ಸತ್ಯದ ನೆತ್ತಿಯ ಮೇಲೆ

ಸತ್ತು ಬಿದ್ದಿದ್ದಾನೆ ಒಬ್ಬ VIP
ಬೆಳ್ಳಂ ಬೆಳಗಾಗುವುದರಲ್ಲಿ
ಆತ ಯಾರೇ ಇರಲಿ
ದೊಡ್ಡ ಆಫೀಸರ್ ಬಿಸಿನೆಸ್‌ಮ್ಯಾನ್
ರಾಜಕಾರಣಿ ಸಾಹಿತಿಯೂ ಇರಬಹುದು
ನೀವು ತಿಳಿದುಕೊಂಡಂತೆ.

ಕುಡಿಯುವದು ಹೆಣ್ಣುಗಳಿಗೆ ಬೆನ್ನುಹತ್ತುವದು
ಅದು ಅವನಿಗೆ ಕೆಟ್ಟ ಚಟ ಇತ್ತಂತೆ
ಹೆಂಡತಿ ಒಣ ಕಣ್ಣು ಒತ್ತಿ ಒತ್ತಿ ಹೇಳಿ
ಏನೇನೊ? ತೋಡಿಕೊಳ್ಳುತ್ತಾಳೆ.

ಅವನು ಒಂದು ರಾತ್ರಿ ಕುಡಿಯುವ
ಜಾನಿವಾಕರ್ ವೊಡ್ಕಾದ ಹಣದಲ್ಲಿ
ಅವನ ಹಳ್ಳಿಯ ಹತ್ತು ಜನರ ಮದುವೆಮಾಡಿ
ಪುಣ್ಯಕಟ್ಟಿಕೊಳ್ಳಬಹುದಿತ್ತಂತೆ.

ಅವನು ಮಾಡುವ ಭರ್ಜರಿ ಪಾರ್ಟಿಖರ್ಚಿನಲಿ
ಅವನೂರಿನ ದೇವರ ಜಾತ್ರೆ
ಅದ್ದೂರಿಯಾಗಿ ಮಾಡಿ ಸಾವಿರ ಜನರಿಗೆ
ಉಣಬಡಿಸಬಹುದಿತ್ತಂತೆ.

ಅವನು ಬೆನ್ನುಹತ್ತುವ ಹೆಣ್ಣುಗಳನೆಲ್ಲ
ಸೋದರಿಯಂತೆ ನೋಡಿಕೊಂಡಿದ್ದರೆ
ಅವರವರು ಮರ್ಯಾದೆಯಾಗಿದ್ದು
ಸಂಸಾರಸ್ಥೆಯರಾಗಿರುತ್ತಿದ್ದರಂತೆ.

ಏರಿಳಿಕೆಯ ಧ್ವನಿಯಲ್ಲೂ
ಸರಳವಾಗಿ ಉದುರುವ ಮಾತುಗಳು.
ಮೌನ ಬಂಗಾರ ಎಂದು ಗೊತ್ತಿದ್ದರೂ
ಹಿತ್ತಾಳೆ ಮಾಡಿ ಕಿಲುಬಲು ಬಿಟ್ಟ
ಗೋಳಾಡಿದಳು.
ಕಾಡು ಬೆಕ್ಕು ಎನ್ನಲೇ
ತೊಂಡರಗೂಳಿ ಎನ್ನಲೇ
ಕಿಡಿಕಿಡಿಯಾಗುತ್ತಿದ್ದಳು.

ಮಧ್ಯರಾತ್ರಿಯ ಮದಿರಾಣಿಯರು
ಗುಂಡು ಇಳಿಸುವ ಗಂಡಬೇರುಂಡರ
ತೆಕ್ಕೆಗಳ ಸುಖ ಹರಡುತ್ತಲೇ ಇದ್ದಷ್ಟು
ಹೀಗೆಽ ಅಗಾಗ
ಸತ್ತು ಬೀಳುತ್ತಾರೆ ಬಿಡಿ…
——–
‘ಮನುಷ್ಯನ ಗುಣ ಮನಸ್ಸು ಹಿನ್ನೆಲೆಗಳನ್ನು ಅವನ ನಡೆ ನುಡಿಗಳೇ ವಿಶದವಾಗಿ ತಿಳಿಸುತ್ತವೆ’ – ರಾಮಾಯಣ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುರುದೇವ
Next post ಮಾತು – ಮೌನ

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

cheap jordans|wholesale air max|wholesale jordans|wholesale jewelry|wholesale jerseys