ಒಂದು ಸುಂದರ ಬಿದರಿನ ತೋಪು. ತೋಪಿನ ಒಳಗೆ ಪುಟ್ಟ ಮನೆ. ಮನೆಯ ಮುಂದೆ ಪುಟ್ಟ ಕೊಳ. ಕೊಳದ ಸೋಪಾನದಲ್ಲಿ ಪ್ರಕೃತಿಯ ಸೌಂದರ್ಯ ಸವಿಯುತ್ತ ಕವಿ ಕುಳಿತಿದ್ದ. ಕವಿ ಮನವು ಹಾಡಿದಾಗ ಬಿದಿರು ಬೊಂಬು ತನ್ನ ಹೃದಯದ ಖಾಲಿ ಜಾಗದಲ್ಲಿ ನಾದ ತುಂಬಿಕೊಂಡು ನಲಿಯುತ್ತಿತ್ತು. ಕವಿಯ ಹಾಡಿನ ನಾದ ಲಹರಿ ಜಲತರಂಗದಲ್ಲಿ ಒಂದಾಗಿ ಲೀನವಾಗುತಿತ್ತು. ಕೊಳದ ಕಟ್ಟೆಯಲ್ಲಿ ಕುಳಿತ ಹಕ್ಕಿ ಕವಿತೆ ತುಂಬಿದ ನೀರನ್ನು ಕುಡಿದು ಸಂತಸದ ಹಾಡನ್ನು ಹಾಡುತಿತ್ತು. ಕವಿಮನ ಒಮ್ಮೆ ಬರಿದಾಯಿತು. ಸ್ಫೂರ್ತಿ ಬತ್ತಿ ಮೋಡ ಕವಿಯಿತು. ಕೊಳದ ಹೃದಯದಿಂದ ಕಾರುಣ್ಯದ ಕವಿತೆಗಳು ತೇಲಿ ಬಂದವು. ಹಕ್ಕಿ ರೆಕ್ಕೆ ಬಡಿದು ಹಾಡತೊಡಗಿತು. ಪ್ರಕೃತಿಯ ವೃಂದಗಾನದಲ್ಲಿ ಕವಿಮನ ಸ್ವಾಂತ್ವನ ಪಡೆದು ಮುದ ಗೊಂಡಿತು. ಕವಿ ತುಂಬಿ ಕೊಟ್ಟಿದ್ದ ಕವಿತೆಗಳೆಲ್ಲ ಮತ್ತೆ ಎದೆತುಂಬಿ ನಲಿದು ಬಂದವು. ಬಿದಿರ ಭಾವಕ್ಕೆ, ಕೊಳದ ಕಾವ್ಯಕ್ಕೆ, ಹಕ್ಕಿಯ ನಲುಮೆಗೆ, ಕವಿ ಮಾರು ಹೋದ. ಪ್ರಕೃತಿಯಲ್ಲಿ ಒಂದಾದ.
*****
Related Post
ಸಣ್ಣ ಕತೆ
-
ಕೂನನ ಮಗಳು ಕೆಂಚಿಯೂ….
ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…
-
ಕುಟೀರವಾಣಿ
ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…
-
ವಿಷಚಕ್ರ
"ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…
-
ಜಡ
ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…
-
ಧನ್ವಂತರಿ
ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…