ದೀರ್ಘಾಯುಷ್ಯದ ಗುಟ್ಟು

ದೀರ್ಘಾಯುಷ್ಯದ ಗುಟ್ಟು

ನೀವು ನೂರು ವರ್‍ಷ ಬಾಳಬೇಕೆನ್ನುವಿರಾ? ಹಾಘಾದರೆ, ನೂರು ವರ್‍ಷ ಬಾಳಬೇಕೆನುವವರಿಗೆ ನೂರು ವರ್‍ಷ ಬಾಳಿದ ಡಾ || ಎಂ ವಿಶ್ವೇಶ್ವರಯ್ಯ (೧೫-೦೯-೧೮೬೦-೧೯೬೦) ರವರ ಕೆಲ ಸಲಹೆಗಳಿವೆ. ಅವು:

೧) ನಿಮ್ಮ ಮನಸಾಕ್ಷಿಯನ್ನು ಪೀಡಿಸಿ ಕ್ಷಯಿಸುವಂಥ ಕೆಲಸಗಳನ್ನು ಮಾಡಬೇಡಿರಿ. ಕೊರೆಯುವ ಮನಸಾಕ್ಷಿಯ ಮೂಲಕವೇ ಬಹಳ ಜನರ ಆರೋಗ್ಯ ಕೆಟ್ಟು ಅವರು ವೃದ್ಧರಾಗುತ್ತಾರೆ.

೨) ಉಲ್ಲಾಸಚಿತ್ತರಾಗಿರುವ ಅಭ್ಯಾಸವನ್ನು ರೂಢಿಸಿಕೊಳ್ಳಿರಿ. ಉಲ್ಲಾಸವು ಮುದುಕನಲ್ಲಿರುವ ತಾರುಣ್ಯಕ್ಕೆ ಸಾಕ್ಷಿಯಾಗಿರುತ್ತದೆ.

೩) ಅಗತ್ಯವಿರುವಷ್ಟೇ ತಿನ್ನಿರಿ; ಪೌಷ್ಠಿಕ ಅನ್ನವನ್ನಲ್ಲದೆ ವಿಷಯುಕ್ತವಾದ ಮಿಠಾಯಿಗಳನ್ನು ಖಂಡಿತಾ ತಿನ್ನಬೇಡಿರಿ.

೪) ಪ್ರತಿ ೨೪ ತಾಸುಗಳಲ್ಲಿಯೂ ನಿಯಮಿತವಾಗಿ ಒಂದಿಷ್ಟು ತಾಸು ಎಂದು ನಿಶ್ಚಯಿಸಿಕೊಂಡು ನಿದ್ದೆ ಮಾಡಿರಿ. ನಾಳೆ ಮಾಡಿದರಾಯಿತು ಎಂದು ಇಂದಿನ ನಿದ್ದೆಯನ್ನು ಕೆಡಿಸಿಕೊಳ್ಳುವ ಚಟಕ್ಕೆ ತುತಾಗಬೇಡಿರಿ.

೪) ವಿನೋದದಲ್ಲಿ ಕಾಲ ಕಳೆಯಿರಿ. ವಿನೋದ ಎಂದರೆ ಕ್ರಿಕೆಟ್ ಅಥವಾ ಗೋಲ್ಫ್ (ಒಂದು ತರದ ಆಟ)ಗಳಲ್ಲ! ಏಕೆಂದರೆ ಈ ಆಟಗಳೂ ಕೂಡ ಒಂದು ಬಗೆಯ ಕೆಲಸವೇ ಅಗಿವೆ. ಇದಕ್ಕಿಂತಲೂ ಸರಳವಾದ ಮಕ್ಕಳೊಂದಿಗೆ ಚಿನ್ನಾಟವಾಡುವಂಥ ವಿನೋದಗಳಲ್ಲಿ ಕಾಲಕಳೆಯಿರಿ.

೬) ನಿಮ್ಮ ಉತ್ಪನ್ನದ ಮಿತಿಯಲ್ಲಿ ಜೀವನ ಸಾಗಿಸಿರಿ. ನಿಮ್ಮ ಸಂತೋಷ ಪ್ರಾಪ್ತಿಗೆ ಒಂದು ಧ್ಯೇಯ ಇತರರಿಗೆ ಲಾಭದಾಯಕವಾಗುವಂತಿರಲಿ.

೭) ದಿನಂಪ್ರತಿ ಇಂತಿಷ್ಟು ಸಮಯ ಎಂದು ನಿರ್‍ಧರಿಸಿ ತಪ್ಪದೇ ವ್ಯಾಯಾಮ ಮಾಡಿರಿ.

೮) ಬೀಡಿ, ಸಿಗರೇಟು, ಗಾಂಜಾ ಮಧ್ಯ ಇಂಥ ಯಾವ ಆರೋಗ್ಯ ವಿಘಾತಕ ಕೆಟ್ಟ ವ್ಯಸನಗಳನ್ನು ರೂಢಿಸಿಕೊಳ್ಳಬೇಡಿರಿ. ಇವುಗಳಿಂದ ಸಂಪೂರ್‍ಣವಾಘಿ ದೂರವಿರಿ.

ವಿಶ್ವೇಶ್ವರಯ್ಯನವರು ಮೇಲೆ ಹೇಳಿದ ೮ ಸುಸೂತ್ರಗಳನ್ನು ಚೆನ್ನಾಗಿ ನೆನಪಿಟ್ಟು ತಪ್ಪದೇ ಪಾಲಿಸಿರಿ. ಆಗ ನೀವು ದೀರ್ಘಾಯುಷಿಯಾಗಲು ಸಂದೇಹವೇ ಇಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪರಿಣಾಮ
Next post ಮರದಡಿಯಲಿ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

cheap jordans|wholesale air max|wholesale jordans|wholesale jewelry|wholesale jerseys