Home / ಕವನ / ಕವಿತೆ / ಒಂದು ದಿನ…

ಒಂದು ದಿನ…

ಒಂದು ದಿನ… ಸಂಸ್ಥೆ ಬಸ್ಸುಗಳು ನಿಂತರೆ, ಏನಾಗಬಹುದು?
ಏನೆಲ್ಲ ಆಗಬಹುದು…
ಸಂಸ್ಥೆಗೆ ನಶ್ಟವಾಗಬಹುದು
ಪ್ರಯಾಣಿಕರಿಗೆ ಕಶ್ಟವಾಗಬಹುದು
ರಿಕ್ಷಾ, ಟೆಂಪೋ, ಮೆಟಡೋರ್‍, ಲಾರಿ, ಟ್ರಕ್ಕು, ಖಾಸಗಿ ಬಸ್ಸು…
ಎನೆಲ್ಲ ತುಂಬಿ, ಆ ದಿನದ, ಮೀಟರ್‍ ದರಗಳು,
ಮುಗಿಲು ಮುಟ್ಟಬಹುದು!
*

ಮತ್ತೇನಾಗಬಹುದು?
ಶಾಲೆ, ಕಾಲೇಜಿಗೆ, ಕುರುಡ, ಕುಂಟರಿಗೆ,
ಪತ್ರಿಕಾ ಪ್ರತಿನಿಧಿಗಳಿಗೆ, ಉಸಿರುಗಟ್ಟಿ
ವ್ಯಾಪಾರ, ವೈವಾಟು ತಲೆಕೆಳಗಾಗಿ,
ಸಾಮಾನ್ಯರ ಪಾಡು, ನರಕಯಾಥನೆಯಾಗಿ,
ಹಳ್ಳಿ ಹಳ್ಳಿಗಳೂ ದೂರ ಸರಿದು,
ಶಾಲೆ, ಕಾಲೇಜು, ಸಿನಿಮಾ, ನಾಟಕ, ನಾಡ ಕಛೇರಿಗಳೆಲ್ಲ…
ಒಣ ಒಣ! ಭಣ ಭಣಗುಟ್ಟಿ,
ಅಘೋಶಿತ ಬಂದ್ ನಿರ್ಮಾಣವಾಗಬಹುದು!
ಸೂರ್‍ಯ, ಚಂದ್ರ, ತಾರೆ, ಗ್ರಹಗಳೆಲ್ಲ ತ್ಯಾಪೆ ಮೊರೆಲಿ, ಮರೆಯಾಗಬಹುದು!
ಮುಪ್ಪಿನವರೂ ಒಪ್ಪದಲಿ, ನಡೆದೂ ಮನೆ ಸೇರಬಹುದು
ಅಂದು-ಟೀವಿ, ರೇಡಿಯೋ, ಪತ್ರಿಕೆಗಳಲ್ಲಿ ವಿಶೇಷ ಸುದ್ದಿಯೆನಿಸಿ,
ಜನ ಸೋಮಾರಿ ಕಟ್ಟೆ ಏರಿ,
ಜೊಂಪು ನಿದ್ದೆ ಸೇರಿ,
ಮೋಟು ಬೀಡಿಗೆ, ಹುಡುಕಾಡಬಹುದು!
*

ಮುಷ್ಕರದ ಬಿಸಿಗೆ; ಒಬ್ಬರ ಮೇಲೆ ಒಬ್ಬರು, ಬಿದ್ದು ಎದ್ದು,
ಇದ್ದುಬದ್ದುದ್ದನ್ನೆಲ್ಲ ಕಳಕೊಂಡು…
ಮುರುಕಲ ಗಾಡಿ, ಮನೆ ಮಾರು ಸೇರಲಿಬಹುದು.
ಗುಜರಿ ಸೈಕಲ್, ಬೈಕ್, ಕಾರು, ಜೀಪುಗಳೂ…
ಮರುಹುಟ್ಟು ಪಡೆದು, ಅಲ್ಲಲ್ಲಿ ಕೆಟ್ಟು ನಿಲ್ಲಬಹುದು!
ಖಾಸಗೆರಿಗೆ ಚೆಲ್ಲಾಟ,
ಪ್ರಯಾಣಿಕರಿಗೆ ಪ್ರಾಣ ಸಂಕಟವಾಗಿ,
ಗದ್ದುಗೆ ಹಿಡಿದವರಿಗೆ, ಕಂಟಕವಾಗಬಹುದು!
*

ಒಂದೇ ದಿನದಲಿ; ಖಾಸಗಿಕರಣ ಹಿಗ್ಗಿ ಹಿರೇಕಾಯಿಯಾಗಿ,
ಸಂಸ್ಥೆ ಮೇಲಿನ, ವಿಶ್ವಾಸ ಕುಗ್ಗಿ, ನರಸತ್ತ ನಾಮರ್ಧನನಂತೆ,
ಅದಲು ಬದಲು ಕಂಚೀ ಕದಲು, ಮಿಂಚಿನ ಮುಷ್ಕರದ ಜೊಂಪಿಗೇ
ರಸ್ತೆಗಳು ನಿಟ್ಟೂಸಿರ ಸೂಸಿ,
ನಿದ್ರೆಲ್ಲದೆ, ಮಗ್ಗುಲಿಗೆ ಮುಖವಿಟ್ಟು, ಮಲಗಬಹುದು!
*

ಒಂದು ದಿನ… ಸಂಸ್ಥೆ ಬಸ್ಸುಗಳು ನಿಂತರೆ…
ಏನೆಲ್ಲ ಆಗಬಹುದು?!
ಕಾಯಿಪಲ್ಲೆ, ಮಾರ್ಕೆಟ್ ರೇಟು, ರೇಸಿನಂತೆ
ರೈಜಾಗಿ, ಬಡಬಗ್ಗರ ಕನಸ್ಸುಗಳು ಬಿಕರಿಯಾಗಿ,
ಹುಬ್ಬಳ್ಳಿಯ… ಕಮರಿಪೇಟೆಯಾಗಬಹುದು!
*

ಸಂಸ್ಥೆ ಬಸ್ಸುಗಳು: ಒಂದು ದಿನ ನಿಂತರೆ,
ಇಶ್ಟೆಲ್ಲ ಆಗಬಹುದು!!
ಇದಕ್ಕಿಂತ ಮಿಗಿಲೂ ಆಗಬಹುದು
ಮುಗಿಲು ಕಳಚಿ ಬೀಳಲೂಬಹುದು
ಭೂಮಿ-ಆಕಾಶ ಒಂದಾಗಬಹುದು
ಜಲ ಬತ್ತಿ, ಬಡ ಕಾರ್ಮಿಕರು, ಬೀದಿ ಪಾಲಾಗಬಹುದು!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...