ಕೂಲಿಗಳು ನಾವು

ಹಿಂದು, ಮುಸ್ಲಿಂ, ಕ್ರಿಶ್ಚಿಯನ್
ಅವರಲ್ಲಿ ಮಾನವರನ್ನು ಹುಡುಕುತ್ತಲಿರುವೆ.
ಈ ನೆಲದ ಮಣ್ಣಲ್ಲಿ ಮಣ್ಣಾಗಿ ಹೋದ
ಅವರ ರಕ್ತದ ಕೆಂಪು ಕಲೆಗಳ ಹುಡುಕುತಲಿರುವೆ.

ದೇಶದ ಯಾವ ಮೂಲೆಯಲ್ಲಾದರೂ
ಯಾರೋ ಬಾಂಬು ಸಿಡಿದರೂ ಸಾಕು,
ಅಲ್ಲಿ ನನ್ನದೇ ಹೆಸರು ಮೊದಲು
ಏನು ಮಾಡಲಿ ಬಾಳು ಹಸನಾಗಲು
ರಿಕ್ಷಾ ಹೊಡೆದು ಹೊಟ್ಟೆ ಹೊರೆಯುತ್ತಿರುವೆ.

ವಿಶ್ವದ ಯಾವ ಮುಲೆಯಲ್ಲಾದರೂ
ಯಾರೋ ಕೋಮು ದಂಗೆ ಮಾಡಿದರೂ ಸರಿಯೇ
ಅಲ್ಲಿ ನನ್ನ ಹೆಸರೇ ಮೊದಲು
ಏನು ಮಾಡಲಿ ಹೊಟ್ಟೆಯ ಹಸಿವು ಹಿಂಗಿಸಲು
ದಣಿಯ ಹೊಲದಲ್ಲಿ ನೇಗಿಲು ಹೂಡಿರುವೆ.

ಲೋಕದ ಯಾವ ಮೂಲೆಯಲ್ಲಾದರೂ
ಯಾರೋ ಜನಾಂಗೀಯ ದ್ವೇಷದ ಬೆಂಕಿ ಹಚ್ಚಿದರೂ
ಅಲ್ಲಿ ನನ್ನ ಹೆಸರೇ ಮೊದಲು ಬರುವುದು
ಬೆಂಕಿಯಲಿ ಮೊದಲು ಬೇಯುವವರು ನಾವು.
ಏನು ಮಾಡುವುದು ಬಡತನದಲ್ಲಿ ಬೆಂದವರು
ಹೋಟೆಲ್, ಗ್ಯಾರೇಜ್ ಕೂಲಿಗಳು ನಾವು.

ನಾಡಿನ ಯಾವ ಮುಲೆಯಲ್ಲಾದರೂ
ದೊಂಬಿ, ಗಲಭೆಯಾದರೂ ಸಾಕು
ರಸ್ತೆಯಂಚಿನ ನನ್ನ ಗೂಡಂಗಡಿ
ತಳ್ಳುಬಂಡಿಗಳೇ ಮೊದಲು ಬಲಿಯಾಗುವವು.
ಏನು ಮಾಡಲಿ ಮಡದಿ ಮಕ್ಕಳ ಸಾಕಲು
ಗಂಜಿಗಾಧಾರ ತಳ್ಳುಬಂಡಿಯನೇ ನಂಬಿರುವೆನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಗಿಲ ಬಡಿದವರಾರೋ
Next post ಬಯಕೆ

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

cheap jordans|wholesale air max|wholesale jordans|wholesale jewelry|wholesale jerseys