ಗುರುದೇವ

ಅಂತರಂಗದಿ ಕರುಣವಿರಿಸುವ
ಅಂತರಾತ್ಮ ವಿಚಾರನೆ
ಭ್ರಾಂತಿಹರ ಅದ್ವೈತ ಸಿದ್ಧನೆ
ಸ್ವಾಮಿ! ಚಿಂತವಿದೂರನೇ

ನಿಮ್ಮ ನುಡಿಗಳ ಕೇಳಿ ತಣಿದೆನು
ಸರಿ ಇದೆನ್ನುತ ತಿಳಿದೆನು
ಕರುವು ತಾಯನು ಅಗಲಿದಂದದಿ
ಏನೊ ಬಳಲುತಲಿರುವೆನು

ಹಿಂದು ಮುಂದುಗಳೊಂದನರಿಯದೆ
ಸುತ್ತ ನೋಡುತಲಿರುವೆನು
ದ್ವಂದ್ವಭಾವವನಳಿಸಲಾರದೆ
ನಿರುತ ಯೋಚಿಸುತಿರುವೆನು

ಸಗುಣ ನಿರ್ಗುಣ ಸರ್ವವ್ಯಾಪ್ತನ
ಸಚ್ಚಿದಾನಂದಾತ್ಮನ
ಅಗಣಿತನ ಆ ವೇದಪುರುಷನ
ತಿಳಿಯಲಾರದೆ ಸೋತೆನು

ಅಣುವು ಮಹತುಗಳೊಳಗೆ ತುಂಬಿಹ
ವಿಶ್ವಶಕ್ತಿಗೆ ಮಣಿವೆನು
ಮುನಿಗಣಸ್ತುತ ಘನ ಮಹಾತ್ಮನೆ
ಭಜನೆ ಮಾಡುತಲಿರುವೆನು

ಒಮ್ಮೆ ಕಾಂತಿಯ ಕಡಲ ಕಾಂಬೆನು
ಒಮ್ಮೆ ತಳಮಳಗೊಂಬೆನು
ಒಮ್ಮೆ ಹರುಷದಿ ನಲಿಯುತಿರುವೆನು
ಒಮ್ಮೆ ಕಂಬನಿಗರೆವೆನು

ನಿಮ್ಮ ತತ್ವವನರಿಯದಿರ್ದೊಡೆ
ತನ್ಮಯತ್ವವನರಿವೆನೆ?
ಮಾನ್ಯ ಓ ಗುರುದೇವ ನಿಮ್ಮನು
ಭಗಿನಿ ಜನಕಜೆ ಮರೆವೆನೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀನೆಲ್ಲೋ ನಾನೆಲ್ಲೋ ದೂರದೂರ
Next post ಸತ್ಯದ ನೆತ್ತಿಯ ಮೇಲೆ

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

cheap jordans|wholesale air max|wholesale jordans|wholesale jewelry|wholesale jerseys