ಅವಳು ನಡೆಯುತ್ತಿದ್ದಾಳೆ

ಅವಳು ನಡೆಯುತ್ತಿದ್ದಾಳೆ.
ತನ್ನ ದಾರಿಯ ಪಥ ಸಂಚಲನ
ಸರಳೀಕರಿಸಿಕೊಳ್ಳುತ್ತ

ಗೊತ್ತು ಅವಳಿಗೆ,
ಆಸ್ಟ್ರೇಲಿಯಾದ ಏಕಾಂತ ಬೀದಿಗಳು
ಬೆಂಗಳೂರಿನ ಕಾಂಕ್ರೀಟು
ಕಾಡುಗಳ ಕಾಲುದಾರಿಗಳು
ನಮ್ಮ ನಿಮ್ಮೂರಿನ ಕಾಡಿನ
ಕವಲು ಹಾದಿಗಳು
ಚೂರು ಬದಲಾಗಿಲ್ಲ.
ನಾಯಿಗಳ ಆಕ್ರಮಣ
ಕೊಳ್ಳೆ ಹೊಡೆಯುವುದ ಬಿಟ್ಟಿಲ್ಲ.
ನಡೆಯುತ್ತಿದ್ದಾಳೆ ಅವಳು

ತುಂಡಂಗಿ ಗೀರಿದ ಉದ್ರೇಕ
ತಡೆಯಲಾಗದೇ
ತೋಳಗಳು ಮಾಂಸದ ರುಚಿಗೆ ಬಿದ್ದಿವೆ
ಎಂದೆಲ್ಲಾ ಜನರಾಡಿಕೊಳ್ಳುತ್ತಾರೆ.
ನಿಜಕ್ಕೂ ಅದಲ್ಲ.
ಬುರಖಾದ ಒಳಗಿನ ಮುಚ್ಚಿದ ಬೆಚ್ಚಗಿನ
ಮೈ ಕೂಡ ವಿವರ್ಣವಾಗಿದೆ.

ಕರಿಮಣಿಯ ಜೊತೆಗೆ ಅಲ್ಲಲ್ಲಿ
ಹೊಳೆವ ಗುಂಡುಗಳ ಪೋಣಿಸಿ
ಕನಸಿನಲ್ಲಿ ಮಾಲೆ ಕಟ್ಟುತ್ತಾಳೆ
ಲಾಸ್ಯವಾಡುತ್ತದೆ ತುಟಿಯಂಚು
ತಟ್ಟನೆ ಕೆಂಪು ದೀಪ ಉರಿಯುತ್ತದೆ.
ಭಗ್ನಗೊಳ್ಳುತ್ತವೆ,
ಸೆಟೆದು ಚೂರಾಗುತ್ತವೆ ಮಣಿಗಳು
ತುಟಿಯೊಡೆದು ರಕ್ತ ಒಸರುತ್ತದೆ.
ಮೂಲೆಯಲ್ಲಿ ರಾಶಿ ತುಪ್ಪೆಯಾಗಿರುವ
ಬಲೂನುಗಳು ಎದ್ದು
ವಿಕಾರ, ವಿದ್ರೂಪ ಭಂಗಿಗಳಲ್ಲಿ
ಗೋಡೆ ಎತ್ತರಕೆ ಜಿಗಿದು
ಜಡ್ಡುಗಟ್ಟಿಸುತ್ತವೆ ಅವಳನ್ನು.
ಆದರೂ ಕಣ್ಣು ಮುಚ್ಚಿ ಕನಸೇರುತ್ತಾಳೆ
ಮಣಿ ಪೋಣಿಸುತ್ತಾಳೆ.

ದಾರಿ ದಾರಿಯ ಮಧ್ಯೆ
ವೈರುಧ್ಯಗಳ ಕವಲು ಸೀಳುಗಳು
ಅಣಕಿಸುತ್ತವೆ ದಿಕ್ಕು ತಪ್ಪಿಸುತ್ತವೆ ಕೂಡಾ
ಮುಡಿ ಕಟ್ಟಿ, ಮುಡಿ ಬಿಚ್ಚಿ
ಬೆದರು ಬೊಂಬೆಗಳು ಯಾತ್ರೆಯಲ್ಲೂ
ಜಾತ್ರೆ ಮಾಡುತ್ತವೆ.
ಬಾವಿಕಟ್ಟೆಯ ಎಂದೂ ಒಣಗದ ಹಸಿಯಂತೆ.

ಯೂರೋಪಿನ ಕರಿಯ ಜೀತರ
ಮಾರಣ ಹೋಮ
ಇಸ್ರೇಲು, ಪ್ಯಾಲಿಸ್ತೇನಿನ ಕರಿಯ
ಬಂದೂಕುಗಳು
ಅರಬರ ಮರಳುಗಾಡು
ಕೊರಿಯಾದ ಕಗ್ಗೋಲೆಗಳು
ಸರಣಿ ಅನುಕ್ರಮವಾಗಿ
ಕೆಂಪು ಬಣ್ಣದ ಬಟ್ಟೆಗಳಲ್ಲಿ
ಕಸ ಎತ್ತಿ ಸುರುವಿ ಹಾಕುತ್ತವೆ.
ಕಥೆ ಹೇಳುತ್ತವೆ.
ಕಣ್ಣಿನ ದಳಗಳು ಕೊಳದಲ್ಲಿ ಮುಳುಗೇಳುತ್ತವೆ.
ನಡೆಯುತ್ತಿದ್ದಾಳೆ ಆಕೆ.

ಕಲಾಯಿ ಕಂದಿದ ತಾಮ್ರದ
ಪಾತ್ರೆಯಲ್ಲಿ ಅನ್ನಕ್ಕಿಡಬಾರದು
ಅಂದುಕೊಳ್ಳುತ್ತ ನಡೆಯುತ್ತಿದ್ದಾಳೆ.
ನಿತ್ಯಪಥದ ಮಿಗೆಯಗಲ ಅಂಕುರಿಸಿದ
ಕೊಳೆಗಳ ಕೈಗೆಟುಕುವಷ್ಟು ಕಿತ್ತೆಸೆದು
ಮತ್ತೆ ನಡೆಯುತ್ತಾಳೆ.
ಅಕ್ಷರದ ಅರಮನೆಗೆ ಪರಿಮಳವ
ಮಾರಿ ಬರಬೇಕು ಎನ್ನುತ್ತ
ನಡೆಯುತ್ತಿದ್ದಾಳೆ ಅವಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿವಿಯನ್
Next post ವೀರಪ್ಪನ್ ಎಲ್ಲಿದ್ದಾನೆ, ನೀವು ಕಂಡಿರಾ ನೀವು ಕಂಡಿರಾ?

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

cheap jordans|wholesale air max|wholesale jordans|wholesale jewelry|wholesale jerseys