Home / ಲೇಖನ / ಇತರೆ / ದೀರ್ಘಾಯುಷ್ಯದ ಗುಟ್ಟು

ದೀರ್ಘಾಯುಷ್ಯದ ಗುಟ್ಟು

ನೀವು ನೂರು ವರ್‍ಷ ಬಾಳಬೇಕೆನ್ನುವಿರಾ? ಹಾಘಾದರೆ, ನೂರು ವರ್‍ಷ ಬಾಳಬೇಕೆನುವವರಿಗೆ ನೂರು ವರ್‍ಷ ಬಾಳಿದ ಡಾ || ಎಂ ವಿಶ್ವೇಶ್ವರಯ್ಯ (೧೫-೦೯-೧೮೬೦-೧೯೬೦) ರವರ ಕೆಲ ಸಲಹೆಗಳಿವೆ. ಅವು:

೧) ನಿಮ್ಮ ಮನಸಾಕ್ಷಿಯನ್ನು ಪೀಡಿಸಿ ಕ್ಷಯಿಸುವಂಥ ಕೆಲಸಗಳನ್ನು ಮಾಡಬೇಡಿರಿ. ಕೊರೆಯುವ ಮನಸಾಕ್ಷಿಯ ಮೂಲಕವೇ ಬಹಳ ಜನರ ಆರೋಗ್ಯ ಕೆಟ್ಟು ಅವರು ವೃದ್ಧರಾಗುತ್ತಾರೆ.

೨) ಉಲ್ಲಾಸಚಿತ್ತರಾಗಿರುವ ಅಭ್ಯಾಸವನ್ನು ರೂಢಿಸಿಕೊಳ್ಳಿರಿ. ಉಲ್ಲಾಸವು ಮುದುಕನಲ್ಲಿರುವ ತಾರುಣ್ಯಕ್ಕೆ ಸಾಕ್ಷಿಯಾಗಿರುತ್ತದೆ.

೩) ಅಗತ್ಯವಿರುವಷ್ಟೇ ತಿನ್ನಿರಿ; ಪೌಷ್ಠಿಕ ಅನ್ನವನ್ನಲ್ಲದೆ ವಿಷಯುಕ್ತವಾದ ಮಿಠಾಯಿಗಳನ್ನು ಖಂಡಿತಾ ತಿನ್ನಬೇಡಿರಿ.

೪) ಪ್ರತಿ ೨೪ ತಾಸುಗಳಲ್ಲಿಯೂ ನಿಯಮಿತವಾಗಿ ಒಂದಿಷ್ಟು ತಾಸು ಎಂದು ನಿಶ್ಚಯಿಸಿಕೊಂಡು ನಿದ್ದೆ ಮಾಡಿರಿ. ನಾಳೆ ಮಾಡಿದರಾಯಿತು ಎಂದು ಇಂದಿನ ನಿದ್ದೆಯನ್ನು ಕೆಡಿಸಿಕೊಳ್ಳುವ ಚಟಕ್ಕೆ ತುತಾಗಬೇಡಿರಿ.

೪) ವಿನೋದದಲ್ಲಿ ಕಾಲ ಕಳೆಯಿರಿ. ವಿನೋದ ಎಂದರೆ ಕ್ರಿಕೆಟ್ ಅಥವಾ ಗೋಲ್ಫ್ (ಒಂದು ತರದ ಆಟ)ಗಳಲ್ಲ! ಏಕೆಂದರೆ ಈ ಆಟಗಳೂ ಕೂಡ ಒಂದು ಬಗೆಯ ಕೆಲಸವೇ ಅಗಿವೆ. ಇದಕ್ಕಿಂತಲೂ ಸರಳವಾದ ಮಕ್ಕಳೊಂದಿಗೆ ಚಿನ್ನಾಟವಾಡುವಂಥ ವಿನೋದಗಳಲ್ಲಿ ಕಾಲಕಳೆಯಿರಿ.

೬) ನಿಮ್ಮ ಉತ್ಪನ್ನದ ಮಿತಿಯಲ್ಲಿ ಜೀವನ ಸಾಗಿಸಿರಿ. ನಿಮ್ಮ ಸಂತೋಷ ಪ್ರಾಪ್ತಿಗೆ ಒಂದು ಧ್ಯೇಯ ಇತರರಿಗೆ ಲಾಭದಾಯಕವಾಗುವಂತಿರಲಿ.

೭) ದಿನಂಪ್ರತಿ ಇಂತಿಷ್ಟು ಸಮಯ ಎಂದು ನಿರ್‍ಧರಿಸಿ ತಪ್ಪದೇ ವ್ಯಾಯಾಮ ಮಾಡಿರಿ.

೮) ಬೀಡಿ, ಸಿಗರೇಟು, ಗಾಂಜಾ ಮಧ್ಯ ಇಂಥ ಯಾವ ಆರೋಗ್ಯ ವಿಘಾತಕ ಕೆಟ್ಟ ವ್ಯಸನಗಳನ್ನು ರೂಢಿಸಿಕೊಳ್ಳಬೇಡಿರಿ. ಇವುಗಳಿಂದ ಸಂಪೂರ್‍ಣವಾಘಿ ದೂರವಿರಿ.

ವಿಶ್ವೇಶ್ವರಯ್ಯನವರು ಮೇಲೆ ಹೇಳಿದ ೮ ಸುಸೂತ್ರಗಳನ್ನು ಚೆನ್ನಾಗಿ ನೆನಪಿಟ್ಟು ತಪ್ಪದೇ ಪಾಲಿಸಿರಿ. ಆಗ ನೀವು ದೀರ್ಘಾಯುಷಿಯಾಗಲು ಸಂದೇಹವೇ ಇಲ್ಲ.
*****

Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...