Home / ಲೇಖನ / ವಿಜ್ಞಾನ / ಮನುಷ್ಯನಾಗಿ ಪರಿವರ್ತನೆಯಾಗಬಹುದಾದ ಚಿಂಪಾಂಜಿ

ಮನುಷ್ಯನಾಗಿ ಪರಿವರ್ತನೆಯಾಗಬಹುದಾದ ಚಿಂಪಾಂಜಿ

ಮಂಗನಿಂದ ಮಾನವನಾದ, ಎಂಬ ವಾದವನ್ನು ಪ್ರಾಕೈತಿಹಾಸಿಕ ಹಿನ್ನೆಲೆಯಿಂದ ಅರಿಯುತ್ತೇವೆ. ಮನುಷ್ಯರಂತೆ ಸೂಕ್ಷ್ಮಮತಿಯಾದ, ಈಗಾಗಲೇ ಮನುಷ್ಯರ ಕೆಲಸಗಳನ್ನು ನಿಭಾಯಿಸುತ್ತಿರುವ ಚಿಂಪಾಂಜಿಯು ಮಾನವನ ಗುಣಗಳಿಗೆ ಹತ್ತಿರವಾಗಿದೆ. ಇದನ್ನು ನೋಡಿದ ವಿಜ್ಞಾನಿಗಳು ಚಿಂಪಾಂಜಿಯನ್ನು ಮಾನವನನ್ನಾಗಿ ಪರಿವರ್ತಿಸಬಾರದೇಕೆ? ಎಂಬ ಶೋಧನೆಯನ್ನು ನಡೆಸಿದ್ದಾರೆ. ಚಿಂಪಾಂಜಿಯಲ್ಲಿ ಇರದ ಮನುಷ್ಯರಲ್ಲಿ ಇರುವ ವಂಶವಾಹಿನಿಗಳಿಂದ ಶೋಧನೆ ನಡೆದಿದೆ. ಈ ಎರಡೂ ಜೀವಿಗಳಲ್ಲಿರುವ DNA ಸರಿಸುಮಾರು ಶೇ. ೯೮- ೪ ಒಂದೇ ಆಗಿರುತ್ತದೆ. ಅಂದರೆ ಮನುಷ್ಯ ಚಿಂಪಾಂಜಿಯ ನಡುವಿನ ಅಂತರಕ್ಕೆ ಕಾರಣ ಕೇವಲ ಶೇ. ೧೬ ವಂಶವಾಹಿನಿಗಳು ಅಂದರೆ ೫೦ ವಂಶವಾಹಿನಿಗಳು ಮಾತ್ರ ವ್ಯತ್ಯಾಸದಲ್ಲಿದೆ. ಈ ೫೦ ರಲ್ಲಿ ಮಾತ್ರ ಮಾನವತೆಯ ಗುಟ್ಟು ಅಡಗಿದೆ. ಈ ೫೦ ವಂಶವಾಹಿನಿಯನ್ನು ಗುರುತಿಸಿ ಅವುಗಳ ಆಮೂಲಾಗ್ರ ಕಾರ್ಯವೈಖರಿಯನ್ನು ಅರಿಯಬೇಕಿದೆ. ಈ ೫೦ ನ್ನು ಬೇರ್ಪಡಿಸಿ ಚಿಂಪಾಂಜಿಯ ಕ್ರೋಮೋ ಸೋಮುಗಳಲ್ಲಿ ‘ಹೊಲಿದು’ ಬಿಟ್ಟರೆ ಇವುಗಳನ್ನು ಮನುಷ್ಯರನ್ನಾಗಿ ಪರಿವರ್ತಿಸಬಹುದೆಂದು ವಿಜ್ಞಾನಿಗಳ ಲೆಕ್ಕಚಾರವಾಗಿದೆ. ಎಂದಾದರೊಂದು ದಿನ ಈ ಮನುಷ್ಯರ ಕೆಲವು ನಡುವಳಿಕೆಯನ್ನು ಹೊಂದಿದ ಚಿಂಪಾಂಜಿ ಮನುಷ್ಯನಾಗಬಹುದೆಂದರೆ ನಂಬಲು ಅಸಾಧ್ಯವೆ? ವೈಜ್ಞಾನಿಕವಾಗಿ ಅಸಾಧ್ಯವೆಲ್ಲ ಸಾಧ್ಯವಾಗುತ್ತಲೇ ಇದೆಯಲ್ಲ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...