Home / ಕವನ / ಕವಿತೆ / ಈ ಮಗುವಿಗೇನು ಗೊತ್ತು…?

ಈ ಮಗುವಿಗೇನು ಗೊತ್ತು…?

ಈ ಮಗುವಿಗೇನು ಗೊತ್ತು?
ನಗುವುದೊಂದು ಬಿಟ್ಟು!
ಬಣ್ಣಬಣ್ಣದ ಫ್ರಾಕುತೊಟ್ಟು
ಪಿಳಿ ಪಿಳಿ ಕಣ್ಣು ಬಿಟ್ಟು
ಹಗಲಿರುಳು-ಕಲ್ಲು, ಮಣ್ಣು, ಗೊಂಬೆಯೊಂದಿಗೆ ಆಡುವುದು ಗೊತ್ತು!
ರಾಮ, ರಹೀಮ, ಪಿಂಟು, ಶಾಂತಿ, ಮೇರಿ, ಬೇಗಂ…
ಎಲ್ಲ ತನ್ನವರೆಂದು ಹಿಗ್ಗುವುದು ಗೊತ್ತು!
ಈ ಮಗುವಿಗೇನು ಗೊತ್ತು?
ಎಲ್ಲರ ಕಂಡು, ನಗಬಾರದೆಂದೇನು ಗೊತ್ತು?

-೧-
ಈ ಜಾತಿ, ಮತ, ಭೇದ, ಭಾವ,
ಈ ಬಡವ, ಬಲ್ಲಿದ, ಮೇಲು-ಕೀಳು,
ಇದು ಮಠ, ಇಗರ್ಜಿ, ಮಸೀದಿ… ಬೇರೆ ಬೇರೆಂದೇನು ಗೊತ್ತು?
ನಿತ್ಯ ಪೂಜೆ; ಪ್ರಾರ್ಥನೆ ಮಾಡಿ, ಕವಾಲಿ ಹಾಡಿ,
ಬುದ್ಧ, ಬಸವ, ಯೇಸು, ಅಲ್ಲಾ-ಎಲ್ಲಾ… ಒಂದೆಂಬುದು ಗೊತ್ತು!
ಏನು ಕೇಳಿದರೂ… ಗಿಳಿಪಾಠ ಒಪ್ಪಿಸುವುದು ಗೊತ್ತು!
ಈ ಮಗುವಿಗೇನು ಗೊತ್ತು?
ನಾವು ಕಲಿಸಿದ್ದು ಕಲಿವುದು…
ಹೇಳಿದ್ದು ಮಾಡುವುದು…
ಎಲ್ಲರ ಬಳಿ ಹೋಗಬಾರದೆಂದೇನು ಗೊತ್ತು?
ಬೆಕ್ಕು, ನಾಯಿ, ಕುರಿನ… ಮುದ್ದಿಸುವುದೊಂದೇ ಗೊತ್ತು?
ಈ ಊರು, ಕೇರಿ… ಬೇರೆ ಬೇರೆ! ಒಳಿತು, ಕೆಡುಕೆಂದೇನು ಗೊತ್ತು?

-೨-
ಮಗು ಕೇಳಿದ್ದಕ್ಕೆಲ್ಲ ಉತ್ತರಿಸಿ…
ಮುಗ್ಧ ನಗು ನಕ್ಕು ಸರಿತಪ್ಪುಗಳ ವಿಂಗಡಿಸಿ,
ನ್ಯಾಯದ ತಕ್ಕಡಿ ಎತ್ತಿ ಹಿಡಿದು
ಗಿಣೀಗೆ ಸಾಕಿದಂಗೆ ಜೋಪಾನ ಮಾಡುವಷ್ಟು…
ಪುರುಸೊತ್ತೀಗ ದೊಡ್ಡವರಿಗೆಲ್ಲಿದೆ?

ಮಗುವಿನ ಮುಂದೆ: ದೊಡ್ಡವರ ನಗು ಬಂಗಾರವಾಗಿ…
ಸುಳ್ಳು, ವಂಚನೆ, ದಡ್ಡತನಗಳೇ ಸಿಂಗಾರವಾಗಿ…
ಸಿನಿಮಾ, ನಾಟಕ, ಧಾರವಾಹಿಗಳೇ ಆದರ್ಶವಾಗಿ…
ಈ ನಮ್ಮ ಸಂಸ್ಕೃತಿ, ನಾಗರಿಕತೆನ ಗಾಳಿಗೆ ತೂರಿರುವುದು ಗೊತ್ತು!

-೩-
ಈ ಮಗುವಿಗೇನು ಗೊತ್ತೆಂದು?
ಗತ್ತಿಲಿ ತಿರುಗುವುದು ಬಿಟ್ಟುಬಿಡಿ!
ದೊಡ್ಡವರಿಗಿಲ್ಲ ದೊಡ್ಡ ಮನಸ್ಸು…
ಕನಸುಗಳ ಚಿವುಟಿ, ತಲೆ ಮೇಲೆ ಹೊರೆಹೊರಿಸಿ…
ಲಕ್ಷಣರೇಖೆ ಎಳೆದು, ಪ್ರಚಾರಕ್ಕೆ ಹಪಹಪಿಸುವುದೇ…
ದೊಡ್ಡವರ ಸಾಧನೆಯೇನು??
ದೊಡ್ಡವರ ಇಂಥ ಕಲಿಕೆ, ಮಗುವಿಗದು ಸೊನ್ನೆ!
ಅದರ ಪಾಡಿಗೆ ಅದನು ಬಿಟ್ಟುಬಿಡಿ
ಅದು ಎದ್ದು, ಬಿದ್ದು, ಜಗವ ಗೆಲ್ಲುವ ಆತ್ಮವಿಶ್ವಾಸ!

-೪-
ಹಕ್ಕಿಯಂಗೆ ಹಾರಿ, ಮೀನಿನಂಗೆ ಈಜಿ
ನವಿಲಿನಂಗೆ ಕುಣಿಕುಣಿದು, ಕುಪ್ಪಳಿಸಲಿಬಿಡಿ!
ಏನಾಗಬೇಕೋ ಅದಾಗುವುದು! ಚಿಂತೆಬಿಡಿ!
ಈ ಪುಟ್ಟ ಮಗುವಿಗೇನು ಗೊತ್ತೆನಬೇಡಿ?
ಈ ಮಗು; ಈ ಜಗದ; ಸುಂದರ ಕಣ್ಣು!
‘ಮೂರು ವರ್ಷಕೆ, ನೂರು ವರ್ಷದ ಬುದ್ಧಿ’ ಅದಕೆ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...