ವ್ಯಸನಕೋಣೆ

ವ್ಯಸನಕೋಣೆಯಲಿ ನಮ್ಮ ಕಥಾನಾಯಕಿ ಬಿಳಿಯ
ವಸನಧಾರಿ ಮಲಗಿರುವಳಂತೆ ಯಾರಿಗೂ ತಿಳಿಯ-
ದವಳ ಬೇಸರದ ಮೂಲ

ಘನ ಸರಕಾರವೇನೂ ಸುಮ್ಮನೆ ಕೂತಿಲ್ಲ ಕೈಕಟ್ಟಿ
ಮನೆಯ ಸುತ್ತಲೂ ನಿಲ್ಲಿಸಿದೆ ಕಾವಲಿಗೆಂದು ಗಟ್ಟಿ
ಗೂಢಚಾರರ ಜಾಲ

ಸುಮ್ಮನೆ ಓಡಾಡುವವರ ಮೇಲೆ ಕಣ್ಣಿರಿಸಿ
ಗುಮಾನಿ ಬಂದವರ ಜೇಬುಗಳನರಸಿ
ತಿರುಗಾಡುವರು ಗಸ್ತು

ಸಮಸ್ಯೆಗಳ ಮೂಲಗಳ ಹುಡುಕಬಲ್ಲಂತಹ
ವಿಮರ್ಶಕ ಬುದ್ಧಿಜೀವಿಗಳ ವರ್ಗ ಸಹ
ಆಗಿಬಿಟ್ಟಿದೆ ಸುಸ್ತು

ಮಾಯವಾಗಿರುವರೆಷ್ಟೋ ಜನ ಇದ್ದಕಿದ್ದಂತೆ
ಸಾಯದೆಯೆ ಉಳಿದವರಿಂದ ತುಂಬಿರುವುದಂತೆ
ದೇಶದ ಬಂದೀಖಾನೆ

ಅದರೊಂದಿಗೇ ಹುಟ್ಟಿಕೊಳ್ಳುವುದು ಭೂಗತ ಸಾಹಿತ್ಯ
ಸದೆಬಡಿತ ಸರ್ವಾಧಿಕಾರ ನಿರಂಕುಶತ್ವ ಅಸತ್ಯ
ಸಾಹಿತಿಗಳಿಗೆ ಸ್ಫೂರ್ತಿ ತಾನೆ!

ಇತ್ತ ನಾಯಕಿಯೂ ಬದುಕಿಲ್ಲ ಎಷ್ಟೋ ದಿನಗಳ ಕೆಳಗೆ
ಸತ್ತು ಹೋದಳು ಎಂದು ಕಿವಿಯಿಂದ ಕಿವಿಗೆ
ಹಬ್ಬಿರುವುದು ವದಂತಿ

ತೆರೆಸಿ ನೊಡುವುದಕ್ಕೆ ಸರ್ವಥಾ ಒಪ್ಪುವುದಿಲ್ಲ
ಸರಕಾರ-ಎಲ್ಲ ಸರ್ವಾಧಿಕಾರದ ಹಿಂದೆಯೂ ಒಂದಲ್ಲ
ಒಂದು ಭಯಂಕರ ಭ್ರಾಂತಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರಿವಿನ ವಾಟೆ
Next post ಸುಖ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…