ಹೇಗೆ ಹೇಳಲೇ ಗೆಳತಿ

ಹೇಗೆ ಹೇಳಲೇ ಗೆಳತಿ
ದಿನವಿಡಿ ಹರಿಯದೇ ಧ್ಯಾನ,
ಈ ಕಳ್ಳನ ಮಾಯೆಗೆ ಸಿಕ್ಕಿ
ಕಳೆದುಕೊಂಡೆನೇ ಮಾನ

ಇವನಿಗೆ ಕಾದೂ ಕಾದೂ
ಮೈಯೆಲ್ಲಾ ಬಿಸಿ ಬಾಣಲೆ
ಬತ್ತ ಸಿಡಿಸಿದರು ಸಾಕು
ಅರಳಾಗುವುದೇ ಕೂಡಲೆ

ಹೇಳದೆ ಬಂದೇ ಬಿಡುವ
ಕರೆದರೂ ಬಾರದ ಹುಡುಗ,
ಮರುಳು ಮಾಡಿಯೇ ಬಿಡುವ
ಹಾಲು ಬೆಣ್ಣೆಗಳ ತುಡುಗ.

ಏನು ಧೀರನೇ ಪೋರ
ದಿನ್ನೆಯ ಸಲೀಸು ಏರುವ
ಎಲ್ಲರ ಕಣ್ಣೂ ತಪ್ಪಿಸಿ
ಕಣಿವೆಯ ತಳಕೂ ಇಳಿವ

ಈ ದಿನ ಸಿಕ್ಕೇ ಸಿಗುವ
ಎನ್ನಿಸುವುದು ಭ್ರಮೆಯಲ್ಲಿ
ಸಿಗುವುದೇನೊ ಹರಿ ನಿಜವೇ
ತಪ್ಪದೆ ರಾತ್ರಿ ಕನಸಲ್ಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೬
Next post ಲಿಂಗಮ್ಮನ ವಚನಗಳು – ೧೦೦

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…