ಗುರುದೇವ

ಅಂತರಂಗದಿ ಕರುಣವಿರಿಸುವ
ಅಂತರಾತ್ಮ ವಿಚಾರನೆ
ಭ್ರಾಂತಿಹರ ಅದ್ವೈತ ಸಿದ್ಧನೆ
ಸ್ವಾಮಿ! ಚಿಂತವಿದೂರನೇ

ನಿಮ್ಮ ನುಡಿಗಳ ಕೇಳಿ ತಣಿದೆನು
ಸರಿ ಇದೆನ್ನುತ ತಿಳಿದೆನು
ಕರುವು ತಾಯನು ಅಗಲಿದಂದದಿ
ಏನೊ ಬಳಲುತಲಿರುವೆನು

ಹಿಂದು ಮುಂದುಗಳೊಂದನರಿಯದೆ
ಸುತ್ತ ನೋಡುತಲಿರುವೆನು
ದ್ವಂದ್ವಭಾವವನಳಿಸಲಾರದೆ
ನಿರುತ ಯೋಚಿಸುತಿರುವೆನು

ಸಗುಣ ನಿರ್ಗುಣ ಸರ್ವವ್ಯಾಪ್ತನ
ಸಚ್ಚಿದಾನಂದಾತ್ಮನ
ಅಗಣಿತನ ಆ ವೇದಪುರುಷನ
ತಿಳಿಯಲಾರದೆ ಸೋತೆನು

ಅಣುವು ಮಹತುಗಳೊಳಗೆ ತುಂಬಿಹ
ವಿಶ್ವಶಕ್ತಿಗೆ ಮಣಿವೆನು
ಮುನಿಗಣಸ್ತುತ ಘನ ಮಹಾತ್ಮನೆ
ಭಜನೆ ಮಾಡುತಲಿರುವೆನು

ಒಮ್ಮೆ ಕಾಂತಿಯ ಕಡಲ ಕಾಂಬೆನು
ಒಮ್ಮೆ ತಳಮಳಗೊಂಬೆನು
ಒಮ್ಮೆ ಹರುಷದಿ ನಲಿಯುತಿರುವೆನು
ಒಮ್ಮೆ ಕಂಬನಿಗರೆವೆನು

ನಿಮ್ಮ ತತ್ವವನರಿಯದಿರ್ದೊಡೆ
ತನ್ಮಯತ್ವವನರಿವೆನೆ?
ಮಾನ್ಯ ಓ ಗುರುದೇವ ನಿಮ್ಮನು
ಭಗಿನಿ ಜನಕಜೆ ಮರೆವೆನೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀನೆಲ್ಲೋ ನಾನೆಲ್ಲೋ ದೂರದೂರ
Next post ಸತ್ಯದ ನೆತ್ತಿಯ ಮೇಲೆ

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…