ಹಾವು ಕಡಿದವರಿಗೆ ಸಿದ್ಧೌಷಧಿ (ಆಯುರ್ವೇದ)

ರೈತರು, ರೈತಮಕ್ಕಳು, ದನಗಾಹಿಗಳು, ಅರಣ್ಯನಿವಾಸಿಗಳು ಮೇಲಿಂದ ಮೇಲೆ ಕಾಡು, ಮೇಡು, ಪೊಟರೆ, ಹಳ್ಳ, ಗಿಡ, ಬಳ್ಳಿಗಳ ನಡುವೆ ತಿರುಗಾಡಲೇ ಬೇಕಾಗುತ್ತದೆ. ಆಗ ಸಹಜವಾಗಿ ವಿಷಜಂತುವಾದ ಹಾವು ಕಚ್ಚಿಬಿಡುತ್ತದೆ. ಆಗ ತಕ್ಷಣಕ್ಕೆ ಔಷಧಿ ಅಥವಾ ಇಂಗ್ಲಿಷ್ ಚಿಕಿತ್ಸೆ ಸಿಗದೇ ಸಾವನ್ನಪ್ಪಬಹುದು. ಈ ರೀತಿಯಾಗಿ ಭಾರತದೇಶದಲ್ಲೊಂದೆ ೨೫ ಸಾವಿರದಷ್ಟು ಜನ ಅಸುನೀಗುತ್ತಾರೆಂದರೆ ಇದರ ಭೀರಕರತೆಯ ಅರ್ಥವಾಗುತ್ತದೆ. ಈ ಸಂದರ್ಭದಲ್ಲಿ ತಕ್ಷಣ ಸಿಗುವ ಆಯುರ್ವೇದ ಸೊಪ್ಪುಗಳನ್ನು ಕಲೆಹಾಕಿ ಸೇವಿಸಿದರೆ ಸಾವನ್ನು ತಪ್ಪಿಸಬಹುದು.

ಒಂದೆಲಗ (ಜ್ಞಾನಪತ್ರೆ), ಕರಿಲಕ್ಕಿ ಸೊಪ್ಪು, ಕರಿನುಗ್ಗೆ ಸೊಪ್ಪು, ಬಿಳಿ ಎಕ್ಕದ ಸೂಪ್ಪು, ನಿಂಬೆ ತುಳಸಿಗಿಡದ ಸೊಪ್ಪು, ನಾಗದಾಳಿ ಸೊಪ್ಪು, ಆಡುಮುಟ್ಟದ ಸೊಪ್ಪು (ಕತ್ತೆಕಾಲಂಬು) ಕಹಿಸೊರೆ‌ಎಲೆ, ವಿಷಹಾರಿಸೊಪ್ಪು, ಕರಿ ಉಮ್ಮತ್ತಗದ ಎಲೆಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ನೆರಳಿನಲ್ಲಿ ಒಣಗಿಸಿ ನುಣ್ಣಗೆ ಪುಡಿಮಾಡಿ ಒಂದು ಗಾಜಿನ ಬಾಟಲಿಯಲ್ಲಿ ಅಥವಾ ಕಹಿ ಸೊರೆ ಬುರಡೆಯಲ್ಲಿ ಶೇಖರಿಸಿ ಇಟ್ಟುಕೊಂಡು ಹಾವು ಕಡಿದಾಗ ನಿಂಬೆಹಣ್ಣನ್ನು ಸಮಪಾಲುಮಾಡಿ ಮಿಶ್ರಣವನ್ನು ಈ ನಿಂಬೆ ಹಣ್ಣಿನ ಹೋಳಿಗೆ ಸೇರಿಸಿ ಚೀಪಿಸುವುದರಿಂದ ಅಥವಾ ಕುಡಿಯುವುದರಿಂದ (ನೀರನ್ನು ಸೇರಿಸಬಾರದು) ಖಂಡಿತ ಸಾವನ್ನು ತಪ್ಪಿಸಬಹುದು ಹಾವು ಕಡಿದಾಗ ನಿದ್ರೆ ಮಾಡಬಾರದು ಎಂದು ಆಯುರ್ವೇದ ವಿಜ್ಞಾನಿಗಳು ಶೃತಪಡಿಸಿದ್ದಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೀತಿ ಮಧು ಹೀರಿದ ಮೇಲೆ
Next post ಕಾಣುವ ಕಣ್ಣಿಗೆ ಎಲ್ಲಾ ಬೆರಗು

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…