Home / ಕವನ / ಕವಿತೆ / ಕೂಲಿಗಳು ನಾವು

ಕೂಲಿಗಳು ನಾವು

ಹಿಂದು, ಮುಸ್ಲಿಂ, ಕ್ರಿಶ್ಚಿಯನ್
ಅವರಲ್ಲಿ ಮಾನವರನ್ನು ಹುಡುಕುತ್ತಲಿರುವೆ.
ಈ ನೆಲದ ಮಣ್ಣಲ್ಲಿ ಮಣ್ಣಾಗಿ ಹೋದ
ಅವರ ರಕ್ತದ ಕೆಂಪು ಕಲೆಗಳ ಹುಡುಕುತಲಿರುವೆ.

ದೇಶದ ಯಾವ ಮೂಲೆಯಲ್ಲಾದರೂ
ಯಾರೋ ಬಾಂಬು ಸಿಡಿದರೂ ಸಾಕು,
ಅಲ್ಲಿ ನನ್ನದೇ ಹೆಸರು ಮೊದಲು
ಏನು ಮಾಡಲಿ ಬಾಳು ಹಸನಾಗಲು
ರಿಕ್ಷಾ ಹೊಡೆದು ಹೊಟ್ಟೆ ಹೊರೆಯುತ್ತಿರುವೆ.

ವಿಶ್ವದ ಯಾವ ಮುಲೆಯಲ್ಲಾದರೂ
ಯಾರೋ ಕೋಮು ದಂಗೆ ಮಾಡಿದರೂ ಸರಿಯೇ
ಅಲ್ಲಿ ನನ್ನ ಹೆಸರೇ ಮೊದಲು
ಏನು ಮಾಡಲಿ ಹೊಟ್ಟೆಯ ಹಸಿವು ಹಿಂಗಿಸಲು
ದಣಿಯ ಹೊಲದಲ್ಲಿ ನೇಗಿಲು ಹೂಡಿರುವೆ.

ಲೋಕದ ಯಾವ ಮೂಲೆಯಲ್ಲಾದರೂ
ಯಾರೋ ಜನಾಂಗೀಯ ದ್ವೇಷದ ಬೆಂಕಿ ಹಚ್ಚಿದರೂ
ಅಲ್ಲಿ ನನ್ನ ಹೆಸರೇ ಮೊದಲು ಬರುವುದು
ಬೆಂಕಿಯಲಿ ಮೊದಲು ಬೇಯುವವರು ನಾವು.
ಏನು ಮಾಡುವುದು ಬಡತನದಲ್ಲಿ ಬೆಂದವರು
ಹೋಟೆಲ್, ಗ್ಯಾರೇಜ್ ಕೂಲಿಗಳು ನಾವು.

ನಾಡಿನ ಯಾವ ಮುಲೆಯಲ್ಲಾದರೂ
ದೊಂಬಿ, ಗಲಭೆಯಾದರೂ ಸಾಕು
ರಸ್ತೆಯಂಚಿನ ನನ್ನ ಗೂಡಂಗಡಿ
ತಳ್ಳುಬಂಡಿಗಳೇ ಮೊದಲು ಬಲಿಯಾಗುವವು.
ಏನು ಮಾಡಲಿ ಮಡದಿ ಮಕ್ಕಳ ಸಾಕಲು
ಗಂಜಿಗಾಧಾರ ತಳ್ಳುಬಂಡಿಯನೇ ನಂಬಿರುವೆನು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...