Home / ಲೇಖನ / ವಿಜ್ಞಾನ / ಮನುಷ್ಯನಾಗಿ ಪರಿವರ್ತನೆಯಾಗಬಹುದಾದ ಚಿಂಪಾಂಜಿ

ಮನುಷ್ಯನಾಗಿ ಪರಿವರ್ತನೆಯಾಗಬಹುದಾದ ಚಿಂಪಾಂಜಿ

ಮಂಗನಿಂದ ಮಾನವನಾದ, ಎಂಬ ವಾದವನ್ನು ಪ್ರಾಕೈತಿಹಾಸಿಕ ಹಿನ್ನೆಲೆಯಿಂದ ಅರಿಯುತ್ತೇವೆ. ಮನುಷ್ಯರಂತೆ ಸೂಕ್ಷ್ಮಮತಿಯಾದ, ಈಗಾಗಲೇ ಮನುಷ್ಯರ ಕೆಲಸಗಳನ್ನು ನಿಭಾಯಿಸುತ್ತಿರುವ ಚಿಂಪಾಂಜಿಯು ಮಾನವನ ಗುಣಗಳಿಗೆ ಹತ್ತಿರವಾಗಿದೆ. ಇದನ್ನು ನೋಡಿದ ವಿಜ್ಞಾನಿಗಳು ಚಿಂಪಾಂಜಿಯನ್ನು ಮಾನವನನ್ನಾಗಿ ಪರಿವರ್ತಿಸಬಾರದೇಕೆ? ಎಂಬ ಶೋಧನೆಯನ್ನು ನಡೆಸಿದ್ದಾರೆ. ಚಿಂಪಾಂಜಿಯಲ್ಲಿ ಇರದ ಮನುಷ್ಯರಲ್ಲಿ ಇರುವ ವಂಶವಾಹಿನಿಗಳಿಂದ ಶೋಧನೆ ನಡೆದಿದೆ. ಈ ಎರಡೂ ಜೀವಿಗಳಲ್ಲಿರುವ DNA ಸರಿಸುಮಾರು ಶೇ. ೯೮- ೪ ಒಂದೇ ಆಗಿರುತ್ತದೆ. ಅಂದರೆ ಮನುಷ್ಯ ಚಿಂಪಾಂಜಿಯ ನಡುವಿನ ಅಂತರಕ್ಕೆ ಕಾರಣ ಕೇವಲ ಶೇ. ೧೬ ವಂಶವಾಹಿನಿಗಳು ಅಂದರೆ ೫೦ ವಂಶವಾಹಿನಿಗಳು ಮಾತ್ರ ವ್ಯತ್ಯಾಸದಲ್ಲಿದೆ. ಈ ೫೦ ರಲ್ಲಿ ಮಾತ್ರ ಮಾನವತೆಯ ಗುಟ್ಟು ಅಡಗಿದೆ. ಈ ೫೦ ವಂಶವಾಹಿನಿಯನ್ನು ಗುರುತಿಸಿ ಅವುಗಳ ಆಮೂಲಾಗ್ರ ಕಾರ್ಯವೈಖರಿಯನ್ನು ಅರಿಯಬೇಕಿದೆ. ಈ ೫೦ ನ್ನು ಬೇರ್ಪಡಿಸಿ ಚಿಂಪಾಂಜಿಯ ಕ್ರೋಮೋ ಸೋಮುಗಳಲ್ಲಿ ‘ಹೊಲಿದು’ ಬಿಟ್ಟರೆ ಇವುಗಳನ್ನು ಮನುಷ್ಯರನ್ನಾಗಿ ಪರಿವರ್ತಿಸಬಹುದೆಂದು ವಿಜ್ಞಾನಿಗಳ ಲೆಕ್ಕಚಾರವಾಗಿದೆ. ಎಂದಾದರೊಂದು ದಿನ ಈ ಮನುಷ್ಯರ ಕೆಲವು ನಡುವಳಿಕೆಯನ್ನು ಹೊಂದಿದ ಚಿಂಪಾಂಜಿ ಮನುಷ್ಯನಾಗಬಹುದೆಂದರೆ ನಂಬಲು ಅಸಾಧ್ಯವೆ? ವೈಜ್ಞಾನಿಕವಾಗಿ ಅಸಾಧ್ಯವೆಲ್ಲ ಸಾಧ್ಯವಾಗುತ್ತಲೇ ಇದೆಯಲ್ಲ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...