Home / ಕವನ / ಕವಿತೆ / ಈ ಮಗುವಿಗೇನು ಗೊತ್ತು…?

ಈ ಮಗುವಿಗೇನು ಗೊತ್ತು…?

ಈ ಮಗುವಿಗೇನು ಗೊತ್ತು?
ನಗುವುದೊಂದು ಬಿಟ್ಟು!
ಬಣ್ಣಬಣ್ಣದ ಫ್ರಾಕುತೊಟ್ಟು
ಪಿಳಿ ಪಿಳಿ ಕಣ್ಣು ಬಿಟ್ಟು
ಹಗಲಿರುಳು-ಕಲ್ಲು, ಮಣ್ಣು, ಗೊಂಬೆಯೊಂದಿಗೆ ಆಡುವುದು ಗೊತ್ತು!
ರಾಮ, ರಹೀಮ, ಪಿಂಟು, ಶಾಂತಿ, ಮೇರಿ, ಬೇಗಂ…
ಎಲ್ಲ ತನ್ನವರೆಂದು ಹಿಗ್ಗುವುದು ಗೊತ್ತು!
ಈ ಮಗುವಿಗೇನು ಗೊತ್ತು?
ಎಲ್ಲರ ಕಂಡು, ನಗಬಾರದೆಂದೇನು ಗೊತ್ತು?

-೧-
ಈ ಜಾತಿ, ಮತ, ಭೇದ, ಭಾವ,
ಈ ಬಡವ, ಬಲ್ಲಿದ, ಮೇಲು-ಕೀಳು,
ಇದು ಮಠ, ಇಗರ್ಜಿ, ಮಸೀದಿ… ಬೇರೆ ಬೇರೆಂದೇನು ಗೊತ್ತು?
ನಿತ್ಯ ಪೂಜೆ; ಪ್ರಾರ್ಥನೆ ಮಾಡಿ, ಕವಾಲಿ ಹಾಡಿ,
ಬುದ್ಧ, ಬಸವ, ಯೇಸು, ಅಲ್ಲಾ-ಎಲ್ಲಾ… ಒಂದೆಂಬುದು ಗೊತ್ತು!
ಏನು ಕೇಳಿದರೂ… ಗಿಳಿಪಾಠ ಒಪ್ಪಿಸುವುದು ಗೊತ್ತು!
ಈ ಮಗುವಿಗೇನು ಗೊತ್ತು?
ನಾವು ಕಲಿಸಿದ್ದು ಕಲಿವುದು…
ಹೇಳಿದ್ದು ಮಾಡುವುದು…
ಎಲ್ಲರ ಬಳಿ ಹೋಗಬಾರದೆಂದೇನು ಗೊತ್ತು?
ಬೆಕ್ಕು, ನಾಯಿ, ಕುರಿನ… ಮುದ್ದಿಸುವುದೊಂದೇ ಗೊತ್ತು?
ಈ ಊರು, ಕೇರಿ… ಬೇರೆ ಬೇರೆ! ಒಳಿತು, ಕೆಡುಕೆಂದೇನು ಗೊತ್ತು?

-೨-
ಮಗು ಕೇಳಿದ್ದಕ್ಕೆಲ್ಲ ಉತ್ತರಿಸಿ…
ಮುಗ್ಧ ನಗು ನಕ್ಕು ಸರಿತಪ್ಪುಗಳ ವಿಂಗಡಿಸಿ,
ನ್ಯಾಯದ ತಕ್ಕಡಿ ಎತ್ತಿ ಹಿಡಿದು
ಗಿಣೀಗೆ ಸಾಕಿದಂಗೆ ಜೋಪಾನ ಮಾಡುವಷ್ಟು…
ಪುರುಸೊತ್ತೀಗ ದೊಡ್ಡವರಿಗೆಲ್ಲಿದೆ?

ಮಗುವಿನ ಮುಂದೆ: ದೊಡ್ಡವರ ನಗು ಬಂಗಾರವಾಗಿ…
ಸುಳ್ಳು, ವಂಚನೆ, ದಡ್ಡತನಗಳೇ ಸಿಂಗಾರವಾಗಿ…
ಸಿನಿಮಾ, ನಾಟಕ, ಧಾರವಾಹಿಗಳೇ ಆದರ್ಶವಾಗಿ…
ಈ ನಮ್ಮ ಸಂಸ್ಕೃತಿ, ನಾಗರಿಕತೆನ ಗಾಳಿಗೆ ತೂರಿರುವುದು ಗೊತ್ತು!

-೩-
ಈ ಮಗುವಿಗೇನು ಗೊತ್ತೆಂದು?
ಗತ್ತಿಲಿ ತಿರುಗುವುದು ಬಿಟ್ಟುಬಿಡಿ!
ದೊಡ್ಡವರಿಗಿಲ್ಲ ದೊಡ್ಡ ಮನಸ್ಸು…
ಕನಸುಗಳ ಚಿವುಟಿ, ತಲೆ ಮೇಲೆ ಹೊರೆಹೊರಿಸಿ…
ಲಕ್ಷಣರೇಖೆ ಎಳೆದು, ಪ್ರಚಾರಕ್ಕೆ ಹಪಹಪಿಸುವುದೇ…
ದೊಡ್ಡವರ ಸಾಧನೆಯೇನು??
ದೊಡ್ಡವರ ಇಂಥ ಕಲಿಕೆ, ಮಗುವಿಗದು ಸೊನ್ನೆ!
ಅದರ ಪಾಡಿಗೆ ಅದನು ಬಿಟ್ಟುಬಿಡಿ
ಅದು ಎದ್ದು, ಬಿದ್ದು, ಜಗವ ಗೆಲ್ಲುವ ಆತ್ಮವಿಶ್ವಾಸ!

-೪-
ಹಕ್ಕಿಯಂಗೆ ಹಾರಿ, ಮೀನಿನಂಗೆ ಈಜಿ
ನವಿಲಿನಂಗೆ ಕುಣಿಕುಣಿದು, ಕುಪ್ಪಳಿಸಲಿಬಿಡಿ!
ಏನಾಗಬೇಕೋ ಅದಾಗುವುದು! ಚಿಂತೆಬಿಡಿ!
ಈ ಪುಟ್ಟ ಮಗುವಿಗೇನು ಗೊತ್ತೆನಬೇಡಿ?
ಈ ಮಗು; ಈ ಜಗದ; ಸುಂದರ ಕಣ್ಣು!
‘ಮೂರು ವರ್ಷಕೆ, ನೂರು ವರ್ಷದ ಬುದ್ಧಿ’ ಅದಕೆ!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...