ರಸಕಾವ್ಯ

ನಿನ್ನ ನೂರಾರು ಹಸ್ತಗಳು ತೂರಿ ನೆಲದೆದೆಯ ತಬ್ಬಿಹವು
ಆಹಾ ಅದೆಷ್ಟು ಆಳವೋ ನಿನ್ನ ಪ್ರೀತಿ
ಎಂದೋ ನೆಲವ ಮುದ್ದಿಸಿತು ಬೀಜ-ನೀನೆದ್ದೆ ಮುದ್ದಿನ ಚೆಲುಮೆ
ಎನಿತೊ ನೋವು ಸುಂಕಗಳ ತೆತ್ತು ಸ್ಥಿರವಾಯಿತು ಅಸ್ಥಿ-ಮಾಂಸ-
ಮಜ್ಜಾಕಾಯ
ದಿನೆ ದಿನೇ ಭದ್ರವಾಯಿತು-ಹಸರಿಸಿತು ನಂಟು

ನಲಿವಿನ ಕೋಟಿ ಪುಳಕಗಳೆನೆ, ಚೆಲುವಿನ ಚಿರನೂತನ ಕೈಚಳಕವೆನೆ
ಮೈತುಂಬ ಎಲೆ‌ಎಲೆ ಕಲೆಯ ರೋಮಾಂಚನ
ತಾಯ್ತನದಿ ಹೂತು, ಕನಸು ನನಸಾಗಿ ಕಾತು, ಶಾಶ್ವತಿಯ ಸೇತು,
ಅನಂತ ರೂಪನ ರಸಪೂರಣ ಆಯಿತು ಗರ್ಭಧಾರಣ
ಸತ್ಫಲಗಳಿಂದ ಕೃತಕೃತ್ಯವಾಗಲು ಜೀವಮಾನ

ನಿನ್ನ ಮುತ್ತನುಂಡು ಬೆಳೆದಿದ್ದರೂ ಎಲ್ಲವೂ ಮುತ್ತಲ್ಲ,
ಅಲ್ಲಲ್ಲಿ ಕೆಲವಳಿದು, ಉಳಿದುದರಲ್ಲಿ ಜೊಳ್ಳುಗಳ ಕಳೆದು,
ಅಸಂಖ್ಯಾತವು ಅನೇಕ ಬಾಯಿಗಳ ಸೇರಿ,
ನಿನ್ನ ಬಾಳಗುರಿಯ ಪೂಣ್ಕೆಗಾಗುವುವು ಒಂದೆರಡು ಕಾಣ್ಕೆ
ಅಷ್ಟರಿಂದಲೇ ನೀನು ತೃಪ್ತೆ. ನಿನ್ನ ಬದುಕು ನಿತ್ಯ-ಸತ್ಯದ ರಸಕಾವ್ಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾಜಕಾರಣಿ
Next post ರಾತ್ರಿ ರಾಣಿಯರು

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

cheap jordans|wholesale air max|wholesale jordans|wholesale jewelry|wholesale jerseys