Home / ಬಾಲ ಚಿಲುಮೆ / ಕವಿತೆ / ಪರಿವರ್ತನೆ

ಪರಿವರ್ತನೆ

ಸಿದ್ಧನ ಅಪ್ಪ
ಅವನು ಬೆಪ್ಪ
ಹಗಲಿಡೀ ಮೈಮುರಿ ದುಡಿಯುವನು
ಹಗಲು ಮಲಗಲು
ಚಂದ್ರನು ನಗಲು
ಗಪ್ಪನೆ ಗಡಂಗಿಗೆ ಹೊರಡುವನು

ಕಂಠ ಪೂರ್ತಿ
ಕುಡಿದು ಭರ್ತಿ
ಓಲಾಡುತ ಮನೆಗೆ ಬರುವನು
ಹೆಂಡತಿ ಮಕ್ಕಳ
ಬಡಿದು ಗೋಳು
ಹೊಯ್ದುಕೊಳುತ ಕೂಗಾಡುವನು

ಗಲಾಟೆ ಗದ್ದಲ
ರಸ್ತೆ ಉದ್ದಗಲ
ಕೇಳುವ ಜನರಿಗೆ ಮೋಜಾಗುವುದು
ಅಕ್ಕ ಪಕ್ಕದ
ಮನ ಮಠದ
ಜನರಿಗದು ಕಿರಿ ಕಿರಿ ಮಾಡುವುದು

ಸಿದ್ಧನು ಶಾಲೆಗೆ
ಹೋಗಲು ಅಲ್ಲಿಗೆ
ಮಕ್ಕಳು ಅವಪ್ಪನ ಛೇಡಿಸಿ ನಗುವರು
ಅವಮಾನಿತ ಸಿದ್ಧ
ಮನೆಗೆ ಬಂದ
ನೊಂದು ತಾಯಿಗೆ ಕೊಡುವನು ದೂರು

ಅಮ್ಮಾ ಅಪ್ಪನು
ಏಕ ಕುಡಿವನು?
ಅದರಿಂದ ಆರೋಗ್ಯ ಕೆಡುವದಂತಲ್ಲ
ಕರುಳಲಿ ತೂತು
ಕಿಡ್ನಿಯು ಕೊಳೆತು
ಬಳಲಿ ಬಳಲಿ ಬೇಗ ಸಾಯುವರಂತಲ್ಲ

ಕುಡಿತದ ಚಟವ
ಬಿಡಿಸೋ ಭಾರವು
ನಿನ್ನದು ಅಪ್ಪನ ಪತ್ನಿಯೇ ನೀ ಕೇಳು
ಅಪ್ಪನು ಸತ್ತರೆ
ದಿಕ್ಕಾರು ಆಸರೆ
ಸನ್ಮಾರ್ಗದಿ ನಡೆಯಲು ನೀ ಹೇಳು

ಸಿದ್ಧನು ಹೇಳಿದ
ವಿಷಯ ಕೇಳಿದ
ಅವನಪ್ಪನು ಕುಡಿತವನು ಬಿಟ್ಟುಕೊಟ್ಟ
ದುಡಿದ ಹಣವನು
ಬ್ಯಾಂಕಲಿ ಅವನು
ಕೂಡಿಡುತ್ತಲೇ ಸಿದ್ಧನನು ಓದಿಸಿಬಿಟ್ಟ.

ಬೆಳೆದನು ಸಿದ್ಧ
ಹಣವನ್ನು ಗಳಿಸಿದ
ಮುಪ್ಪಿನ ಮಾತಾ ಪಿತರನು ಸಾಕಲು
ಆ ದಿನ ನೆನಪು
ಮಗನ ಕದಪು
ನೇವರಿಸುತ ಸೂಸುವ ಹರ್ಷದ ಹೊನಲು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...