Home / ಲೇಖನ / ವಿಜ್ಞಾನ / ಹಾವು ಕಡಿದವರಿಗೆ ಸಿದ್ಧೌಷಧಿ (ಆಯುರ್ವೇದ)

ಹಾವು ಕಡಿದವರಿಗೆ ಸಿದ್ಧೌಷಧಿ (ಆಯುರ್ವೇದ)

ರೈತರು, ರೈತಮಕ್ಕಳು, ದನಗಾಹಿಗಳು, ಅರಣ್ಯನಿವಾಸಿಗಳು ಮೇಲಿಂದ ಮೇಲೆ ಕಾಡು, ಮೇಡು, ಪೊಟರೆ, ಹಳ್ಳ, ಗಿಡ, ಬಳ್ಳಿಗಳ ನಡುವೆ ತಿರುಗಾಡಲೇ ಬೇಕಾಗುತ್ತದೆ. ಆಗ ಸಹಜವಾಗಿ ವಿಷಜಂತುವಾದ ಹಾವು ಕಚ್ಚಿಬಿಡುತ್ತದೆ. ಆಗ ತಕ್ಷಣಕ್ಕೆ ಔಷಧಿ ಅಥವಾ ಇಂಗ್ಲಿಷ್ ಚಿಕಿತ್ಸೆ ಸಿಗದೇ ಸಾವನ್ನಪ್ಪಬಹುದು. ಈ ರೀತಿಯಾಗಿ ಭಾರತದೇಶದಲ್ಲೊಂದೆ ೨೫ ಸಾವಿರದಷ್ಟು ಜನ ಅಸುನೀಗುತ್ತಾರೆಂದರೆ ಇದರ ಭೀರಕರತೆಯ ಅರ್ಥವಾಗುತ್ತದೆ. ಈ ಸಂದರ್ಭದಲ್ಲಿ ತಕ್ಷಣ ಸಿಗುವ ಆಯುರ್ವೇದ ಸೊಪ್ಪುಗಳನ್ನು ಕಲೆಹಾಕಿ ಸೇವಿಸಿದರೆ ಸಾವನ್ನು ತಪ್ಪಿಸಬಹುದು.

ಒಂದೆಲಗ (ಜ್ಞಾನಪತ್ರೆ), ಕರಿಲಕ್ಕಿ ಸೊಪ್ಪು, ಕರಿನುಗ್ಗೆ ಸೊಪ್ಪು, ಬಿಳಿ ಎಕ್ಕದ ಸೂಪ್ಪು, ನಿಂಬೆ ತುಳಸಿಗಿಡದ ಸೊಪ್ಪು, ನಾಗದಾಳಿ ಸೊಪ್ಪು, ಆಡುಮುಟ್ಟದ ಸೊಪ್ಪು (ಕತ್ತೆಕಾಲಂಬು) ಕಹಿಸೊರೆ‌ಎಲೆ, ವಿಷಹಾರಿಸೊಪ್ಪು, ಕರಿ ಉಮ್ಮತ್ತಗದ ಎಲೆಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ನೆರಳಿನಲ್ಲಿ ಒಣಗಿಸಿ ನುಣ್ಣಗೆ ಪುಡಿಮಾಡಿ ಒಂದು ಗಾಜಿನ ಬಾಟಲಿಯಲ್ಲಿ ಅಥವಾ ಕಹಿ ಸೊರೆ ಬುರಡೆಯಲ್ಲಿ ಶೇಖರಿಸಿ ಇಟ್ಟುಕೊಂಡು ಹಾವು ಕಡಿದಾಗ ನಿಂಬೆಹಣ್ಣನ್ನು ಸಮಪಾಲುಮಾಡಿ ಮಿಶ್ರಣವನ್ನು ಈ ನಿಂಬೆ ಹಣ್ಣಿನ ಹೋಳಿಗೆ ಸೇರಿಸಿ ಚೀಪಿಸುವುದರಿಂದ ಅಥವಾ ಕುಡಿಯುವುದರಿಂದ (ನೀರನ್ನು ಸೇರಿಸಬಾರದು) ಖಂಡಿತ ಸಾವನ್ನು ತಪ್ಪಿಸಬಹುದು ಹಾವು ಕಡಿದಾಗ ನಿದ್ರೆ ಮಾಡಬಾರದು ಎಂದು ಆಯುರ್ವೇದ ವಿಜ್ಞಾನಿಗಳು ಶೃತಪಡಿಸಿದ್ದಾರೆ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...