Home / ಕವನ / ಕವಿತೆ / ರಸಕಾವ್ಯ

ರಸಕಾವ್ಯ

ನಿನ್ನ ನೂರಾರು ಹಸ್ತಗಳು ತೂರಿ ನೆಲದೆದೆಯ ತಬ್ಬಿಹವು
ಆಹಾ ಅದೆಷ್ಟು ಆಳವೋ ನಿನ್ನ ಪ್ರೀತಿ
ಎಂದೋ ನೆಲವ ಮುದ್ದಿಸಿತು ಬೀಜ-ನೀನೆದ್ದೆ ಮುದ್ದಿನ ಚೆಲುಮೆ
ಎನಿತೊ ನೋವು ಸುಂಕಗಳ ತೆತ್ತು ಸ್ಥಿರವಾಯಿತು ಅಸ್ಥಿ-ಮಾಂಸ-
ಮಜ್ಜಾಕಾಯ
ದಿನೆ ದಿನೇ ಭದ್ರವಾಯಿತು-ಹಸರಿಸಿತು ನಂಟು

ನಲಿವಿನ ಕೋಟಿ ಪುಳಕಗಳೆನೆ, ಚೆಲುವಿನ ಚಿರನೂತನ ಕೈಚಳಕವೆನೆ
ಮೈತುಂಬ ಎಲೆ‌ಎಲೆ ಕಲೆಯ ರೋಮಾಂಚನ
ತಾಯ್ತನದಿ ಹೂತು, ಕನಸು ನನಸಾಗಿ ಕಾತು, ಶಾಶ್ವತಿಯ ಸೇತು,
ಅನಂತ ರೂಪನ ರಸಪೂರಣ ಆಯಿತು ಗರ್ಭಧಾರಣ
ಸತ್ಫಲಗಳಿಂದ ಕೃತಕೃತ್ಯವಾಗಲು ಜೀವಮಾನ

ನಿನ್ನ ಮುತ್ತನುಂಡು ಬೆಳೆದಿದ್ದರೂ ಎಲ್ಲವೂ ಮುತ್ತಲ್ಲ,
ಅಲ್ಲಲ್ಲಿ ಕೆಲವಳಿದು, ಉಳಿದುದರಲ್ಲಿ ಜೊಳ್ಳುಗಳ ಕಳೆದು,
ಅಸಂಖ್ಯಾತವು ಅನೇಕ ಬಾಯಿಗಳ ಸೇರಿ,
ನಿನ್ನ ಬಾಳಗುರಿಯ ಪೂಣ್ಕೆಗಾಗುವುವು ಒಂದೆರಡು ಕಾಣ್ಕೆ
ಅಷ್ಟರಿಂದಲೇ ನೀನು ತೃಪ್ತೆ. ನಿನ್ನ ಬದುಕು ನಿತ್ಯ-ಸತ್ಯದ ರಸಕಾವ್ಯ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...