Home / ಕವನ / ಕವಿತೆ / ದೇವರಿದ್ದಾನೆ

ದೇವರಿದ್ದಾನೆ

-೧-
ದೇವರಿದ್ದಾನೆ ನನ್ನೂರ ಶಿವರಾತ್ರಿಯಲಿ, ಕಳ್ಳಕಾಕರ ನಿರ್ಭಯದಲಿ,
ಶವಯಾತ್ರೆಗೆ ಮೇಲುಕೀಳು, ಭೇದವಿಲ್ಲದ ಮನುಜರಲಿ
ಮೇರು ನಟ, ನಟಿಯರಲಿ, ಗುರುಹಿರಿಯರ, ಆಶೀರ್ವಾದದಲಿ
ಸ್ನೇಹ, ಪ್ರೀತಿ, ಕರುಣೆ, ಮಾತಿನಲಿ, ದುಕ್ಕದಲಿ, ಬಡವರಲಿ, ಮೌನದಲಿ
ಸತ್ಯ, ಶಾಂತಿ, ತ್ಯಾಗದಿರಿಮೆಲಿ, ಊರುಕೇರಿ ಒಂದೆಂಬ
ಸಂತೃಪ್ತಿಲಿ ದೇವರಿದ್ದಾನೆ.
ಇದ್ದಾನೆ: ಕಲ್ಲಲ್ಲಿ, ನನ್ನಲ್ಲಿ, ನಿನ್ನಲ್ಲಿ ಎಲ್ಲೆಲ್ಲೂ ಇದ್ದಾನೆ!

-೨-
ನನ್ನೂರ ಸೂರ್ಯೋದಯ ಸೂರ್ಯಾಸ್ತಮಾನದಲಿ
ಹಾಲು ಚೆಲ್ಲಿದ ತಿಂಗಳ ಬೆಳಕಲಿ
ತಂಗಳು ಮುದ್ದೆಗೆ, ತಂಪು ನಿದ್ದೆಯ, ಸವಿಗನಸಲಿ
ಸೆರಗಿನ ಮರೆಲಿ ಮೊಲೆಯುಣಿಸುವ ಅಮ್ಮಂದಿರಲಿ
ಗಾಳಿಪಟದಿ ತೇಲುವ ರಣಹದ್ದಿನಲಿ
ಬಡವರ ಹಸಿವಲಿ, ಶ್ರಮದ ದುಡಿಮೆಲಿ
ಮುಸ್ಸಂಜೆ ಹೊತ್ತಲ್ಲಿ, ದೀಪಮುಡಿಸುವ ಕೈಗಳಲ್ಲಿ, ದೇವರಿದ್ದಾನೆ.

-೩-
ದೇವರಿದ್ದಾನೆ ಮುಗ್ಧ ಮಗುವಿನ ನಗುವಲಿ
ಚೆಂಗುಲಾಬಿಯ ತುಟಿ ಸವಿ ಜೇನಲಿ
ತೊಂಡೆ ಹಣ್ಣಿನ ಚೆಲುವಲಿ, ಹಿಮಮಣಿ ಸಾಲಲಿ
ಮಲ್ಲಿಗೆ ಮೊಗ್ಗಿನ ಹಿಗ್ಗಲಿ, ಪೈರು ಪಚ್ಚೆ ಹಚ್ಚಹಸಿರಿನ ಸಿರಿಲಿ
ಕೆರೆಕುಂಟೆ ಕೋಡಿ ಬೀಳುವ ಸುಭಿಕ್ಷೆಲಿ
ರಾಶಿ ರಾಶಿ ಬೆಳೆವ ಹಣ್ಣು ಹೂವು ಕಾಯಲ್ಲಿ
ಇರುವೆ ಸಾಲಿಗೆ, ಸಕ್ಕರೆ ಉಣಿಸುವ, ಕೊಡಗೈಲಿ ದೇವರಿದ್ದಾನೆ.

-೪-
ದೇವರಿದ್ದಾನೆ:
ಅಣು, ರೇಣು, ತೃಣ ಕಾಷ್ಟಲಿ,
ಬಡಬಗ್ಗರ ಎದೆಗೂಡಲಿ,
ತಿನ್ನುವ ಅನ್ನ, ಕುಡಿವ ನೀರಲಿ,
ಜ್ಞಾನ, ಭಕ್ತಿ, ಯೋಗ, ಭೋಗದಲಿ,
ಬರೆವ ಕವನದಲಿ… ದೇವರಿದ್ದಾನೆ!

-೫-
ದೇವರಿಲ್ಲನ್ನುವ ನಾಸ್ತಿಕರೆದೆಲಿ ದೇವರುಂಟು!
ಊರಲಿ, ಕೇರೀಲಿ, ಮರ, ಗಿಡ, ಮಳೆ, ಗಾಳಿಲಿ ದೇವರುಂಟು,
ದೇವರಿಲ್ಲದಾ ಮೇಲೆ, ಮನುಶ್ಯರೆಲ್ಲಿ?!
ಬರೀ ಕಾಡು ಮೃಗ, ಪಕ್ಷಿ, ಜಂತು, ಪಾಪ ಕೂಪ, ತುಂಬಿ ತುಳುಕುತ್ತಿತ್ತು!
ಅಂಜಿಕೆಯಿಲ್ಲದೆ, ಜನ ದನಗಳಾಗುತ್ತಿದ್ದರು! ಬಲು ಪಾಪಿಗಳಾಗುತ್ತಿದ್ದರು!
ದೇವರಿದ್ದಾನೆಂಬಾ ಬಲು ನಂಬಿಕೆಲಿ, ಸ್ವಲ್ಪ ನೆಮ್ಮದಿ ಕಾಣಲಿದ್ದಾರೆ….
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...