ಹೂಗಳು ಬಾಡಿಲ್ಲ

ಸಾವು ಬೇಡುವ ಭೂಮಿ
ಸುಡುಗಾಡು ಇದು
ಕೊಟ್ಟದ್ದನ್ನು ಪಡೆದು ಲೆಕ್ಕವಿಡುತ್ತಿದೆ

ಬೆಳ್ಳಂಬೆಳಿಗ್ಗೆ
ಮೂರು ವರ್ಷದ ಕೆಂಚ
ಈರಿಯ ಮಗ
ಹೊಲೆಗೇರಿಯಲ್ಲಿ ಊಟವಿಲ್ಲದೆ
ಸತ್ತ
ಸಮಾಧಿ ಮೇಲೆ ಹೂಗಳು ಬಾಡಿಲ್ಲ

ಮಟ ಮಟ ಮಧ್ಯಾಹ್ನ
ಇಪತ್ತರ ಹರೆಯದ ಕರಿಯ
ಮಾರನ ಮಗ
ಕುರುಬಗೇರಿಯಲಿ ಖಾಯಿಲೆ ಬಿದ್ದು
ಸತ್ತ
ಸಮಾಧಿ ಮೇಲೆ ಹೂಗಳು ಬಾಡಿಲ್ಲ

ಗುದ್ದಲಿ ಹೆಗಲೇರಿಸಿ
ಗುದ್ದು ತೋಡಲು ಹೋದ
ಆ ನಾಲ್ಕು ಜನ
ತಿರುಗಿ ಬಂದಿಲ್ಲ
ಅವರ ಹಸಿವಿಗೆ ಬುತ್ತಿ ಹೊರಬೇಕು

ಹೊತ್ತು ಮುಳುಗುವುದರೊಳಗೆ
ಇನ್ನಾರ ಸಾವೋ?
ಉರಿವ ಸೂರ್ಯನದ್ದೋ
ಚಿಮಣಿ ದೀಪದ್ದೋ
ಒಲೆಯ ಬೆಂಕಿಯದ್ದೋ;
ಯಾವ ಗುಡಿಸಲ ಮುಂದೆ
ಅಲಾಯಿ ಕುಣಿತವೋ?

ದೊಡ್ಡ ಮನೆಯ ತೋರಣ
ನಗುತ್ತಲೇ ಇದೆ
ಮುಚ್ಚಿದ ಬಾಗಿಲ ಮುಂದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಜೆ ಹಣ್ಣಾಗಿ ಬಿಸಿಲು ಹೊನ್ನಾಗಿ
Next post ಮೊದಲ ಪಯಣ

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…