Home / ಕವನ / ಕವಿತೆ / ದೇವರಿದ್ದಾನೆ

ದೇವರಿದ್ದಾನೆ

-೧-
ದೇವರಿದ್ದಾನೆ ನನ್ನೂರ ಶಿವರಾತ್ರಿಯಲಿ, ಕಳ್ಳಕಾಕರ ನಿರ್ಭಯದಲಿ,
ಶವಯಾತ್ರೆಗೆ ಮೇಲುಕೀಳು, ಭೇದವಿಲ್ಲದ ಮನುಜರಲಿ
ಮೇರು ನಟ, ನಟಿಯರಲಿ, ಗುರುಹಿರಿಯರ, ಆಶೀರ್ವಾದದಲಿ
ಸ್ನೇಹ, ಪ್ರೀತಿ, ಕರುಣೆ, ಮಾತಿನಲಿ, ದುಕ್ಕದಲಿ, ಬಡವರಲಿ, ಮೌನದಲಿ
ಸತ್ಯ, ಶಾಂತಿ, ತ್ಯಾಗದಿರಿಮೆಲಿ, ಊರುಕೇರಿ ಒಂದೆಂಬ
ಸಂತೃಪ್ತಿಲಿ ದೇವರಿದ್ದಾನೆ.
ಇದ್ದಾನೆ: ಕಲ್ಲಲ್ಲಿ, ನನ್ನಲ್ಲಿ, ನಿನ್ನಲ್ಲಿ ಎಲ್ಲೆಲ್ಲೂ ಇದ್ದಾನೆ!

-೨-
ನನ್ನೂರ ಸೂರ್ಯೋದಯ ಸೂರ್ಯಾಸ್ತಮಾನದಲಿ
ಹಾಲು ಚೆಲ್ಲಿದ ತಿಂಗಳ ಬೆಳಕಲಿ
ತಂಗಳು ಮುದ್ದೆಗೆ, ತಂಪು ನಿದ್ದೆಯ, ಸವಿಗನಸಲಿ
ಸೆರಗಿನ ಮರೆಲಿ ಮೊಲೆಯುಣಿಸುವ ಅಮ್ಮಂದಿರಲಿ
ಗಾಳಿಪಟದಿ ತೇಲುವ ರಣಹದ್ದಿನಲಿ
ಬಡವರ ಹಸಿವಲಿ, ಶ್ರಮದ ದುಡಿಮೆಲಿ
ಮುಸ್ಸಂಜೆ ಹೊತ್ತಲ್ಲಿ, ದೀಪಮುಡಿಸುವ ಕೈಗಳಲ್ಲಿ, ದೇವರಿದ್ದಾನೆ.

-೩-
ದೇವರಿದ್ದಾನೆ ಮುಗ್ಧ ಮಗುವಿನ ನಗುವಲಿ
ಚೆಂಗುಲಾಬಿಯ ತುಟಿ ಸವಿ ಜೇನಲಿ
ತೊಂಡೆ ಹಣ್ಣಿನ ಚೆಲುವಲಿ, ಹಿಮಮಣಿ ಸಾಲಲಿ
ಮಲ್ಲಿಗೆ ಮೊಗ್ಗಿನ ಹಿಗ್ಗಲಿ, ಪೈರು ಪಚ್ಚೆ ಹಚ್ಚಹಸಿರಿನ ಸಿರಿಲಿ
ಕೆರೆಕುಂಟೆ ಕೋಡಿ ಬೀಳುವ ಸುಭಿಕ್ಷೆಲಿ
ರಾಶಿ ರಾಶಿ ಬೆಳೆವ ಹಣ್ಣು ಹೂವು ಕಾಯಲ್ಲಿ
ಇರುವೆ ಸಾಲಿಗೆ, ಸಕ್ಕರೆ ಉಣಿಸುವ, ಕೊಡಗೈಲಿ ದೇವರಿದ್ದಾನೆ.

-೪-
ದೇವರಿದ್ದಾನೆ:
ಅಣು, ರೇಣು, ತೃಣ ಕಾಷ್ಟಲಿ,
ಬಡಬಗ್ಗರ ಎದೆಗೂಡಲಿ,
ತಿನ್ನುವ ಅನ್ನ, ಕುಡಿವ ನೀರಲಿ,
ಜ್ಞಾನ, ಭಕ್ತಿ, ಯೋಗ, ಭೋಗದಲಿ,
ಬರೆವ ಕವನದಲಿ… ದೇವರಿದ್ದಾನೆ!

-೫-
ದೇವರಿಲ್ಲನ್ನುವ ನಾಸ್ತಿಕರೆದೆಲಿ ದೇವರುಂಟು!
ಊರಲಿ, ಕೇರೀಲಿ, ಮರ, ಗಿಡ, ಮಳೆ, ಗಾಳಿಲಿ ದೇವರುಂಟು,
ದೇವರಿಲ್ಲದಾ ಮೇಲೆ, ಮನುಶ್ಯರೆಲ್ಲಿ?!
ಬರೀ ಕಾಡು ಮೃಗ, ಪಕ್ಷಿ, ಜಂತು, ಪಾಪ ಕೂಪ, ತುಂಬಿ ತುಳುಕುತ್ತಿತ್ತು!
ಅಂಜಿಕೆಯಿಲ್ಲದೆ, ಜನ ದನಗಳಾಗುತ್ತಿದ್ದರು! ಬಲು ಪಾಪಿಗಳಾಗುತ್ತಿದ್ದರು!
ದೇವರಿದ್ದಾನೆಂಬಾ ಬಲು ನಂಬಿಕೆಲಿ, ಸ್ವಲ್ಪ ನೆಮ್ಮದಿ ಕಾಣಲಿದ್ದಾರೆ….
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...