Home / ಕವನ / ಕವಿತೆ / ಸತ್ಯದ ನೆತ್ತಿಯ ಮೇಲೆ

ಸತ್ಯದ ನೆತ್ತಿಯ ಮೇಲೆ

ಸತ್ತು ಬಿದ್ದಿದ್ದಾನೆ ಒಬ್ಬ VIP
ಬೆಳ್ಳಂ ಬೆಳಗಾಗುವುದರಲ್ಲಿ
ಆತ ಯಾರೇ ಇರಲಿ
ದೊಡ್ಡ ಆಫೀಸರ್ ಬಿಸಿನೆಸ್‌ಮ್ಯಾನ್
ರಾಜಕಾರಣಿ ಸಾಹಿತಿಯೂ ಇರಬಹುದು
ನೀವು ತಿಳಿದುಕೊಂಡಂತೆ.

ಕುಡಿಯುವದು ಹೆಣ್ಣುಗಳಿಗೆ ಬೆನ್ನುಹತ್ತುವದು
ಅದು ಅವನಿಗೆ ಕೆಟ್ಟ ಚಟ ಇತ್ತಂತೆ
ಹೆಂಡತಿ ಒಣ ಕಣ್ಣು ಒತ್ತಿ ಒತ್ತಿ ಹೇಳಿ
ಏನೇನೊ? ತೋಡಿಕೊಳ್ಳುತ್ತಾಳೆ.

ಅವನು ಒಂದು ರಾತ್ರಿ ಕುಡಿಯುವ
ಜಾನಿವಾಕರ್ ವೊಡ್ಕಾದ ಹಣದಲ್ಲಿ
ಅವನ ಹಳ್ಳಿಯ ಹತ್ತು ಜನರ ಮದುವೆಮಾಡಿ
ಪುಣ್ಯಕಟ್ಟಿಕೊಳ್ಳಬಹುದಿತ್ತಂತೆ.

ಅವನು ಮಾಡುವ ಭರ್ಜರಿ ಪಾರ್ಟಿಖರ್ಚಿನಲಿ
ಅವನೂರಿನ ದೇವರ ಜಾತ್ರೆ
ಅದ್ದೂರಿಯಾಗಿ ಮಾಡಿ ಸಾವಿರ ಜನರಿಗೆ
ಉಣಬಡಿಸಬಹುದಿತ್ತಂತೆ.

ಅವನು ಬೆನ್ನುಹತ್ತುವ ಹೆಣ್ಣುಗಳನೆಲ್ಲ
ಸೋದರಿಯಂತೆ ನೋಡಿಕೊಂಡಿದ್ದರೆ
ಅವರವರು ಮರ್ಯಾದೆಯಾಗಿದ್ದು
ಸಂಸಾರಸ್ಥೆಯರಾಗಿರುತ್ತಿದ್ದರಂತೆ.

ಏರಿಳಿಕೆಯ ಧ್ವನಿಯಲ್ಲೂ
ಸರಳವಾಗಿ ಉದುರುವ ಮಾತುಗಳು.
ಮೌನ ಬಂಗಾರ ಎಂದು ಗೊತ್ತಿದ್ದರೂ
ಹಿತ್ತಾಳೆ ಮಾಡಿ ಕಿಲುಬಲು ಬಿಟ್ಟ
ಗೋಳಾಡಿದಳು.
ಕಾಡು ಬೆಕ್ಕು ಎನ್ನಲೇ
ತೊಂಡರಗೂಳಿ ಎನ್ನಲೇ
ಕಿಡಿಕಿಡಿಯಾಗುತ್ತಿದ್ದಳು.

ಮಧ್ಯರಾತ್ರಿಯ ಮದಿರಾಣಿಯರು
ಗುಂಡು ಇಳಿಸುವ ಗಂಡಬೇರುಂಡರ
ತೆಕ್ಕೆಗಳ ಸುಖ ಹರಡುತ್ತಲೇ ಇದ್ದಷ್ಟು
ಹೀಗೆಽ ಅಗಾಗ
ಸತ್ತು ಬೀಳುತ್ತಾರೆ ಬಿಡಿ…
——–
‘ಮನುಷ್ಯನ ಗುಣ ಮನಸ್ಸು ಹಿನ್ನೆಲೆಗಳನ್ನು ಅವನ ನಡೆ ನುಡಿಗಳೇ ವಿಶದವಾಗಿ ತಿಳಿಸುತ್ತವೆ’ – ರಾಮಾಯಣ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...