ಕಷ್ಟದ ಕೆಲಸ

ಎಷ್ಟೊಂದ್ ಕಷ್ಟ ನನ್ನೀ ಕೆಲ್ಸ
ಕಪ್ಪೆಗ್ಳು ತಕ್ಕಡಿಲಿ ಕೂತ್ಕೊಳ್ತ ಇಲ್ಲ
ಅಂತಾನೆ ಪುಟ್ಟ ಕಿಟ್ಟನಿಗೆ

ಎಷ್ಟೊಂದ್ ಕೆಲ್ಸ ನನ್ನೀ ಕೆಲ್ಸ
ತೆರೆಗಳು ಸುಮ್ಮನೆ ನಿಂತ್ಕೊಳ್ತ ಇಲ್ಲ
ಅಂತಾನೆ ಕಿಟ್ಟ ಪುಟ್ಟನಿಗೆ

ಕೇಳ್ಸ್ಕೊಂಡ ದೇವ್ರು ಪ್ರತ್ಯಕ್ಷನಾಗಿ
ಬದಲಾಯ್ಸಿಕೊಳ್ಳಿ ಅಂತಾನೆ

ಎಲ್ಲಾದ್ರು ಉಂಟೇ ಅವರವ್ರ ಕೆಲ್ಸ
ಅವರವ್ರಿಗಿಷ್ಟಾನೇ ದೇವ್ರೇ

ಮುಂದಿನ ಜನುಮದಿ ನನ್ನ
ಕಪ್ಪೆನ ಮಾಡು
ಅಂತಾನೆ ಪುಟ್ಟ
ಮುಂದಿನ ಜನುಮದಿ ನನ್ನ
ತೆರೆಯನು ಮಾಡು
ಅಂತಾನೆ ಕಿಟ್ಟ

ಅಂದ್ಕೊಂಡು ಇಬ್ರೂ
ತಬ್ಕೊಂಡು ಒಬ್ಬೊಬ್ರ
ಕುಂತಾರೆ ತಿಂಡಿಗೆ ಕಾಯ್ತ
ಇತ್ತ
ಕಪ್ಪೆಗಳಿವೆ ಕಪ್ಪೆಗಳಷ್ಟಕ್ಕೇ
ತೆರೆಗಳಿವೆ ತೆರೆಗಳಷ್ಟಕ್ಕೇ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭ್ರಾತೃ ಕವಿ
Next post ಹಸಿರು

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

cheap jordans|wholesale air max|wholesale jordans|wholesale jewelry|wholesale jerseys