Home / ಲೇಖನ / ಇತರೆ / ವಚನ ವಿಚಾರ – ದುಡ್ಡು ಎಂಬ ನಾಯಿ

ವಚನ ವಿಚಾರ – ದುಡ್ಡು ಎಂಬ ನಾಯಿ

ಕಾಂಚನವೆಂಬ ನಾಯ ನಚ್ಚಿ ನಿಮ್ಮ ನಾನು ಮರೆವೆನಯ್ಯಾ
ಕಾಂಚನಕ್ಕೆ ವೇಳೆಯಲ್ಲದೆ ಲಿಂಗಕ್ಕೆ ವೇಳೆಯಿಲ್ಲ
ಹಡಿಕೆಗೆ ಮೆಚ್ಚಿದ ಸೊಣಗ ಅಮೃತದ ರುಚಿಯ ಬಲ್ಲುದೆ
ಕೂಡಲಸಂಗಮದೇವಾ

[ಕಾಂಚನ-ಚಿನ್ನ, ಹಡಿಕೆ-ಎಲುಬು, ಸೊಣಗ-ನಾಯಿ]

ಬಸವಣ್ಣನ ವಚನ. ದುಡ್ಡು ಎಂಬ ನಾಯಿಯನ್ನು ನಂಬಿಕೊಂಡು ನಿಮ್ಮನ್ನು ಮರೆತುಬಿಟ್ಟೆ. ದುಡ್ಡು ಎಂಬ ನಾಯಿಗೆ ಗಮನಕೊಡುವುದಕ್ಕೆ ಸಮಯವಿರುತ್ತದೆ, ಆದರೆ ನಿಮ್ಮನ್ನು ನೆನೆಯುವುದಕ್ಕೆ ಸಮಯವೇ ಇಲ್ಲ. ಎಲುಬನ್ನು ಮೆಚ್ಚಿದ ನಾಯಿಗೆ ಅಮೃತದ ರುಚಿ ತಿಳಿಯುವುದೆ?

ಏನನ್ನಾದರೂ ಒಂದನ್ನು ಹಿಡಿದುಕೊಳ್ಳದಿದ್ದರೆ ಮನಸ್ಸಿಗೆ ಸಮಾಧಾನವೇ ಇರುವುದಿಲ್ಲ. ಸುಮ್ಮನಿರುವುದು ಅಸಹನೀಯ ಚಡಪಡಿಕೆಯ ಕೆಲಸ. ಮನಸ್ಸಿಗೆ ಇಷ್ಟವಾದ ಸಂಗತಿ ದೊರೆತಾಗ ಸಮಯ ಸರಿದದ್ದೇ ತಿಳಿಯದು. ನಮಗೂ ಮನಸ್ಸಿಗೂ ಅಂತರವಿದ್ದಾಗ ನಾವು ಬಯಸಿದ್ದನ್ನು ಮನಸ್ಸು ಬಯಸದು. ಹಾಗಾದಾಗ ನಮಗೆ ಇಷ್ಟವಿಲ್ಲದ ಸಂಗತಿಯನ್ನು ಕೀಳಾಗಿ ಕಾಣುವುದೊಂದು ಉಪಾಯ. ಎಂಥವರನ್ನೂ ಸೆಳೆಯುವ ಶಕ್ತಿ ಇದೆಯಲ್ಲಾ ದುಡ್ಡಿಗೆ, ಅದನ್ನು ನಾಯಿ ಎಂದು ಹೀಗಳೆದಾದರೂ ಮನಸ್ಸನ್ನು ದೇವರ ಎಡೆಗೆ ತಿರುಗಿಸುವ ಪ್ರಯತ್ನವೋ ಇದು?

ಅದಕ್ಕಿಂತ ಮಿಗಿಲಾಗಿ ಮನಸ್ಸು ಬಯಸಿದ್ದರಲ್ಲಿ ಮುಳುಗಿ ಹೋದರೆ ವೇಳೆಯ ಅರಿವೂ ವೇಳೆಯ ಮೇಲಿನ ಹತೋಟಿಯೂ ತಪ್ಪಿ ಹೋಗುತ್ತದೆ. ಅಯ್ಯೋ ಸಮಯವೇ ಇಲ್ಲವಲ್ಲಾ ಎಂಬ ಸಬೂಬು ಹೊಳೆಯ ತೊಡಗುತ್ತದೆ.

ಟೈಮೇ ಇಲ್ಲ ಅನ್ನುವ ಮಾತು ನಾವೆಲ್ಲ ಸಾಮಾನ್ಯವಾಗಿ ಹೇಳಿಯೇ ಇರುತ್ತೇವೆ. ಯಾವ ಕೆಲಸಕ್ಕೆ ಟೈಮಿಲ್ಲವೋ ಅದು ನಿಜವಾಗಿ ನಮ್ಮ ಮನಸ್ಸಿಗೆ ಒಗ್ಗದ, ಬೇಡದ ಕೆಲಸ ಅಲ್ಲವೇ?
*****

Tagged:

Leave a Reply

Your email address will not be published. Required fields are marked *

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...