ಉಲ್ಕಾ ವೃಷ್ಟಿ!!

ಉಲ್ಕಾ ವೃಷ್ಟಿ!!

ನಿರ್ಧಿಷ್ಟ ಪಥದಲ್ಲಿ ತಿರುಗುವ ಗ್ರಹಗಳ ನಡುವಿನ ಹಾದಿಯಲ್ಲಿ ಅಡ್ಡ ಬರುವ ಸಣ್ಣ ಬಂಡೆಗಳಂತಹ ಮಿಟಿಯೋರಾಯ್ಡ್ಸ್ ಭೂಮಿಯ ವಾಯುಮಂಡಲ ಪ್ರವೇಶಿಸಿದಾಗ ಗಾಳಿಯ ಜತೆ ಸಂಘರ್ಷಕ್ಕೊಳಗಾಗುತ್ತವೆ. ತಿಕ್ಕಾಟದಿಂದ ಇವು ಉರಿಯತೊಡಗುತ್ತವೆ. ಭೂಮಿಗೆ ಗುರುತ್ವಾಕರ್ಷಣೆ ಇರುವುದರಿಂದ ಭೂಮಿ ಎಡೆಗೆ ಧಾವಿಸಿ ಮಿಂಚುವ ನಕ್ಷತ್ರಗಳಂತೆ ಕಂಡು ಕರಗಿ ಹೋಗುತ್ತವೆ. ಉರಿದು ಬೀಳುವ ಈ ಸ್ಥಿತಿಯಲ್ಲಿ ಇವಕ್ಕೆ ‘ಮೀಟಿಯೋರ್ಸ್’ ಉಲ್ಕೆಗಳೆಂದು ಕರೆಯಲಾಗುತ್ತದೆ.

ಇಂಥಹ ಅಸಂಖ್ಯಾತ ಉಲ್ಕೆಗಳ ಪಾತ ದಿನವೂ ಆಕಾಶದಲ್ಲಿ ನಡೆಯುತ್ತಲೇ ಇರುತ್ತದೆ. ಬೀಳುವ ನಕ್ಷತ್ರ ಉಲ್ಕೆಯು ಸಾವುನೋವಿನಂತಹ ವಿಪ್ಲವ ತರುತ್ತದೆನ್ನುವುದು ಜನಸಾಮಾನ್ಯರ ನಂಬಿಕೆಯಾಗಿದೆ. ಪ್ರತಿ ಮೂವತ್ಮೂರು ವರ್ಷಗಳ ಅಂತರದಲ್ಲಿ ಉಲ್ಕಾಪಾತ ಗಣನೀಯವಾಗಿ ಹೆಚ್ಚುತ್ತದೆಂದು ಖಗೋಳ ವಿಜ್ಞಾನಿಗಳ ಅಭಿಮತ. ಗಂಟೆಗೆ ೫೦ ರಿಂದ ೧೦೦ ರ ತನಕ ನವೆಂಬರ್ ತಿಂಗಳ ೧೮ ರ ಬೆಳಗಿನ ಜಾವ ೨-೧ಂ ಗಂಟೆಗೆ ಶಿಖರ ತಲುಪುವ ಈ ನಕ್ಷತ್ರ ಮಳೆ ಬರಿಕಣ್ಣಿಗೆ ವಿಜ್ಞಾನಿಗಳಿಗೆ ಕಂಡಿತು. ಲಿಯೋನಿಡ್ ಮಿಟಿಯೋರಾಯ್ಡ್ಸ್‌ ಎಂದು ವಿಜ್ಞಾನಿಗಳು ಹೆಸರಿಸಿರುವ ಈ ಆಕಾಶಕಾಯಗಳು ‘ಟೆಂಪಲ್‌ಟಟ್ಸ್’ ಎನ್ನುವ ಧೂಮಕೇತು ಉಳಿಸಿ ಹೋದ ಧೂಳು ಕಸದಿಂದ ನಿರ್ಮಾಣವಾದವು. ಭೂಮಿಯ ಮೇಲ್ಮೈ ತಲುಪುವ ವೇಳೆಗಾಗಲೇ ಉಷ್ಣತೆ ಕಳೆದುಕೊಂಡು ಮತ್ತೆ ಬಂಡೆಗಳಂತಾದಾಗ ಉಲ್ಕೆಗಳನ್ನು ಮಿಟಿಯೋರೈಟ್ಸ್ ಎಂದು ಕರೆಯುತ್ತಾರೆ. ಲೋಹ ರಾಸಾಯನಿಕಗಳ ಕಲ್ಲು ಧೂಳುನಿಂದ ಕೂಡಿದ ಉಲ್ಕೆಗಳು ಜೀವ ಸೃಷ್ಟಿಗೆ ಬೇಕಾದ ಕಚ್ಚಾ ಪದಾರ್ಥಗಳನ್ನು ಒದಗಿಸಬಲ್ಲವು ಎನ್ನುತ್ತಾರೆ. ಖಗೋಳ ವಿಜ್ಞಾನಿಗಳು. ೩೬ ವರ್ಷಗಳಿಗೊಮ್ಮೆ ಪಾತಗೊಳ್ಳುವ ಈ ಉಲ್ಕೆಗಳ ದೃಷ್ಟಿಯಿಂದ ಇದುವರೆಗೆ ಅಪಾಯಗಳಾದ ವರದಿಗಳಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೋರುವ ತೂತು ಮುಚ್ಚ ಬೇಡವೇ ?
Next post ಏಕಿಷ್ಟು ದೂರ ಮಾಡಿದೆ ಎನ್ನ?

ಸಣ್ಣ ಕತೆ

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

cheap jordans|wholesale air max|wholesale jordans|wholesale jewelry|wholesale jerseys