Home / ಕವನ / ಕವಿತೆ / ಒಂದು ದಿನ…

ಒಂದು ದಿನ…

ಒಂದು ದಿನ… ಸಂಸ್ಥೆ ಬಸ್ಸುಗಳು ನಿಂತರೆ, ಏನಾಗಬಹುದು?
ಏನೆಲ್ಲ ಆಗಬಹುದು…
ಸಂಸ್ಥೆಗೆ ನಶ್ಟವಾಗಬಹುದು
ಪ್ರಯಾಣಿಕರಿಗೆ ಕಶ್ಟವಾಗಬಹುದು
ರಿಕ್ಷಾ, ಟೆಂಪೋ, ಮೆಟಡೋರ್‍, ಲಾರಿ, ಟ್ರಕ್ಕು, ಖಾಸಗಿ ಬಸ್ಸು…
ಎನೆಲ್ಲ ತುಂಬಿ, ಆ ದಿನದ, ಮೀಟರ್‍ ದರಗಳು,
ಮುಗಿಲು ಮುಟ್ಟಬಹುದು!
*

ಮತ್ತೇನಾಗಬಹುದು?
ಶಾಲೆ, ಕಾಲೇಜಿಗೆ, ಕುರುಡ, ಕುಂಟರಿಗೆ,
ಪತ್ರಿಕಾ ಪ್ರತಿನಿಧಿಗಳಿಗೆ, ಉಸಿರುಗಟ್ಟಿ
ವ್ಯಾಪಾರ, ವೈವಾಟು ತಲೆಕೆಳಗಾಗಿ,
ಸಾಮಾನ್ಯರ ಪಾಡು, ನರಕಯಾಥನೆಯಾಗಿ,
ಹಳ್ಳಿ ಹಳ್ಳಿಗಳೂ ದೂರ ಸರಿದು,
ಶಾಲೆ, ಕಾಲೇಜು, ಸಿನಿಮಾ, ನಾಟಕ, ನಾಡ ಕಛೇರಿಗಳೆಲ್ಲ…
ಒಣ ಒಣ! ಭಣ ಭಣಗುಟ್ಟಿ,
ಅಘೋಶಿತ ಬಂದ್ ನಿರ್ಮಾಣವಾಗಬಹುದು!
ಸೂರ್‍ಯ, ಚಂದ್ರ, ತಾರೆ, ಗ್ರಹಗಳೆಲ್ಲ ತ್ಯಾಪೆ ಮೊರೆಲಿ, ಮರೆಯಾಗಬಹುದು!
ಮುಪ್ಪಿನವರೂ ಒಪ್ಪದಲಿ, ನಡೆದೂ ಮನೆ ಸೇರಬಹುದು
ಅಂದು-ಟೀವಿ, ರೇಡಿಯೋ, ಪತ್ರಿಕೆಗಳಲ್ಲಿ ವಿಶೇಷ ಸುದ್ದಿಯೆನಿಸಿ,
ಜನ ಸೋಮಾರಿ ಕಟ್ಟೆ ಏರಿ,
ಜೊಂಪು ನಿದ್ದೆ ಸೇರಿ,
ಮೋಟು ಬೀಡಿಗೆ, ಹುಡುಕಾಡಬಹುದು!
*

ಮುಷ್ಕರದ ಬಿಸಿಗೆ; ಒಬ್ಬರ ಮೇಲೆ ಒಬ್ಬರು, ಬಿದ್ದು ಎದ್ದು,
ಇದ್ದುಬದ್ದುದ್ದನ್ನೆಲ್ಲ ಕಳಕೊಂಡು…
ಮುರುಕಲ ಗಾಡಿ, ಮನೆ ಮಾರು ಸೇರಲಿಬಹುದು.
ಗುಜರಿ ಸೈಕಲ್, ಬೈಕ್, ಕಾರು, ಜೀಪುಗಳೂ…
ಮರುಹುಟ್ಟು ಪಡೆದು, ಅಲ್ಲಲ್ಲಿ ಕೆಟ್ಟು ನಿಲ್ಲಬಹುದು!
ಖಾಸಗೆರಿಗೆ ಚೆಲ್ಲಾಟ,
ಪ್ರಯಾಣಿಕರಿಗೆ ಪ್ರಾಣ ಸಂಕಟವಾಗಿ,
ಗದ್ದುಗೆ ಹಿಡಿದವರಿಗೆ, ಕಂಟಕವಾಗಬಹುದು!
*

ಒಂದೇ ದಿನದಲಿ; ಖಾಸಗಿಕರಣ ಹಿಗ್ಗಿ ಹಿರೇಕಾಯಿಯಾಗಿ,
ಸಂಸ್ಥೆ ಮೇಲಿನ, ವಿಶ್ವಾಸ ಕುಗ್ಗಿ, ನರಸತ್ತ ನಾಮರ್ಧನನಂತೆ,
ಅದಲು ಬದಲು ಕಂಚೀ ಕದಲು, ಮಿಂಚಿನ ಮುಷ್ಕರದ ಜೊಂಪಿಗೇ
ರಸ್ತೆಗಳು ನಿಟ್ಟೂಸಿರ ಸೂಸಿ,
ನಿದ್ರೆಲ್ಲದೆ, ಮಗ್ಗುಲಿಗೆ ಮುಖವಿಟ್ಟು, ಮಲಗಬಹುದು!
*

ಒಂದು ದಿನ… ಸಂಸ್ಥೆ ಬಸ್ಸುಗಳು ನಿಂತರೆ…
ಏನೆಲ್ಲ ಆಗಬಹುದು?!
ಕಾಯಿಪಲ್ಲೆ, ಮಾರ್ಕೆಟ್ ರೇಟು, ರೇಸಿನಂತೆ
ರೈಜಾಗಿ, ಬಡಬಗ್ಗರ ಕನಸ್ಸುಗಳು ಬಿಕರಿಯಾಗಿ,
ಹುಬ್ಬಳ್ಳಿಯ… ಕಮರಿಪೇಟೆಯಾಗಬಹುದು!
*

ಸಂಸ್ಥೆ ಬಸ್ಸುಗಳು: ಒಂದು ದಿನ ನಿಂತರೆ,
ಇಶ್ಟೆಲ್ಲ ಆಗಬಹುದು!!
ಇದಕ್ಕಿಂತ ಮಿಗಿಲೂ ಆಗಬಹುದು
ಮುಗಿಲು ಕಳಚಿ ಬೀಳಲೂಬಹುದು
ಭೂಮಿ-ಆಕಾಶ ಒಂದಾಗಬಹುದು
ಜಲ ಬತ್ತಿ, ಬಡ ಕಾರ್ಮಿಕರು, ಬೀದಿ ಪಾಲಾಗಬಹುದು!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...