ಭ್ರಾತೃ ಕವಿ

ಶ್ರೀಮಾನ್ ದ ರಾ ಬೇಂದ್ರೆಯವರಿಗೆ

ದೋಷರಾಹಿತ್ಯದಾ
ಕಲ್ಪನಾ ರಾಜ್ಯದೊಳು
ಸಗ್ಗದೂಟವನುಣುವ
ಹಿರಿಯ ಕಬ್ಬಿಗನೇ

ನಿನ್ನ ಕಾಣಲು ಬಯಸಿ
ಹಲವಾರು ದಿನಗಳಿಂ
ಇಣಿಕಿಣಿಕಿ ನೋಡುತಿದೆ
ಈ ಸಣ್ಣ ಮನವು

ಕವಿಯ ಬರೆಹವ ಕಂಡ
ರಸಬಿಂದುಗಳ ಸವಿಯೆ
ಸುಳಿಯುತಿದೆ ಭೃಂಗದೊಲು
ಭಾವವರಿಯದೆಯೆ

ಗುರಿಯ ನೆಟ್ಟಿಹ ತಾಣ
ದೊಗಟೆಯೊಡೆಯದೆ
ಅಣುವು ಧಾವಿಸಿದೆ
ದಿಕ್ಕು ತಪ್ಪಿ

ಕರೆಯದಾವುದೊ ಒಂದು
ಕೇಳುತಿದೆ ದೂರದೊಳು
ಬಾಳಿನೆಲೆಗಳ ನೆಗೆದು
ಬಾ ತಂಗಿಯೆಂದು

ಹರಿಯುತಿದೆ ಮಧುರಸದ
ಝರಿ ಎಲ್ಲೊ ಭೋರ್ಗರೆದು
ಬಳಿಸಾರಲಾಗದಾ
ಬಂಧನದ ಆಚೆ

ಮೇಳ ತಾಳದ ದಿವ್ಯ
ಝೇಂಕೃತದ ನಾದಗಳು
ಕೇಳಿ ಕೇಳಿಸದಾಗಿ
ಸಾಗುತಿಹುವು

ಭಾವಗಳ ಪರ್ವತದ
ಶ್ರೇಣಿಗಳ ಶಿಖರಗಳು
ಕಂಡು ಕಾಣಿಸದಾಗಿ
ಮೆರೆಯುತಿಹುವು

ಜಡ ಮನಕೆ ಚೇತನವ
ಕಲ್ಪಿಸುವ ಮಾನ್ಯ
ತೇಲಿಬಿಡು ಆ ನಿನ್ನ
ಭಾವಗಳನೊಮ್ಮೆ

ಆಳದೊಳು ಹೂಳಿರುವ ವಿಷಯಗಳ ಬಯಲಿಗಿಡು
ಮಾರ್ಗವಾವುದೊ ಕಂಡು ಮೆಲ್ಲನೆಯೆ
ಸಾಗುವಳು ಶಾಂತಿಯಿಂದೀ
ನಿನ್ನ ತಂಗಿ ಜನಕಜೆಯು
*****
೧೨-೦೧-೧೯೪೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀವನ ಪಟ
Next post ಕಷ್ಟದ ಕೆಲಸ

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

cheap jordans|wholesale air max|wholesale jordans|wholesale jewelry|wholesale jerseys