ಇದೇನಿದು ಹಸುವಿಗೂ ಬೋಳುತಲೆಗೂ ಎಲ್ಲಿಂದೆಲ್ಲಿಯ ಸಂಬಂಧ? ಹೌದು ನಿಕಟ ಸಂಬಂಧವಿದೆ ಎಂದು ಕೊಲಂಬಿಯಾ ದೇಶದ ವಿಜ್ಞಾನಿ ‘ಫೇರಿರಾ’ ಹೇಳುತ್ತಾರೆ. ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ೪೦ ವರ್ಷದಾಟುತ್ತಿದ್ದಂತೆ ಒಂದೊಂದೇ ಕೂದಲುಗಳು ಉದುರಲಾರಂಬಿಸುತ್ತವೆ. ೫೦ ವರ್ಷಕ್ಕಾಗಲೇ ತಾಮ್ರದ ಚಂಬಿನಂತಾಗಿ ಬಿಡುತ್ತದೆ ತಲೆ. ಇಂಥಹ ಅಸಂಖ್ಯೆ ತಲೆಗಳ ಸಮಸ್ಯೆಗಳನ್ನು ಪರಿಹರಿಸಲು ಅಂದರೆ ಬೋಳುತಲೆಯಲ್ಲಿ ಪುನಃ ನೈಸರ್ಗಿಕವಾಗಿ ಕೂದಲು ಬೆಳೆಯಲು ವಿಜ್ಞಾನಿ ಪೆರೀರಾ ಅವರು ಒಂದು ಔಷಧಿಯನ್ನು ಕಂಡು ಹಿಡಿದ್ದಾರೆ. ತಲೆಗೆ ಹಚ್ಚಲೆಂದು ಒಂದು ತೈಲವನ್ನು ತಯಾರಿಸಿದ್ದು ಅದನ್ನು ಬೋಳು ತಲೆಗೆ ಸವರಿ ನಂತರ ದಿನವೂ ಒಂದು ಹಸುವಿನಿಂದ ತಲೆಯನ್ನು ನೆಕ್ಕಿಸಿಕೊಳ್ಳಬೇಕು. ಹಸುವಿನ ಜೊಲ್ಲಿನಲಿ ಕೆಲವು ಗುಣಕಾರಕ ಔಷಧಿಗಳಿವೆ. ತಲೆಗೆ ಹಚ್ಚಿಕೊಂಡ ಎಣ್ಣೆ ಹಾಗೂ ಹಸುವಿನ ಜೊಲ್ಲು ಸೇರಿದರೆ ಕೆಂಪು ರಾಸಾಯನಿಕ ಮಾರ್ಪಾಡುಗಳು ಉಂಟಾಗುತ್ತವೆ. ಹೀಗಾಗಿ ಬೋಳು ತಲೆಯಲ್ಲಿ ಮತ್ತೆ ನೈಸರ್ಗಿಕವಾದ ಕೂದಲುಗಳು ಬೆಳೆಯಲಾರಂಬಿಸುತ್ತವೆ. ಇವರ ಈ ವಿಶಿಷ್ಟ ಚಿಕಿತ್ಸಾ ಪದ್ಧತಿಯನ್ನು ಪಡೆದುಕೊಂಡ ಹಲವರು ಉತ್ತಮ ಫಲಿತಾಂಶವನ್ನು ಕಂಡುಕೊಂಡಿದ್ದಾರೆ. ಇದು ವಿಸ್ಮಯವಾದರೂ ಸತ್ಯ.
*****
Related Post
ಸಣ್ಣ ಕತೆ
-
ಶಾಕಿಂಗ್ ಪ್ರೇಮ ಪ್ರಕರಣ
ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…
-
ಕ್ಷಮೆ
ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…
-
ವಲಯ
ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…
-
ಧನ್ವಂತರಿ
ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…
-
ನಿರಾಳ
ಮಂಗಳೂರಿನ ಟೌನ್ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…