ಜೀವನ ಪಟ

ಜೀವನ: ಬಣ್ಣ ಬಣ್ಣದಾ ಬಾಲಂಗೋಚಿ!
ಗಾಳಿಲಿ, ತೇಲಿ ತೇಲಿ ಸಾಗಿದೆ, ಪಟ ಪಟನೇ ಜೀವನಪಟದಿ-
ಬದುಕು ಭಾರ! ದಾರದಲಿ ಸೂತ್ರವಿದೆ, ಜೀವವಿದೆ, ಮರೀಬೇಡ!
ಜಗಕೆ ಸೂತ್ರವುಂಟು, ಜೀವ ಉಂಟು ನಂಬಬೇಡ.
*

ಹಾರಿ ಹಾರಿ, ರೆಕ್ಕೆ ಬಂದ, ಹಕ್ಕಿಯಾಗಲು ಸಾಧ್ಯವೇನು?
ತೇಲಿ ತೇಲಿ, ಕಡಲ ಮೇಲೆ, ಹಡುಗು ನೀ… ಎಂದರೇನು?
ಮೀನು ಮಿನುಗಿ, ಬಾನ ಚುಕ್ಕಿಯಾಗಿ, ಸಾಮಾನ್ಯನೇನು?
ಸಪ್ತ ಸಾಗರಗಳ, ಈಜುವುದು ಪುಟ್ಟ, ಮೀನೆಂದರೇನು?
ಜಗದ ಸೂತ್ರದಾರನ, ಕೈಗೊಂಬೆ ನೀ… ನಂಬುವೆಯೇನು?!
*

ಬಣ್ಣ ಬಣ್ಣದ, ಜಗದ ಕಣ್ಣ ಬಣ್ಣ, ತುಂಬಿದಾ ಅಣ್ಣನೆಲ್ಲಿಹನು??
ಹಾವಿನಂದದಿ, ತೆವಳುತಾ ಸಾಗಿಹ, ಜೀವನ ಪಟವೇ…
ಮುಗಿಲ ಮಾರಿಗೆ, ರಂಗು ತಂದ, ನಿಮಿಷವೇ…
ಸೂತ್ರದಾರನ ಆಟ ನಿಲ್ಲಿಸಿರೆ, ನೀ ಪಾತಾಳವೇ…
*

ಮುಂಜಾನೆ ಮಂಜಿನಂತೆ, ಜೀವನ ಪಟವು!
ಗುಡುಗು, ಸಿಡಿಲು, ಮಳೆ, ಗಾಳಿ, ಮಿಂಚಿನಂತೆ ಜೀವನ!
ಏರುಪೇರು, ನೀರ ಗುಳ್ಳೆ, ಹಗಲುರಾತ್ರಿ ನಿರಂತರ!
ಕಾಮನ ಬಿಲ್ಲಿನಂದದಿ, ಕ್ಷಣಿಕ ಜೀವನ ಯಾತ್ರೆಯು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧಾರಿಣಿ
Next post ಭ್ರಾತೃ ಕವಿ

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…