ಗರಿಯೊಡೆದ ಹಕ್ಕಿ

ಬಣ್ಣ ಬಣ್ಣದ ಹೂಗಳು, ಗಾಜಿನ ಚೂರುಗಳು
ಚಿತ್ತಾರದ ಗರಿಗಳು
ತರಾವರಿ ಬೆಣಚುಕಲ್ಲು, ಸಿಂಪಿ
ಕವಡಿಗಳ ತಂದು ಸಂಭ್ರಮಿಸುವ-

ಮುಂಜಾವಿನ ಮಂಜು
ಮುಸ್ಸಂಜೆಯ ಕೆಂಪು ಪ್ರೀತಿಸುವ-
ಆಕಾಶದಂಗಳದೊಳು ಹಾರಾಡಿ
ಏನೆಲ್ಲಾ ಬಾಚಿ ತಬ್ಬಿಕೊಳ್ಳುವ
ಕನಸುಗಳಿಗೆ ಕಾವೂಡಿಸುವ
ಹದಿಹರೆಯದ ವಯಸ್ಸು, ಮುದಗೊಳ್ಳುವ ಮನಸ್ಸು.

ನೋಡ ನೋಡುತಿರೆ
ನೆಲದೆದೆಯಿಂದ ಆಕಾಶದಂಗಳಕೆ ನೆಗೆತ
ಸಂತಸ, ಭಯ, ಬೆರಗು, ವಿಸ್ಮಯಗಳ ಆವರಿಕೆ.
ಸಡಗರ ಸಂಭ್ರಮಗಳ ಬಳ್ಳಿ ಹೆಣೆಯುವಿಕೆ
ಮಾತು ಮೂಕವಾಗಿ ಮೌನವೇ ಮಾತನಾಡುತಾ
ಕನಸುಗಳು ಬೀಜೊಡೆಯುವಿಕೆಗೆ
ಉತ್ಸಾಹದ ಪನ್ನೀರು–
ಹದನಾದ ನಾಡಿ ಬಡಿತದ
ಗರಿಯೊಡೆದ ಹಕ್ಕಿ ನಾನೀಗ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊಸಿಲಿಲ್ಲದ ಬಾಗಿಲು
Next post ಬೇಡ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

cheap jordans|wholesale air max|wholesale jordans|wholesale jewelry|wholesale jerseys