Home / ಬಾಲ ಚಿಲುಮೆ / ಕವಿತೆ / ಪರಿವರ್ತನೆ

ಪರಿವರ್ತನೆ

ಸಿದ್ಧನ ಅಪ್ಪ
ಅವನು ಬೆಪ್ಪ
ಹಗಲಿಡೀ ಮೈಮುರಿ ದುಡಿಯುವನು
ಹಗಲು ಮಲಗಲು
ಚಂದ್ರನು ನಗಲು
ಗಪ್ಪನೆ ಗಡಂಗಿಗೆ ಹೊರಡುವನು

ಕಂಠ ಪೂರ್ತಿ
ಕುಡಿದು ಭರ್ತಿ
ಓಲಾಡುತ ಮನೆಗೆ ಬರುವನು
ಹೆಂಡತಿ ಮಕ್ಕಳ
ಬಡಿದು ಗೋಳು
ಹೊಯ್ದುಕೊಳುತ ಕೂಗಾಡುವನು

ಗಲಾಟೆ ಗದ್ದಲ
ರಸ್ತೆ ಉದ್ದಗಲ
ಕೇಳುವ ಜನರಿಗೆ ಮೋಜಾಗುವುದು
ಅಕ್ಕ ಪಕ್ಕದ
ಮನ ಮಠದ
ಜನರಿಗದು ಕಿರಿ ಕಿರಿ ಮಾಡುವುದು

ಸಿದ್ಧನು ಶಾಲೆಗೆ
ಹೋಗಲು ಅಲ್ಲಿಗೆ
ಮಕ್ಕಳು ಅವಪ್ಪನ ಛೇಡಿಸಿ ನಗುವರು
ಅವಮಾನಿತ ಸಿದ್ಧ
ಮನೆಗೆ ಬಂದ
ನೊಂದು ತಾಯಿಗೆ ಕೊಡುವನು ದೂರು

ಅಮ್ಮಾ ಅಪ್ಪನು
ಏಕ ಕುಡಿವನು?
ಅದರಿಂದ ಆರೋಗ್ಯ ಕೆಡುವದಂತಲ್ಲ
ಕರುಳಲಿ ತೂತು
ಕಿಡ್ನಿಯು ಕೊಳೆತು
ಬಳಲಿ ಬಳಲಿ ಬೇಗ ಸಾಯುವರಂತಲ್ಲ

ಕುಡಿತದ ಚಟವ
ಬಿಡಿಸೋ ಭಾರವು
ನಿನ್ನದು ಅಪ್ಪನ ಪತ್ನಿಯೇ ನೀ ಕೇಳು
ಅಪ್ಪನು ಸತ್ತರೆ
ದಿಕ್ಕಾರು ಆಸರೆ
ಸನ್ಮಾರ್ಗದಿ ನಡೆಯಲು ನೀ ಹೇಳು

ಸಿದ್ಧನು ಹೇಳಿದ
ವಿಷಯ ಕೇಳಿದ
ಅವನಪ್ಪನು ಕುಡಿತವನು ಬಿಟ್ಟುಕೊಟ್ಟ
ದುಡಿದ ಹಣವನು
ಬ್ಯಾಂಕಲಿ ಅವನು
ಕೂಡಿಡುತ್ತಲೇ ಸಿದ್ಧನನು ಓದಿಸಿಬಿಟ್ಟ.

ಬೆಳೆದನು ಸಿದ್ಧ
ಹಣವನ್ನು ಗಳಿಸಿದ
ಮುಪ್ಪಿನ ಮಾತಾ ಪಿತರನು ಸಾಕಲು
ಆ ದಿನ ನೆನಪು
ಮಗನ ಕದಪು
ನೇವರಿಸುತ ಸೂಸುವ ಹರ್ಷದ ಹೊನಲು
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...