ಭಾವನಾ ಪ್ರಪಂಚ

ಭಾವನಾ ಪ್ರಪಂಚದೊಳಗೆ ತೇಲಿ ನಲಿವುದೇ ಸುಖ
ಕೋವಿದರನು ಕಮಡು ತಿಳಿದು ಸುಮ್ಮನಿರುವುದೇ ಸುಖ
ಬೇಕು ಎಂಬ ಮಾತು ಬಿಟ್ಟು ಬೇಡವೆಂಬುದೇ ಸುಖ
ಲೋಕದಾಟವೆಲ್ಲ ನೋಡಿ ನಗುತಲಿರುವುದೇ ಸುಖ

ಉತ್ತಮರೊಳು ಸೇರಿ ಕಾಲ ಕಳೆದುಕೊಂಬುದೇ ಸುಖ
ವಸ್ತುಗಳನು ಕಂಡು ತಣಿದು ದೂರ ಸರಿವುದೇ ಸುಖ
ಇತ್ತ ಬಾ ಎಂದು ಕರೆಯೆ ನಮಿಸಿ ನಡೆವುದೇ ಸುಖ
ತುಚ್ಛಜನರು ಇಡುವ ಬಾಧೆಗಂಜದಿರುವುದೇ ಸುಖ

ನಿರುತ ಕಾಂತಿಯಿಂದ ಮನವ ನಿಲಿಸಿಕೊಂಬುದೇ ಸುಖ
ಎಂತು ನನ್ನ ಗತಿಯು ಎಂಬ ಚಿಂತೆ ಬಿಡುವುದೇ ಸುಖ
ನಿಂತ ಎಡೆಯೆ ಸಗ್ಗವೆಂದು ಹರುಷಪಡುವುದೇ ಸುಖ
ಇಂತು ಪೇಳು ಜೀವನಿಗೆ, ಸಂತೆ ಇದುವೆ, ಜನಕಜೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರು ಸೃಷ್ಟಿಯ ಹೀಗೆ ಹೂಡಿದವನು?
Next post ಸಿಕ್ಕರೂ ಮತ್ತೆ…

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

cheap jordans|wholesale air max|wholesale jordans|wholesale jewelry|wholesale jerseys