Home / ಕಥೆ / ಸಣ್ಣ ಕಥೆ / ಕೊಲೆ ಮಾಡಲು ಬಂದ ಕಳ್ಳರು

ಕೊಲೆ ಮಾಡಲು ಬಂದ ಕಳ್ಳರು

ಕೆಲವು ಕಾಲದ ಮೇಲೆ ತಿರುಚನಾಪಳ್ಳಿಯ ಅರಸನು ತನ್ನ ಜಟ್ಟಿಯನ್ನು ಕಾಳಗದಲ್ಲಿ ಕೊಂದವನೇ ಶ್ರೀರಂಗಪಟ್ಟಣದ ಒಡೆತನಕ್ಕೆ ಬಂದನೆಂಬುದನ್ನು ತಿಳಿದು ಭಯಭ್ರಾಂತನಾದನು. ಇಷ್ಟು ಪೌರುಷಸಾಹಸಗಳುಳ್ಳ ಒಡೆಯರು ತಮ್ಮ ರಾಜ್ಯದಮೇಲೆ ಕೈ ಮಾಡಿದರೇನುಗತಿಯೆಂದು ಚಿಂತಿಸುತ್ತ ಆ ಅರಸನು ಕಡೆಗೆ ರಹಸ್ಯವಾಗಿ ಒಡೆಯರನ್ನು ಕೊಲ್ಲಿಸುವುದೇ ಸರಿಯೆಂದು ನಿಶ್ಚಯಮಾಡಿ, ೨೫ ಮಂದಿ ಕಳ್ಳರಿಗೆ ಹಣವನ್ನು ಕೊಟ್ಟು ಕಂಠೀರವ ಒಡೆಯರ ತಲೆಯನ್ನು ತೆಗೆದುಕೊಂಡು ಬರುವುದೆಂದು ಅಪ್ಪಣೆ ಮಾಡಿದನು. ಆ ಕಳ್ಳರು ಬೇರೆ ಬೇರೆ ವೇಷಗಳನ್ನು ಧರಿಸಿ ಶ್ರೀರಂಗಪಟ್ಟಣಕ್ಕೆ ಬಂದು, ಅಲ್ಲಿನ ಮರ್ಮಗಳನ್ನು ತಿಳಿದುಕೊಳ್ಳುತ್ತಾ ಸಮಯವನ್ನು ನಿರೀಕ್ಷಿಸುತ್ತಲಿದ್ದರು. ಕಡೆಗೊಂದು ದಿನ ಈ ಕಳ್ಳರು ಕನ್ನ ತೆಗೆದುಕೊಂಡೇ ಅರಮನೆಯನ್ನು ಪ್ರವೇಶಮಾಡಿ ಅವಿತುಕೊಂಡಿದ್ದರು. ಅಂತಃಪುರದಲ್ಲಿ ದೊರೆಗಳು ಒಬ್ಬರೇ ಮಂಚದ ಮೇಲೆ ಕುಳಿತು ತಾಂಬೂಲವನ್ನು ಸವಿಯುತ್ತಿದ್ದ ಸಮಯದಲ್ಲಿ ನಿದ್ರೆಯ ಮಾಳಿಗೆಯು ಮುಂದಣ ಹಜಾರದ ಕಂಬಗಳ ಮನೆಯಲ್ಲಿ ಬೇರೆ ಬೇರೆಯಾಗಿ ನಿಂತಿದ್ದ ಈ ೨೫ ಜನರ ನೆರಳುಗಳನ್ನು ನೋಡಿ “ಯಾರೋ ವಂಚನೆಯಿಂದ ನಮ್ಮ ಪ್ರಾಣವನ್ನಪಹರಿಸುವುದಕ್ಕೆ ಬಂದಿರುತ್ತಾರೆ” ಎಂದು ತಿಳಿದು ಹಾಗೆಯೇ ಸಮೀಪದಲ್ಲಿದ್ದ ವಿಜಯ ನಾರಸಿಂಹವೆಂಬ ತಮ್ಮ ಕತ್ತಿಯನ್ನು ಕೈಗೆ ತೆಗೆದುಕೊಂಡರು. ಹೊಂಚು ಹಾಕುತ್ತಲಿದ್ದ ಆ ಕಳ್ಳರು ಅದನ್ನು ಕಂಡು, ಎಲ್ಲರೂ ಗುಂಪುಗೂಡಿ ದೊರೆಗಳನ್ನು ಸುತ್ತಿಕೊಂಡರು. ಆಗ ದೊರೆಗಳು ತಮ್ಮ ಸಾಧಕದ ಚಾತುರ್ಯದಿಂದ ಪಟ್ಟವನ್ನು ತಿರುಹಿ, ತಲೆಗಳನ್ನು ಹೊಡೆದು, ಈ ಪೆಟ್ಟನ್ನು ತಪ್ಪಿಸಿಕೊಂಡು ಸಮೀಪಕ್ಕೆ ನುಸುಳಿಕೊಂಡು ಬಂದ ಕೆಲವರು ತಮ್ಮ ಭುಜಬಲದಿಂದ ಎರಡು ಕಂಕಳುಗಳಲ್ಲಿಯೂ ಇರುಕಿಸಿಕೊಂಡು ಕತ್ತುಗಳನ್ನು ಮುರಿದು, ಮತ್ತೆ ಕೆಲವರನ್ನು ಕಾಲಿನಿಂದ ಒದ್ದು ನಿರ್ಜಿವವಾಗುವಂತೆ ಕೆಡಹಿದರು. ಉಳಿದ ಹಲಕೆಲವು ಓಡಿಹೋಗುವುದಕ್ಕೆ ಅವಕಾಶವಿಲ್ಲದೆ ಆಯುಧಗಳನ್ನು ಕೆಳಕ್ಕೆ ಹಾಕಿ ವಾದಾಕ್ರಾಂತರಾದರು. ಒಡೆಯರು ಅವರನ್ನು ಜೀವಂತ ಬಿಟ್ಟು, ಬಾಗಿಲನ್ನು ಮುದ್ರೆ ಮಾಡಿ ಹೊರಗೆ ಕಾದಿದ್ದ ಗೊಲ್ಲರು ಮುಂತಾದವರನ್ನು ಕೂಗಿ ಕರೆದು, ಸತ್ತವರ ಹೆಣಗಳನ್ನು ಹೊರಕ್ಕೆ ಸಾಗಿಸಿ, ಉಳಿದವರನ್ನು ಮರುದಿನ ಸಭೆಗೆ ಕರತರುವಂತೆ ಆಜ್ಞಾಪಿಸಿದರು.

ಮಾರನೆ ದಿನ ಸಭೆಯಲ್ಲಿ ವಿಚಾರಿಸಿದಾಗ, ಅವರು ತಿರುಚನಾಪಳ್ಳಿಯ ಅರಸನಿಂದ ಪ್ರೇರೇಪಿತರಾಗಿ ಬಂದರೆಂದು ತಿಳಿಯಿತು. ಆಗ ದೊರೆಗಳು “ನೀವು ತಿರುಚನಾಪಳ್ಳಿಗೆ ಹೋಗಿ ಇಲ್ಲಿ ನಡೆದದ್ದನ್ನು ನಿಮ್ಮ ದೊರೆಗೆ ತಿಳಿಸಿ, ಹೋಗಿ” ಎಂದು ಕಳುಹಿಸಿಬಿಟ್ಟರು.
*****
[ವಂಶರತ್ನಾಕರ ಪುಟ ೮೧; ವಂಶಾವಳಿ ಪುಟ ೭೭-೭೮]

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...