ಸಿಕ್ಕರೂ ಮತ್ತೆ…

ಚಿತೆಗೋ ಚಿಂತೆಗೋ
ನಾಲ್ಕೆಂಟು ಗೆರೆಗಳು ಹಣೆಗೆ
ವಿಂಡ್ಸರ್‌ ಮ್ಯಾನ್‌ರಿನ ಕಾಫಿ ಬಾರಿನಲ್ಲಿ
ಕಾಣಿಸಿಕೊಂಡ. ಎಲ್ಲೋಽನೋಡಿದಂತಿದೆ…

ಬೋಳುತಲೆ ಸೂಟು ಟೈ,
ಮಾಲೀಕನಂತೆಯೂ ಅಲ್ಲ ಮಾಣಿಯೂ ಅಲ್ಲ
ವಿಗ್ ಹಾಕಿ ಸಾದಾ ಶರ್ಟ್ ತೊಡಿಸಿ
ಹುಡುಕಿದ್ದೇ ಹುಡುಕಿದ್ದು.

ಸಿಕ್ಕುಬಿದ್ದ ಅನಾಥ
ತಪ್ಪಿಲ್ಲದ್ದಕ್ಕೆ ಒದೆ ತಿಂದು
ಬದುಕಿನರ್ಥ ಕಳೆದುಕೊಂಡ ಅವನು
ಸಮಾಧಾನ ಮಾತುಗಳಿಗೆ ಹಂಬಲಿಸಿ
ನಾಲ್ಕು ಮಾತುಗಳು ನನ್ನೊಡನೆಯೂ ಹೇಳಿದ್ದ;
ಊರು ತೊರೆದನೊ ಬಾವಿ ಕೆರೆ ಸೇರಿದನೊ!
ಹುಡುಕುವವರಾರು ಅಳುವವರಾರು?

ಮತ್ತೊಮ್ಮೆ ಹೋಗಿದ್ದೆ ಕಾಫಿಗೆ
ಅವನ ಶಬ್ದಕ್ಕೆ ನೂರು ಪ್ರಶ್ನೆಯಾಗಿರಬೇಕು
ನೋಡಿದ ನೋಡಿದ
ಮೂಕನಂತೆ ಹೊರಟು ಹೋದ
ಅನಾಥ ಪ್ರಜ್ಞೆಯ ಅದೇ ನಡಿಗೆ
ಮಂದಬೆಳಕಿನಲ್ಲಿ ಕಾಫಿ ಆರಿದ್ದು ಗೊತ್ತಾಗಲಿಲ್ಲ.

ಕಾಣೆಯಾದವ ಸಿಕ್ಕರೂ
ಮತ್ತೆ ಕಾಣೆಯಾದ
ವಿಂಡ್ಸರ್‌ದಲ್ಲಿ ಅವನ ಅಡ್ರೆಸ್ಸ್ ಇಲ್ಲ
ಅವನ ಹುಡುಕಾಟದಲಿ
ನಾನು ಕಾಫಿ ಕುಡಿದದೆಷ್ಟೋ, ಸುತ್ತಾಡಿ
ಪೆಟ್ರೋಲ್ ಕಳೆದದ್ದೆಷ್ಟೊ…
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾವನಾ ಪ್ರಪಂಚ
Next post ಬಾಳ ರುಚಿ

ಸಣ್ಣ ಕತೆ

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…