ಬೆಟ್ಟ ಬೆಂದಿತ್ತು. ಬಿದಿರುಗಣ್ಣು ಒಡೆದಿತ್ತು.
ಸುತ್ತನೋಡಿದರೆ ನಿರಾಳವಾಯಿತ್ತು.
ಕತ್ತಲೆ ಹರಿಯಿತ್ತು. ಮನ ಬತ್ತಲೆಯಾಯಿತ್ತು.
ಚಿತ್ತ ಮನ ಬುದ್ಧಿ ಏಕವಾದವು.
ಎಚ್ಚತ್ತು ನೋಡಿದರೆ, ಬಚ್ಚಬರಿಯ ಬೆಳಗಲ್ಲದೆ,
ಕತ್ತಲೆಯ ಕಾಣಬಾರದು ಕಾಣಾ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****
ಬೆಟ್ಟ ಬೆಂದಿತ್ತು. ಬಿದಿರುಗಣ್ಣು ಒಡೆದಿತ್ತು.
ಸುತ್ತನೋಡಿದರೆ ನಿರಾಳವಾಯಿತ್ತು.
ಕತ್ತಲೆ ಹರಿಯಿತ್ತು. ಮನ ಬತ್ತಲೆಯಾಯಿತ್ತು.
ಚಿತ್ತ ಮನ ಬುದ್ಧಿ ಏಕವಾದವು.
ಎಚ್ಚತ್ತು ನೋಡಿದರೆ, ಬಚ್ಚಬರಿಯ ಬೆಳಗಲ್ಲದೆ,
ಕತ್ತಲೆಯ ಕಾಣಬಾರದು ಕಾಣಾ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****