ವಚನ ವಿಚಾರ – ದುಡ್ಡು ಎಂಬ ನಾಯಿ

ವಚನ ವಿಚಾರ – ದುಡ್ಡು ಎಂಬ ನಾಯಿ

ಕಾಂಚನವೆಂಬ ನಾಯ ನಚ್ಚಿ ನಿಮ್ಮ ನಾನು ಮರೆವೆನಯ್ಯಾ
ಕಾಂಚನಕ್ಕೆ ವೇಳೆಯಲ್ಲದೆ ಲಿಂಗಕ್ಕೆ ವೇಳೆಯಿಲ್ಲ
ಹಡಿಕೆಗೆ ಮೆಚ್ಚಿದ ಸೊಣಗ ಅಮೃತದ ರುಚಿಯ ಬಲ್ಲುದೆ
ಕೂಡಲಸಂಗಮದೇವಾ

[ಕಾಂಚನ-ಚಿನ್ನ, ಹಡಿಕೆ-ಎಲುಬು, ಸೊಣಗ-ನಾಯಿ]

ಬಸವಣ್ಣನ ವಚನ. ದುಡ್ಡು ಎಂಬ ನಾಯಿಯನ್ನು ನಂಬಿಕೊಂಡು ನಿಮ್ಮನ್ನು ಮರೆತುಬಿಟ್ಟೆ. ದುಡ್ಡು ಎಂಬ ನಾಯಿಗೆ ಗಮನಕೊಡುವುದಕ್ಕೆ ಸಮಯವಿರುತ್ತದೆ, ಆದರೆ ನಿಮ್ಮನ್ನು ನೆನೆಯುವುದಕ್ಕೆ ಸಮಯವೇ ಇಲ್ಲ. ಎಲುಬನ್ನು ಮೆಚ್ಚಿದ ನಾಯಿಗೆ ಅಮೃತದ ರುಚಿ ತಿಳಿಯುವುದೆ?

ಏನನ್ನಾದರೂ ಒಂದನ್ನು ಹಿಡಿದುಕೊಳ್ಳದಿದ್ದರೆ ಮನಸ್ಸಿಗೆ ಸಮಾಧಾನವೇ ಇರುವುದಿಲ್ಲ. ಸುಮ್ಮನಿರುವುದು ಅಸಹನೀಯ ಚಡಪಡಿಕೆಯ ಕೆಲಸ. ಮನಸ್ಸಿಗೆ ಇಷ್ಟವಾದ ಸಂಗತಿ ದೊರೆತಾಗ ಸಮಯ ಸರಿದದ್ದೇ ತಿಳಿಯದು. ನಮಗೂ ಮನಸ್ಸಿಗೂ ಅಂತರವಿದ್ದಾಗ ನಾವು ಬಯಸಿದ್ದನ್ನು ಮನಸ್ಸು ಬಯಸದು. ಹಾಗಾದಾಗ ನಮಗೆ ಇಷ್ಟವಿಲ್ಲದ ಸಂಗತಿಯನ್ನು ಕೀಳಾಗಿ ಕಾಣುವುದೊಂದು ಉಪಾಯ. ಎಂಥವರನ್ನೂ ಸೆಳೆಯುವ ಶಕ್ತಿ ಇದೆಯಲ್ಲಾ ದುಡ್ಡಿಗೆ, ಅದನ್ನು ನಾಯಿ ಎಂದು ಹೀಗಳೆದಾದರೂ ಮನಸ್ಸನ್ನು ದೇವರ ಎಡೆಗೆ ತಿರುಗಿಸುವ ಪ್ರಯತ್ನವೋ ಇದು?

ಅದಕ್ಕಿಂತ ಮಿಗಿಲಾಗಿ ಮನಸ್ಸು ಬಯಸಿದ್ದರಲ್ಲಿ ಮುಳುಗಿ ಹೋದರೆ ವೇಳೆಯ ಅರಿವೂ ವೇಳೆಯ ಮೇಲಿನ ಹತೋಟಿಯೂ ತಪ್ಪಿ ಹೋಗುತ್ತದೆ. ಅಯ್ಯೋ ಸಮಯವೇ ಇಲ್ಲವಲ್ಲಾ ಎಂಬ ಸಬೂಬು ಹೊಳೆಯ ತೊಡಗುತ್ತದೆ.

ಟೈಮೇ ಇಲ್ಲ ಅನ್ನುವ ಮಾತು ನಾವೆಲ್ಲ ಸಾಮಾನ್ಯವಾಗಿ ಹೇಳಿಯೇ ಇರುತ್ತೇವೆ. ಯಾವ ಕೆಲಸಕ್ಕೆ ಟೈಮಿಲ್ಲವೋ ಅದು ನಿಜವಾಗಿ ನಮ್ಮ ಮನಸ್ಸಿಗೆ ಒಗ್ಗದ, ಬೇಡದ ಕೆಲಸ ಅಲ್ಲವೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರಸು ಮಕ್ಕಳ ಶಸ್ತ್ರವಿದ್ಯಾ ಪ್ರದರ್ಶನ
Next post ಹೃದಯ ರಾಗ

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

cheap jordans|wholesale air max|wholesale jordans|wholesale jewelry|wholesale jerseys