Home / ಲೇಖನ / ವಿಜ್ಞಾನ / ಕಂಪ್ಯೂಟರ್ ವೈರಸ್?!

ಕಂಪ್ಯೂಟರ್ ವೈರಸ್?!

ಮಾನವ ದೇಹದ ವೈರಸ್ ಒಂದು ಜೈವಿಕ ಅಂಶ. ಮಾನವ ದೇಹಕ್ಕೆ ಜೈವಿಕ ವೈರಸ್ನ ವಿರುದ್ಧ ಹೋರಾಡುವ ಶಕ್ತಿ ಇದೆ. ಆದರೆ ಕಂಪ್ಯೂಟರ್ ವೈರಸ್ ಹಾಗಲ್ಲ. ಇದೊಂದು ಪ್ರೋಗ್ರಾಂ. ಕಂಪ್ಯೂಟರನ್ನು ಹಾಳು ಮಾಡಬೇಕೆಂಬ ಉದ್ದೇಶದಿಂದಲೇ ಬರೆಯಲಾಗುತ್ತದೆ. ಈ ಪ್ರೋಗಾಂ ಕಂಪ್ಯೂಟರ್ ಅರಿವಿಗೆ ಬಾರದಂತೆ ಪ್ರವೇಶಿಸುತ್ತದೆ. ನಂತರ ತನ್ನಂತೆ ಇರುವ ಪ್ರೋಗ್ರಾಂಗಳನ್ನು ಸೃಷ್ಟಿಸುತ್ತದೆ. ನಂತರ ಕಂಪ್ಯೂಟರ್ ವಿಚಿತ್ರವಾಗಿ ವರ್ತಿಸುವಂತೆ ಮಾಡುತ್ತದೆ. ಕಂಪ್ಯೂಟರ್ ವೈರಸ್ಸಿಗೂ ಮಾನವ ದೇಹದ ವೈರಸ್‌ಗೂ ಯಾವುದೇ ರೀತಿಯ ಸಂಬಂಧವಿಲ್ಲ. ಭೌತಿಕ ಹೋಲಿಕೆಯೂ ಇಲ್ಲ. ಆದರೆ ಈ ಎರಡು ವೈರಸ್‌ಗಳು ಮಾಡುವ ವಿಧ್ವಂಸಕ ಕೃತ್ಯಗಳು ಬಹುತೇಕ ಒಂದೇ ರೀತಿಯದ್ದಾಗಿರುತ್ತದೆ.

ಕಂಪ್ಯೂಟರ್‌ನಲ್ಲಿ ಶೇಖರವಾಗಿರುವ ಇತರ ಪ್ರೋಗ್ರಾಂಗಳು, ಬೇರೆ ಬೇರೆ ಮಾಹಿತಿಗಳನ್ನು ಈ ವೈರಸ್ ನಾಶಗೊಳಿಸಲು ಪ್ರಾರಂಭಿಸುತ್ತದೆ.

ವೈರಸ್‌ಗಳ ಹುಟ್ಟು : ಸಾಫ್ಟ್‌ವೇರ್ ಪ್ರೋಗ್ರಾಂಗಳನ್ನು ಮತ್ತೊಂದು ಪ್ರೋಗ್ರಾಂ ಬರೆದು ಹಾಳು ಮಾಡಬಹುದೆಂಬ ಐಡಿಯಾ, ಕಂಪ್ಯೂಟರ್‌ಗಳು ಚಲಾವಣೆಗೆ ಬಂದ ಹಲವಾರು ವರ್ಷ ಯಾರಿಗೂ ಗೊತ್ತಿರಲ್ಲಿಲ್ಲ. ಮೊದಲಬಾರಿಗೆ ‘ಜಾನ್‌ವಾನ್ ನ್ಯೂಮ್ಯಾನ್’ ಎಂಬುವವರು ೧೯೫೦ ರಲ್ಲಿ ಇಂತಹ ಪ್ರೋಗ್ರಾಂಗಳನ್ನು ಬರೆಯಬಹುದೆಂದು ಪ್ರತಿಪಾದಿಸಿದ್ದರು. ಇವರ ಮಾತನ್ನು ಯಾರೂ ಕೇಳಲಿಲ್ಲ ನಂತರ ಅಮೇರಿಕಾದ ಎ.ಟಿ ಯಂಡ್ ಟಿ. ಪ್ರಯೋಗಶಾಲೆಯ ವಿಜ್ಞಾನಿಗಳಲ್ಲಿ ಕೆಲವರು ಇಂತಹ ಸಾಧ್ಯತೆ ಇದೆ ಎಂದು ಮನಗಂಡರು ಮತ್ತು ಈ ದೆಸೆಯಲ್ಲಿ ಕಾರ್ಯಪ್ರವೃತ್ತರಾದರು. ಕೆನ್.ಥಾಮಸ್ ಎಂಬುವವರು ಇಂತಹ ಪ್ರೋಗ್ರಾಂಗಳನ್ನು ಬರೆಯಲು ಸಾಧ್ಯವಿದೆ ಎಂದು ಒಮ್ಮೆ ವಿಶ್ವಕ್ಕೆ ತಿಳಿಸಿದರು. ಇವರು ಹೇಳಿದ ಕೆಲವೇ ದಿನಗಳಲ್ಲಿ ಇಂತಹ ಹಲವು ವೈರಸ್‌ಗಳು ಹುಟ್ಟಿಕೊಂಡವು. ಮೊದಮೊದಲು ಹುಟ್ಟಿಕೊಂಡ ವೈರಸ್‌ಗಳು ಹಲವು ಕಿಡಿಗೇಡಿ ಬುದ್ದಿವಂತ ಜನರಿಂದ ರೂಪಿತವಾಗಿದ್ದವು. ಬೇರೆಯವರ ಕಂಪ್ಯೂಟರ್‌ಗಳನ್ನು ನಾಶಗೊಳಿಸುವುದೇ ಇವರ ಉದ್ದೇಶವಾಗಿತ್ತು. ವೈರಸ್‌ಗಳಲ್ಲಿ ಎರಡು ವಿಧಗಳಿವೆ. ಒಂದು ಫೈಲ್ ವೈರಸ್, ಮತ್ತೊಂದು ಬೂಟ್‍ಸೆಕ್ಟರ್ ವೈರಸ್. ಈ ಎರಡು ರೀತಿಯ ವೈರಸ್‌ಗಳು ಪ್ಲಾಪಿಗಳ ಮೂಲಕ ಒಂದೆಡೆಯಿಂದ ಮತ್ತೊಂದೆಡೆಗೆ ಪಯಣಿಸುತ್ತದೆ. ಕಂಪ್ಯೂಟರ್‌ನಲ್ಲಿ ನಾವು ಮಾಡಿದ ಲೆಕ್ಕಪತ್ರಗಳನ್ನು ಹಾರ್ಡ್‌ಡಿಸ್ಕಿನಲ್ಲಿ ಶೇಖಕರಿಸುತ್ತವೆ. ಹೀಗೆ ಶೇಖರವಾಗಿರುವ ಪ್ರತಿ ಕಡತಕ್ಕೂ ಒಂದು ಹೆಸರು ನೀಡಬೇಕು. ನಾವು ನೀಡುವ ಹೆಸರಿನ ಮುಂದೆ ಆ ಕಡತಕ್ಕೆ ಅನ್ವಯವಾಗುವ ರೀತಿಯಲ್ಲಿ ಮೂರು ಅಕ್ಷರಗಳ ವಿಸ್ತರಣಾ ಹೆಸರನ್ನು ಕಂಪ್ಯುಟರ್ ನೀಡುತ್ತದೆ. ಈ ರೀತಿಯ ವಿಸ್ತೀರ್ಣಗಳಲ್ಲಿ COM ಮತ್ತು EXE ಇದೆ. ಫೈಲ್ ವೈರಸ್‌ಗಳು ಈ ವಿಸ್ತೀರ್ಣ ನಾಮಧೇಯವುಳ್ಳ ಕಡತಗಳನ್ನು ನಾಶಗೆಡವುತ್ತದೆ. ಬೂಟ್‌ಸೆಕ್ಟರ್ ವೈರಸ್‌ಗಳು ಪ್ಲಾಪಿಡಿಸ್ಕಿನ ಬೂಟ್ ಸೆಕ್ಟರ್‌ನಲ್ಲಿ ಸೇರಿಕೊಂಡು ಅಲ್ಲಿಂದ ಎಲ್ಲೆಡೆ ಪಸರಿಸುತ್ತವೆ.

ಈ ವೈರಸ್‌ಗಳ ದುರುದ್ದೇಶಗಳು : ಮಾಹಿತಿಗಳನ್ನು ಮತ್ತು ಶೇಖರಣಾ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸುವುದು. ಕಂಪ್ಯೂಟರ್ ಕಾರ್ಯನಿರ್ವಹಣಾ ವೇಗವನ್ನು ಕಡಿತಗೊಳಿಸುವುದು. ಕಂಪ್ಯೂಟರ್‌ನ ಶೇಖರಣಾ ಸಾಮರ್ಥ್ಯವನ್ನು ಕಡಿಮೆ ಮಾಡುವುದು. ಮಾನೀಟರ್ ತೆರೆಯ ಮೇಲೆ ಚಿತ್ರ ವಿಚಿತ್ರ ಸಂಕೇತಗಳನ್ನು ಮೂಡಿಸಿ ಬಳಕೆದಾರನಿಗೆ ಗಲಿಬಿಲಿಯುಂಟು ಮಾಡುವುದೇ ಆಗಿದೆ. ಆಗ ಕಂಪ್ಯೂಟರ್ ರೋಗಗ್ರಸ್ತವಾಗುತ್ತದೆ.

ಈ ವೈರಸ್ ತಡೆಯುವ ಕ್ರಮಗಳು : ಕಂಪ್ಯೂಟರ್ ವೈರಸ್ – ಎಲ್ಲರನ್ನೂ ಎಲ್ಲ ಕಂಪ್ಯೂಟರ್‌ಗಳನ್ನು ಚಿಂತೆಗೀಡು ಮಾಡಬಲ್ಲದು. ಆದರೆ ಸಾಕಷ್ಟು ಮುಂಜಾಗ್ರತೆ ವಹಿಸಿದಲ್ಲಿ ಇದರ ಹಾವಳಿಯಿಂದ ತಪ್ಪಿಸಿಕೊಳ್ಳಬಹುದು.
೧. ಸಾಧ್ಯವಿದ್ದಷ್ಟು ಬೇರೆಯವರ ಪ್ಲಾಪಿಗಳನ್ನು ಬಳಸಬಾರದು.
೨. ಕಂಪ್ಯೂಟರ್‌ನ್ನು ಪ್ಲಾಪಿಯಿಂದ ಆರಂಭಿಸಬಾರದು (ಬೂಟ್ ಮಾಡಬಾರದು)
೩. ಪ್ರತಿ ಪ್ಲಾಪಿಯಲ್ಲಿಯೂ ‘ರೈಟ್ ಪ್ರೊಟೆಕ್ಟ್‌’ ಎಂಬ ಸೌಲಭ್ಯವಿದೆ. ಈ ಸೌಲಭ್ಯವನ್ನು ಉಪಯೋಗಿಸಿದರೆ ಅಂತಹ ಪ್ಲಾಪಿಯ ಮೇಲೆ ಯಾವುದೇ ರೀತಿಯಲ್ಲಿ ವೈರಸ್ ಬರಲಾರವು.
೪. ಬೇರೆಯವರ ಅಧಿಕೃತ ಸಾಫ್ಟ್‌ವೇರ್ ಅನ್ನು ನಕಲು ಮಾಡಿದರೆ ಅದರಲ್ಲಿವೈರಸ್ ಇಲ್ಲ ಎಂದು ಖಚಿತಪಡಿಸಿಕೊಳ್ಳಬೇಕು.
೫. ವೈರಸ್‌ಗಳ ವಿರುದ್ಧ ಸಮರ ಸಾರಿರುವ ಕಂಪನಿಗಳು ರೂಪಿಸಿರುವ ವೈರಸ್ ವಿರೋಧಿ ಪ್ರೋಗ್ರಾಂಗಳನ್ನು ಕೊಳ್ಳಬೇಕು.
೬. ಪ್ರತಿಪ್ಲಾಪಿಗಳಲ್ಲಿಯೂ ವೈರಸ್‌ಗಳ ನಕಲಿ ಸಹಿಯನ್ನು ಹಾಕಿಡಬೇಕು. ವೈರಸ್‌ಗಳು ಅಂತಹ ಪ್ಲಾಪಿಗೆ ವರ್ಗಾವಣೆಯಾಗುವುದಿಲ್ಲ.

ವೈರಸ್ ಪತ್ತೆದಾರಿ: ಕಂಪ್ಯೂಟರ್ ವೈರಸ್‌ಗಳು ತಮ್ಮಸಂಖ್ಯೆಯನ್ನು ದ್ವಿಗುಣಗೂಳಿಸಿ ಕೊಳ್ಳುವಾಗ ಒಂದೇ ರೀತಿಯ ಸಂಕೇತಗಳನ್ನು ಉಳಿಸಿಕೊಳ್ಳುತ್ತವೆ. ಒಂದೇ ರೀತಿಯ ಸಂಕೇತಾಕ್ಷರಗಳು ಅಸಂಖ್ಯವಿದ್ದಾಗ ಕಂಪ್ಯೂಟರ್‌ನ ಶೇಖರಣಾ ಸಾಮರ್ಥ್ಯ ತಗ್ಗುತ್ತದೆ. ವೈರಸ್‌ನ ಒಂದೇ ರೀತಿಯ ಸಂಕೇತಾಕ್ಷರಗಳನ್ನು ಅದರ ಸಹಿ ಅಥವಾ ‘ವೈರಸ್ ಸಿಗ್ನೇಚರ್’ ಎಂದು ಕರೆಯುತ್ತಾರೆ. ಈ ಸಿಗ್ನೇಚರ್‌ಗಳನ್ನು ಗುರುತಿಸುವುದರ ಮೂಲಕ ಎಂತಹ ವೈರಸ್ ಇದೆ ಎಂದು ಕಂಡು ಹಿಡಿಯಬಹುದು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...