ಬದುಕು ಬಂಡಿಹಬ್ಬ
ಹಂಗಿಸುವವ ಕೊರಡುರಾಶಿಗಳ ದಿಬ್ಬ
ಕಾಮ, ಕ್ರೋಧ, ಲೋಭ ಮೋಹ
ಮದ, ಮತ್ಸರಗಳು ಅರಿಗಳಲ್ಲ
ಅರಿತುಕೊಳ್ಳಲು ಆಯುಧಗಳು.
ನಿಮ್ಮ ಆತ್ಮಗಮನಕ್ಕೆ ಬದುಕಿಗೆ
ಕಾಮನೆಗಳಿಲ್ಲದಿರೆ ಕಾಡು ಈ ಮನೆ
ಕಾಮವೆಂದರೆ ವೃಷ್ಟಿ
ಸಂಕುಲ ಜೀವ ಸೃಷ್ಟಿ
ಮೋಹವೆಂಬುದು ಮಧುರ
ಬೇಡವೆಂದವ ಮರುಳ
ಕ್ರೋಧಕ್ಕೆ ಕೆಂಗಣ್ಣು ಯಾಕೆ?
ಬಿಸಿಗೆ ತಾನೆ ಕರಗುವುದು ತುಪ್ಪ.
ಲೋಭ ಲಾಭಬಲ
ಇರಲೇಳು ಬದುಕು ಅರ್ಥಬಲ ಸಬಲ
ಮದವಿದ್ದರೆ ಮೆರಗು
ಅದಕೆ ಬೇಡ ಮಂಥನ ಚಿಂತನ
ಒಣ ಹರಟೆ ಒಗರು.
ಮತ್ಸರವ ಮರೆಯದೆ
ಸವಿದು ನೋಡ ಮಿತಿಯಲಿ
ಷಡ್ವರ್ಗಗಳ ಸಹಜತೆಯ ಅಂಕೆಯಲಿ
ಬದುಕು ಅಮೃತದ ವಾಟೆ
*****
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು: ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮ ಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯ ದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.