂಥ ಬಾಳನ್ನ
ಗಳಿಸಿದೆ ಏನನ್ನ ||

ಮಗಳು ತಾಯಿ ತಂಗಿ
ಹೆಂಡತಿ ಎಂದರೇನರ್ಥ
ಬಾಳಿಸದೆ ಹೆಣ್ಣ ಬಾಳು
ಆಯಿತಲ್ಲ ವ್ಯರ್ಥ ||

*****

 

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...