ಬಯಕೆ

ಚಲುವ ಕನ್ನಡ ನಾಡ ಮಣ್ಣೊಳಾದೀ ದೇಹ
ಬೆಳೆದು ಕನ್ನಡ ತಾಯ ತೊಡೆಯಮೇಲೆ
ಇಂಬಾಗಿ ಮಲಗಿರಲು ಹಾಡಿ ಕನ್ನಡಗಬ್ಬ
ಹೃದಯದಲಿ ತುಂಬಿದಳು ರಸದ ಹಬ್ಬ.
ಕನ್ನಡಿಗನಾನೆಂಬ ವಜ್ರಕವಚವ ತೊಡಿಸಿ
ರಾಗರಸಭಾವಗಳ ಮನದೊಳಿಡಿಸಿ
ಕನ್ನಡದ ಹಿರಿಮೆಗಳ ಹಾಡೆಂದು ಮನಗೊಟ್ಟು
ಕನಸಿನಲಿ ಹರಸಿದಳು ಕಳಸವಿಟ್ಟು.

ಶಿವಮೊಗ್ಗೆಯಲಿ ಬಂದು ಸಮ್ಮೇಳನದಿ ನಿಂದು
ಕವಿಹೃದಯದೊಳಹೊಕ್ಕು ಕಂಡೆನಂದು
ನೋಡಿದೆನು ಕೇಳಿದೆನು ಕವಿಯ ಸವಿಕೃತಿಗಳನು
ಮೂಡಿದುದು ಹಿರಿದಾಸೆ ಹಾಡೆ ನಾನು.
ಗಾಯತ್ರಿ ಸೂಕ್ತದಲಿ ಮೊದಲಾದ ಕವಿವಾಣಿ
ಗಂಗಾವತರಣದಲಿ ಜನರಜಾಣಿ
ಮಂಗಳವ ತುಂಬಿದುದು ತೆರೆದು ಸರ್ವರ ಹೃದಯ
ಕನ್ನಡದ ಪೀರದಲಿ ಮೊಳಗಲುದಯ.

ಕಾಡುಸುಮಗಳಿಂದ ನಾಡದೇವಿಯ ಭಜಿಸಿ
ಮಡ್ಡನುಡಿ ಮಂತ್ರದಿಂ ಹಾಡಿ ನಮಿಸಿ
ದೇವಿಯೊಲುಮೆಯ ಪಡೆದ ಕಬ್ಬಿಗರ ಪದರಜದಿ
ಹೊಡೆಮರಳಿ ಪಡೆದಿರುವ ಸೂಕ್ಷ್ಮಪಥದಿ

ಜೀವಮಿಲ್ಲದ ಗಾನ ಹೇವಮಿಲ್ಲದ ತಾನ
ಎರಡು ದನಿಗಳ ಮೇಳದಲ್ಲಿ ಮೌನ.
ಆರರಿಯದಂತಾನು ಮುಂಜಾವಿನಲಿ ಭಾನು
ಉದಯಿಸುವ ಪೂರ್ವದಲ್ಲಿ ಹಾಡುತಿಹೆನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೂಲಿಗಳು ನಾವು
Next post ಪರಿವರ್ತನೆ

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys