ಹೊಸಿಲಿಲ್ಲದ ಬಾಗಿಲು

ಮನೆಗೆ ಹಿರೀಮಗ
ಹೊಸಿಲು
ಎರಡೂ ಒಂದೇ
ಬೊಟ್ಟು ಬಳಿದುಕೊಂಡರೂ
ಎಡವುವವರು, ತುಳಿಯುವವರು,
ದಾಟುವವರು ಇದ್ದದ್ದೇ

ಮನೆಯ ಕಾಯುವ ಭಾರ
ಹೊಸಿಲಿಗೂ
ಹಿರಿ ಮಗನಿಗೂ
ಸಮನಾಗಿ ಹಂಚಿಕೆಯಾಗಿದೆ
ಆಕಳಿಸಿದರೆ
ತಲಬಾಗಿಲ ಮೇಲೆ
ಹಲ್ಲಿ
ಲೊಚಗುಟ್ಟಿ ಎಚ್ಚರಿಸುತ್ತದೆ

ಭೂಮಿ
ತಾಯಿಯ ಚೊಚ್ಚಿಲ ಮಗ
ನೇಗಿಲು
ಹೆಗಲೇರಿಸಿ ಹುಟ್ಟಿದವನು
ಬಂಜೆ ಎದೆಯೊಳಗೆ
ಹೆಣವಾಗಿ ಕೊಳೆತರೂ
ಉಸಿರಾಡುವವನು

ಕಂಡ ಕನಸುಗಳೆಲ್ಲಾ
ಸಿದಿಗೆ ಕಟ್ಟಿ
ಸಿಂಗರಿಸಿ
ಹೊಸಿಲ ಬುಡಕೆ ಹೂತು
ಊದು ಬತ್ತಿಯ ಹಚ್ಚಿದೆ
ಮುಲುಗುವ ಸದ್ದು
ನಿಮಗೂ ಕೇಳಿಸುತ್ತಿರಬಹುದು

ಅದೇ ಹೊಸಿಲ ಎಡ ಬಲಕು
ಸೂರ್ಯ
ಚಂದ್ರರ ಬರೆದು
ದೀಪ ಹಚ್ಚಿದ
ಒಳಗೂ ಹೊರಗೂ ಬೆಳಕಾಗಲು
ಎಣ್ಣೆ ಇರದಿದ್ದರೂ
ಉರಿದು

ಹೊಸಿಲಿಲ್ಲದ ಬಾಗಿಲು
ಮುಚ್ಚುವ ಕಾಲವಿದು
ಬಂದು ಸೇರಿಕೊಳ್ಳಿ
ಮಣ್ಣಿನ ಮಕ್ಕಳೆಲ್ಲಾ
ಬಾಗಿಲಿಗೆ
‘ಬಾರೇ ಬೇಲಿ’ ಬಡಿಯುವ ಮುನ್ನ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನೊಳಗೇ ಇದೆ ಬಾನು
Next post ಗರಿಯೊಡೆದ ಹಕ್ಕಿ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…