ಬಂತಾವ್ವಾ ಬಂತಾವ್ವಾ ಬಂತವ್ವಾ ಶ್ರಾವಣಾ

ಬಂತಾವ್ವಾ ಬಂತಾವ್ವಾ ಬಂತವ್ವಾ ಶ್ರಾವಣಾ
ಚಂದೇನ ಚಾರೇನ ಸಾಮೇರ ಚರಣಾ ||ಪಲ್ಲ||

ಮಠತುಂಬ ರಂಗೋಲಿ ಮುತೈದಿ ಬಾಲೇರು
ಪಡಿಹಿಗ್ಗು ಪಂಚಮಿ ಮಾಡ್ಯಾರೆ
ತೋರಮುತ್ತಿನ ಕಾಂತಿ ಮುತ್ತು ಮಾಣಿಕ ದಾಂತಿ
ಕಾಶೀಯ ಪೀತಾಂಬ್ರ ಉಟ್ಟಾರೆ ||೧||

ಪರಪಂಚ ಪಂಚೇತಿ ಫಜೀತಿ ಪುರಮಾಶಿ
ಕೀರ್ತನಾ ಕೇಳಾಗ ಹೋಗೇತೆ
ಉಟಸೀರಿ ಜಾರೇತೆ ಮುಡಿಸೆರಗು ಹಾರೇತೆ
ಗರತೇರ ಮಾನಾ ಮಾರೇತೆ ||೨||

ಸಾಮೇರ ಮಂಚಕ್ಕ ಪಂಚರಂಭೇರೇರಿ
ಹಣ್ಗಾಯಿ ನೀರ್‍ಗಾಯಿ ಆಗ್ಯಾರೆ
ಸಾಮೇರ ತೊಡಿಮ್ಯಾಗ ಆರೂರ ಹುಡಿಗೇರು
ಬಕಬಾರ್‍ಲೆ ಕಣ್ತಿರಿಗಿ ಬಿದ್ದಾರೆ ||೩||

ಗುರುಗೋಳು ಬಂದಾರೆ ಗುರುವಣ್ಣಿ ಕೂಡ್ಯಾರೆ
ಮಠದಾಗ ಹೆಂಡಿರ ಮಾಡ್ಯಾರೆ
ಹೋದೋರು ಆರ್‍ಮಂದಿ ಬಂದೋರು ಮೂರ್‍ಮಂದಿ
ಊರ್‍ಮಂದಿ ಹುಡಿಗೇರು ಬಸರಾಗೆ ||೪||

ಗೋಡಿ ಬುದಬುದು ಬಿದ್ದು ಪೀಠ ಫಡಫಡ ಎದ್ದು
ಸಾಮೇರು ಕಾಮೇರು ಆಗ್ಯಾರೆ
ನವಿಲೀನ ನಾರೇರ ಕದ್ದಾರೆ ಮೆದ್ದಾರೆ
ಮುಗಿಲೀನ ತೊಟ್ಟಿಲಾ ತೂಗ್ಯಾರೆ ||೫||
*****
ಶ್ರಾವಣ=ಆತ್ಮಿಕ ಶ್ರವಣಾ; ಸ್ವಾಮೇರು = ಭಗವಂತ; ಮಠ = ಬ್ರಹ್ಮ ತತ್ವ; ಬಾಲೇರು-ಹುಡಿಗೇರು-ಗರತೇರು-ಗುರುವಣ್ಣಿ-ಹೆಂಡಿರು = ಸರ್ವ ಆತ್ಮರು; ಪಂಚಮಿ=ಪಂಚೇಂದ್ರಿಯಗಳ ಕೂಟ; ಉಟಸೀರಿ= ದೇಹಾಭಿಮಾನ (Physical Consciousness); ಆರ್‍ಮಂದಿ = ಷಡ್ವೈರಿಗಳು; ಮೂರ್‍ಮಂದಿ=ಸತ್, ಚಿತ್, ಆನಂದ; ಬಸರಾಗು=ಆತ್ಮ ಜ್ಞಾನಿಯಾಗು; ಕಾಮೇರು = ಕಾರುಣ್ಯದ ಮೇರು; ಮುಗಿಲಿನ ತೊಟ್ಟಿಲು = ಅಶರೀರ ಸ್ಥಿತಿ (Supra-mental plane).

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾಕೆ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೧

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…