ಮರದಡಿಯಲಿ

ಇಬ್ಬನಿ ಹನಿ ಹನಿ ಸುರಿದು
ಹಾಸಿದ ತಂಪಿನ ಹೊತ್ತು
ನಿನ್ನ ಕಣ್ಗಳು ನನ್ನ ದಿಟ್ಟಿಸುತ್ತಿದ್ದವು
ಎಲ್ಲಾ ನೀರಸಗಳ ಸರಿಸಿ ಸೂರ್ಯ
ನಮ್ಮಿಬ್ಬರನು ತಬ್ಬಲು ಏರಿಬಂದ
ಹಕ್ಕಿ ಹಾರಿಹೋದ ತೇಲು ಬೆಳಗು
ಎದೆಯ ನದಿಯಲಿ ರಂಜಕದಲೆಗಳು.

ಪುಟ್ಟ ಇರುವೆ ಗೂಡ ಸರಿಸಿ
ಚಲಿಸಿದ ಚಲನೆ ಅಂಗಾಲು ತುಂಬ
ಕಚಗುಳಿ ಕಂದು ಬಣ್ಣದ ಎಲೆಯ
ತುಂಬ ವಿಷಾಧದ ಮೌನ ಕನಸುಗಳ
ದಿಗಂತ ಒಮ್ಮೆ ನೀಲಿಯಾಗಿ ಬಿಳಿಯಾಗಿ
ಮರದ ಎಲೆ ತುಂಬಾ ಕರಿನೆರಳ ಹಾಡು.

ಮೌನ ಕಳೆದು ಮಾತುಗಳ ಲಂಗರು
ಅಪ್ಪಳಿಸಿದ ಅಲೆಗಳ ಒಲವು
ದಟ್ಟ ಹೊಲದಲಿ ಅರಳಿದ ಸೂರ್ಯಕಾಂತಿ
ಮಂಜು ಮುಸುಕಿದ ಬಯಲು ಆಲಯ
ಮಾಗಿದ ಪ್ರೇಮ ನಿವೇದನೆ
ಮರದಡಿ ಗಡಿಯಾರದ ಚಲನೆ.

ನಾವು ಹಾಡಲಾಗದ ಹಾಡು ಕತ್ತಲೆ
ಬರೆಯಲಾರದ ಕವಿತೆಗಳು ಮಬ್ಬು
ಎಲ್ಲವೂ ಆಗಿ ಆಗದೇ ಅರಳಿ ನಿಂತ
ಮೌನ ಮರ ನೆರಳು ಬಿಂಬದಲಿ
ಮೂಡಿದ ಪ್ರತಿಬಿಂಬ ಲಂಬಕೆ
ಸಾಕ್ಷೀ ಅಂತರಂಗದ ಚಿಗುರು ಹಸಿರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೀರ್ಘಾಯುಷ್ಯದ ಗುಟ್ಟು
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೫೨

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…