ಹುಚ್ಚುನಾಯಿ ಬಂದು ಕಚ್ಚುತಿಹುದು ತಂಗಿ

ಹುಚ್ಚುನಾಯಿ ಬಂದು ಕಚ್ಚುತಿಹುದು ತಂಗಿ
ಎಚ್ಚರವಿರಲಿ ದಾರಿಹಿಡಿದು ನಡಿ                    || ಪ ||

ಅಚ್ಯತನೊಳು ಸೇರಿ ಅಜನ ತಲಿಗೆ ಹಾರಿ
ಹೆಚ್ಚಿನ ಋಷಿಗಳ ಬೆನ್ನತ್ತಿ ಕಾಡುವದಿದು            || ಅ. ಪ. ||

ಹರನ ಕಡಿದು ಕೈಯೊಳು ಕೊಡಿಸಿ ಕಪಾಲವ
ಭರದಿಂದ ಭಿಕ್ಷಕೆ ದೂಡಿತಿದು
ಸುರಲೋಕಕ್ಹೋಗಿ ಇಂದ್ರನ ಸರೀರದಿ ಬಹು-
ಪರಿ ಛಿದ್ರವ ಮೂಡಿಸಿತಿದು                        || ೧ ||

ನರ ಪಾಂಡುಪುತ್ರರೊಳು ಬೆರೆದು ಆರೋಗ್ಯದಿ
ಪರಿಭವಗೆಟ್ಟು ತಿರುತಿರುಗಾಡಿತಿದು
ಧರೆಯೊಳು ಗುಲಗಂಜಿಕೊಪ್ಪದೊಳಿರುವಂಥಾ
ಕುರಿಗಳ ಕಡಿದಬ್ಬರಿಸುತ ಬರುತದೆ                   || ೨ ||

ಯಾಕೆ ಬಂದೆವು ಈ ಊರೊಳಗದ್ಭುತ
ಸಾಕಿದಾವಿನಕರ ಕಡಿದಿತಂತೆ
ಬಾ ಕಂಡ್ಯಾ ಲಕ್ಷ್ಮೀಪುರಕೆ ಹೋಗುವ ಮಾರ್ಗದಿ
ಬೇಕೆಂದು ನಿಂತಡ್ಡಗಟ್ಟಿ ಬೊಗಳುವದೊ                || ೩ ||

ನಾಲ್ಕುಮಂದಿ ನಾವು ಏಕಾಗಿ ಹೋಗೋನು
ಜೋಕೆಯಿಂದದರಕಡೆ ನೋಡದಂತೆ
ಕಾಕುಜನರಿಗೆ ಕಣ್ಣಿಟ್ಟರೆ ಬಿಡದಮ್ಮಾ
ನೀ ಕೇಳೆ ಗೆಳತಿ ಇಲ್ಲ್ಯಾಕ ಕುಂತಿ                 || ೪ ||

ಬಳಲಿಸುವದು ಬ್ರಹ್ಮಾಂಡದೊಳಗೆ ಇನ್ನ
ಉಳಿಯೋದು ಕಷ್ಟ ನಾ ಯಾರಿಗ್ಹೇಳಲಿ
ಲಲನಾಮಣಿಯೆ ಅಚ್ಚಬಿಳೇದು ದೊಂಡೇದಬಾಲಾ
ತಿಳುನಡಾ ಜೋಲ್ಗಿವಿಯ ಬಾವಲಿ                      || ೫ ||

ಇಳಿಯೊಳೆಲ್ಲರ ಹಲ್ಲಲ್ಲ್ಹಿಡಿದು ಸವರುತ
ತಳಮಳಗೊಳಿಸಿತಿನ್ನ್ಯಾಂಗ ತಾಳಲಿ
ಚಲ್ವ ಶಿಶುನಾಳಧೀಶನೊಲಿಮಿಯಿಂದ
ತಿಳಿದು ಜ್ಞಾನದ ಮನಿಯೊಳಡಗಿರು ಕಂಡ್ಯಾ             || ೬ ||

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಕರಾ!
Next post ನಗೆ ಡಂಗುರ – ೨೮

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…