ಹೊಸಿಲಿಲ್ಲದ ಬಾಗಿಲು

ಮನೆಗೆ ಹಿರೀಮಗ
ಹೊಸಿಲು
ಎರಡೂ ಒಂದೇ
ಬೊಟ್ಟು ಬಳಿದುಕೊಂಡರೂ
ಎಡವುವವರು, ತುಳಿಯುವವರು,
ದಾಟುವವರು ಇದ್ದದ್ದೇ

ಮನೆಯ ಕಾಯುವ ಭಾರ
ಹೊಸಿಲಿಗೂ
ಹಿರಿ ಮಗನಿಗೂ
ಸಮನಾಗಿ ಹಂಚಿಕೆಯಾಗಿದೆ
ಆಕಳಿಸಿದರೆ
ತಲಬಾಗಿಲ ಮೇಲೆ
ಹಲ್ಲಿ
ಲೊಚಗುಟ್ಟಿ ಎಚ್ಚರಿಸುತ್ತದೆ

ಭೂಮಿ
ತಾಯಿಯ ಚೊಚ್ಚಿಲ ಮಗ
ನೇಗಿಲು
ಹೆಗಲೇರಿಸಿ ಹುಟ್ಟಿದವನು
ಬಂಜೆ ಎದೆಯೊಳಗೆ
ಹೆಣವಾಗಿ ಕೊಳೆತರೂ
ಉಸಿರಾಡುವವನು

ಕಂಡ ಕನಸುಗಳೆಲ್ಲಾ
ಸಿದಿಗೆ ಕಟ್ಟಿ
ಸಿಂಗರಿಸಿ
ಹೊಸಿಲ ಬುಡಕೆ ಹೂತು
ಊದು ಬತ್ತಿಯ ಹಚ್ಚಿದೆ
ಮುಲುಗುವ ಸದ್ದು
ನಿಮಗೂ ಕೇಳಿಸುತ್ತಿರಬಹುದು

ಅದೇ ಹೊಸಿಲ ಎಡ ಬಲಕು
ಸೂರ್ಯ
ಚಂದ್ರರ ಬರೆದು
ದೀಪ ಹಚ್ಚಿದ
ಒಳಗೂ ಹೊರಗೂ ಬೆಳಕಾಗಲು
ಎಣ್ಣೆ ಇರದಿದ್ದರೂ
ಉರಿದು

ಹೊಸಿಲಿಲ್ಲದ ಬಾಗಿಲು
ಮುಚ್ಚುವ ಕಾಲವಿದು
ಬಂದು ಸೇರಿಕೊಳ್ಳಿ
ಮಣ್ಣಿನ ಮಕ್ಕಳೆಲ್ಲಾ
ಬಾಗಿಲಿಗೆ
‘ಬಾರೇ ಬೇಲಿ’ ಬಡಿಯುವ ಮುನ್ನ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನೊಳಗೇ ಇದೆ ಬಾನು
Next post ಗರಿಯೊಡೆದ ಹಕ್ಕಿ

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…