Home / ಬಾಲ ಚಿಲುಮೆ / ಕವಿತೆ / ಪರಿವರ್ತನೆ

ಪರಿವರ್ತನೆ

ಸಿದ್ಧನ ಅಪ್ಪ
ಅವನು ಬೆಪ್ಪ
ಹಗಲಿಡೀ ಮೈಮುರಿ ದುಡಿಯುವನು
ಹಗಲು ಮಲಗಲು
ಚಂದ್ರನು ನಗಲು
ಗಪ್ಪನೆ ಗಡಂಗಿಗೆ ಹೊರಡುವನು

ಕಂಠ ಪೂರ್ತಿ
ಕುಡಿದು ಭರ್ತಿ
ಓಲಾಡುತ ಮನೆಗೆ ಬರುವನು
ಹೆಂಡತಿ ಮಕ್ಕಳ
ಬಡಿದು ಗೋಳು
ಹೊಯ್ದುಕೊಳುತ ಕೂಗಾಡುವನು

ಗಲಾಟೆ ಗದ್ದಲ
ರಸ್ತೆ ಉದ್ದಗಲ
ಕೇಳುವ ಜನರಿಗೆ ಮೋಜಾಗುವುದು
ಅಕ್ಕ ಪಕ್ಕದ
ಮನ ಮಠದ
ಜನರಿಗದು ಕಿರಿ ಕಿರಿ ಮಾಡುವುದು

ಸಿದ್ಧನು ಶಾಲೆಗೆ
ಹೋಗಲು ಅಲ್ಲಿಗೆ
ಮಕ್ಕಳು ಅವಪ್ಪನ ಛೇಡಿಸಿ ನಗುವರು
ಅವಮಾನಿತ ಸಿದ್ಧ
ಮನೆಗೆ ಬಂದ
ನೊಂದು ತಾಯಿಗೆ ಕೊಡುವನು ದೂರು

ಅಮ್ಮಾ ಅಪ್ಪನು
ಏಕ ಕುಡಿವನು?
ಅದರಿಂದ ಆರೋಗ್ಯ ಕೆಡುವದಂತಲ್ಲ
ಕರುಳಲಿ ತೂತು
ಕಿಡ್ನಿಯು ಕೊಳೆತು
ಬಳಲಿ ಬಳಲಿ ಬೇಗ ಸಾಯುವರಂತಲ್ಲ

ಕುಡಿತದ ಚಟವ
ಬಿಡಿಸೋ ಭಾರವು
ನಿನ್ನದು ಅಪ್ಪನ ಪತ್ನಿಯೇ ನೀ ಕೇಳು
ಅಪ್ಪನು ಸತ್ತರೆ
ದಿಕ್ಕಾರು ಆಸರೆ
ಸನ್ಮಾರ್ಗದಿ ನಡೆಯಲು ನೀ ಹೇಳು

ಸಿದ್ಧನು ಹೇಳಿದ
ವಿಷಯ ಕೇಳಿದ
ಅವನಪ್ಪನು ಕುಡಿತವನು ಬಿಟ್ಟುಕೊಟ್ಟ
ದುಡಿದ ಹಣವನು
ಬ್ಯಾಂಕಲಿ ಅವನು
ಕೂಡಿಡುತ್ತಲೇ ಸಿದ್ಧನನು ಓದಿಸಿಬಿಟ್ಟ.

ಬೆಳೆದನು ಸಿದ್ಧ
ಹಣವನ್ನು ಗಳಿಸಿದ
ಮುಪ್ಪಿನ ಮಾತಾ ಪಿತರನು ಸಾಕಲು
ಆ ದಿನ ನೆನಪು
ಮಗನ ಕದಪು
ನೇವರಿಸುತ ಸೂಸುವ ಹರ್ಷದ ಹೊನಲು
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...