Home / ಲೇಖನ / ಇತರೆ / ದೀರ್ಘಾಯುಷ್ಯದ ಗುಟ್ಟು

ದೀರ್ಘಾಯುಷ್ಯದ ಗುಟ್ಟು

ನೀವು ನೂರು ವರ್‍ಷ ಬಾಳಬೇಕೆನ್ನುವಿರಾ? ಹಾಘಾದರೆ, ನೂರು ವರ್‍ಷ ಬಾಳಬೇಕೆನುವವರಿಗೆ ನೂರು ವರ್‍ಷ ಬಾಳಿದ ಡಾ || ಎಂ ವಿಶ್ವೇಶ್ವರಯ್ಯ (೧೫-೦೯-೧೮೬೦-೧೯೬೦) ರವರ ಕೆಲ ಸಲಹೆಗಳಿವೆ. ಅವು:

೧) ನಿಮ್ಮ ಮನಸಾಕ್ಷಿಯನ್ನು ಪೀಡಿಸಿ ಕ್ಷಯಿಸುವಂಥ ಕೆಲಸಗಳನ್ನು ಮಾಡಬೇಡಿರಿ. ಕೊರೆಯುವ ಮನಸಾಕ್ಷಿಯ ಮೂಲಕವೇ ಬಹಳ ಜನರ ಆರೋಗ್ಯ ಕೆಟ್ಟು ಅವರು ವೃದ್ಧರಾಗುತ್ತಾರೆ.

೨) ಉಲ್ಲಾಸಚಿತ್ತರಾಗಿರುವ ಅಭ್ಯಾಸವನ್ನು ರೂಢಿಸಿಕೊಳ್ಳಿರಿ. ಉಲ್ಲಾಸವು ಮುದುಕನಲ್ಲಿರುವ ತಾರುಣ್ಯಕ್ಕೆ ಸಾಕ್ಷಿಯಾಗಿರುತ್ತದೆ.

೩) ಅಗತ್ಯವಿರುವಷ್ಟೇ ತಿನ್ನಿರಿ; ಪೌಷ್ಠಿಕ ಅನ್ನವನ್ನಲ್ಲದೆ ವಿಷಯುಕ್ತವಾದ ಮಿಠಾಯಿಗಳನ್ನು ಖಂಡಿತಾ ತಿನ್ನಬೇಡಿರಿ.

೪) ಪ್ರತಿ ೨೪ ತಾಸುಗಳಲ್ಲಿಯೂ ನಿಯಮಿತವಾಗಿ ಒಂದಿಷ್ಟು ತಾಸು ಎಂದು ನಿಶ್ಚಯಿಸಿಕೊಂಡು ನಿದ್ದೆ ಮಾಡಿರಿ. ನಾಳೆ ಮಾಡಿದರಾಯಿತು ಎಂದು ಇಂದಿನ ನಿದ್ದೆಯನ್ನು ಕೆಡಿಸಿಕೊಳ್ಳುವ ಚಟಕ್ಕೆ ತುತಾಗಬೇಡಿರಿ.

೪) ವಿನೋದದಲ್ಲಿ ಕಾಲ ಕಳೆಯಿರಿ. ವಿನೋದ ಎಂದರೆ ಕ್ರಿಕೆಟ್ ಅಥವಾ ಗೋಲ್ಫ್ (ಒಂದು ತರದ ಆಟ)ಗಳಲ್ಲ! ಏಕೆಂದರೆ ಈ ಆಟಗಳೂ ಕೂಡ ಒಂದು ಬಗೆಯ ಕೆಲಸವೇ ಅಗಿವೆ. ಇದಕ್ಕಿಂತಲೂ ಸರಳವಾದ ಮಕ್ಕಳೊಂದಿಗೆ ಚಿನ್ನಾಟವಾಡುವಂಥ ವಿನೋದಗಳಲ್ಲಿ ಕಾಲಕಳೆಯಿರಿ.

೬) ನಿಮ್ಮ ಉತ್ಪನ್ನದ ಮಿತಿಯಲ್ಲಿ ಜೀವನ ಸಾಗಿಸಿರಿ. ನಿಮ್ಮ ಸಂತೋಷ ಪ್ರಾಪ್ತಿಗೆ ಒಂದು ಧ್ಯೇಯ ಇತರರಿಗೆ ಲಾಭದಾಯಕವಾಗುವಂತಿರಲಿ.

೭) ದಿನಂಪ್ರತಿ ಇಂತಿಷ್ಟು ಸಮಯ ಎಂದು ನಿರ್‍ಧರಿಸಿ ತಪ್ಪದೇ ವ್ಯಾಯಾಮ ಮಾಡಿರಿ.

೮) ಬೀಡಿ, ಸಿಗರೇಟು, ಗಾಂಜಾ ಮಧ್ಯ ಇಂಥ ಯಾವ ಆರೋಗ್ಯ ವಿಘಾತಕ ಕೆಟ್ಟ ವ್ಯಸನಗಳನ್ನು ರೂಢಿಸಿಕೊಳ್ಳಬೇಡಿರಿ. ಇವುಗಳಿಂದ ಸಂಪೂರ್‍ಣವಾಘಿ ದೂರವಿರಿ.

ವಿಶ್ವೇಶ್ವರಯ್ಯನವರು ಮೇಲೆ ಹೇಳಿದ ೮ ಸುಸೂತ್ರಗಳನ್ನು ಚೆನ್ನಾಗಿ ನೆನಪಿಟ್ಟು ತಪ್ಪದೇ ಪಾಲಿಸಿರಿ. ಆಗ ನೀವು ದೀರ್ಘಾಯುಷಿಯಾಗಲು ಸಂದೇಹವೇ ಇಲ್ಲ.
*****

Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...