Home / ಲೇಖನ / ವಿಜ್ಞಾನ / ಕಂಪ್ಯೂಟರ್ ವೈರಸ್?!

ಕಂಪ್ಯೂಟರ್ ವೈರಸ್?!

ಮಾನವ ದೇಹದ ವೈರಸ್ ಒಂದು ಜೈವಿಕ ಅಂಶ. ಮಾನವ ದೇಹಕ್ಕೆ ಜೈವಿಕ ವೈರಸ್ನ ವಿರುದ್ಧ ಹೋರಾಡುವ ಶಕ್ತಿ ಇದೆ. ಆದರೆ ಕಂಪ್ಯೂಟರ್ ವೈರಸ್ ಹಾಗಲ್ಲ. ಇದೊಂದು ಪ್ರೋಗ್ರಾಂ. ಕಂಪ್ಯೂಟರನ್ನು ಹಾಳು ಮಾಡಬೇಕೆಂಬ ಉದ್ದೇಶದಿಂದಲೇ ಬರೆಯಲಾಗುತ್ತದೆ. ಈ ಪ್ರೋಗಾಂ ಕಂಪ್ಯೂಟರ್ ಅರಿವಿಗೆ ಬಾರದಂತೆ ಪ್ರವೇಶಿಸುತ್ತದೆ. ನಂತರ ತನ್ನಂತೆ ಇರುವ ಪ್ರೋಗ್ರಾಂಗಳನ್ನು ಸೃಷ್ಟಿಸುತ್ತದೆ. ನಂತರ ಕಂಪ್ಯೂಟರ್ ವಿಚಿತ್ರವಾಗಿ ವರ್ತಿಸುವಂತೆ ಮಾಡುತ್ತದೆ. ಕಂಪ್ಯೂಟರ್ ವೈರಸ್ಸಿಗೂ ಮಾನವ ದೇಹದ ವೈರಸ್‌ಗೂ ಯಾವುದೇ ರೀತಿಯ ಸಂಬಂಧವಿಲ್ಲ. ಭೌತಿಕ ಹೋಲಿಕೆಯೂ ಇಲ್ಲ. ಆದರೆ ಈ ಎರಡು ವೈರಸ್‌ಗಳು ಮಾಡುವ ವಿಧ್ವಂಸಕ ಕೃತ್ಯಗಳು ಬಹುತೇಕ ಒಂದೇ ರೀತಿಯದ್ದಾಗಿರುತ್ತದೆ.

ಕಂಪ್ಯೂಟರ್‌ನಲ್ಲಿ ಶೇಖರವಾಗಿರುವ ಇತರ ಪ್ರೋಗ್ರಾಂಗಳು, ಬೇರೆ ಬೇರೆ ಮಾಹಿತಿಗಳನ್ನು ಈ ವೈರಸ್ ನಾಶಗೊಳಿಸಲು ಪ್ರಾರಂಭಿಸುತ್ತದೆ.

ವೈರಸ್‌ಗಳ ಹುಟ್ಟು : ಸಾಫ್ಟ್‌ವೇರ್ ಪ್ರೋಗ್ರಾಂಗಳನ್ನು ಮತ್ತೊಂದು ಪ್ರೋಗ್ರಾಂ ಬರೆದು ಹಾಳು ಮಾಡಬಹುದೆಂಬ ಐಡಿಯಾ, ಕಂಪ್ಯೂಟರ್‌ಗಳು ಚಲಾವಣೆಗೆ ಬಂದ ಹಲವಾರು ವರ್ಷ ಯಾರಿಗೂ ಗೊತ್ತಿರಲ್ಲಿಲ್ಲ. ಮೊದಲಬಾರಿಗೆ ‘ಜಾನ್‌ವಾನ್ ನ್ಯೂಮ್ಯಾನ್’ ಎಂಬುವವರು ೧೯೫೦ ರಲ್ಲಿ ಇಂತಹ ಪ್ರೋಗ್ರಾಂಗಳನ್ನು ಬರೆಯಬಹುದೆಂದು ಪ್ರತಿಪಾದಿಸಿದ್ದರು. ಇವರ ಮಾತನ್ನು ಯಾರೂ ಕೇಳಲಿಲ್ಲ ನಂತರ ಅಮೇರಿಕಾದ ಎ.ಟಿ ಯಂಡ್ ಟಿ. ಪ್ರಯೋಗಶಾಲೆಯ ವಿಜ್ಞಾನಿಗಳಲ್ಲಿ ಕೆಲವರು ಇಂತಹ ಸಾಧ್ಯತೆ ಇದೆ ಎಂದು ಮನಗಂಡರು ಮತ್ತು ಈ ದೆಸೆಯಲ್ಲಿ ಕಾರ್ಯಪ್ರವೃತ್ತರಾದರು. ಕೆನ್.ಥಾಮಸ್ ಎಂಬುವವರು ಇಂತಹ ಪ್ರೋಗ್ರಾಂಗಳನ್ನು ಬರೆಯಲು ಸಾಧ್ಯವಿದೆ ಎಂದು ಒಮ್ಮೆ ವಿಶ್ವಕ್ಕೆ ತಿಳಿಸಿದರು. ಇವರು ಹೇಳಿದ ಕೆಲವೇ ದಿನಗಳಲ್ಲಿ ಇಂತಹ ಹಲವು ವೈರಸ್‌ಗಳು ಹುಟ್ಟಿಕೊಂಡವು. ಮೊದಮೊದಲು ಹುಟ್ಟಿಕೊಂಡ ವೈರಸ್‌ಗಳು ಹಲವು ಕಿಡಿಗೇಡಿ ಬುದ್ದಿವಂತ ಜನರಿಂದ ರೂಪಿತವಾಗಿದ್ದವು. ಬೇರೆಯವರ ಕಂಪ್ಯೂಟರ್‌ಗಳನ್ನು ನಾಶಗೊಳಿಸುವುದೇ ಇವರ ಉದ್ದೇಶವಾಗಿತ್ತು. ವೈರಸ್‌ಗಳಲ್ಲಿ ಎರಡು ವಿಧಗಳಿವೆ. ಒಂದು ಫೈಲ್ ವೈರಸ್, ಮತ್ತೊಂದು ಬೂಟ್‍ಸೆಕ್ಟರ್ ವೈರಸ್. ಈ ಎರಡು ರೀತಿಯ ವೈರಸ್‌ಗಳು ಪ್ಲಾಪಿಗಳ ಮೂಲಕ ಒಂದೆಡೆಯಿಂದ ಮತ್ತೊಂದೆಡೆಗೆ ಪಯಣಿಸುತ್ತದೆ. ಕಂಪ್ಯೂಟರ್‌ನಲ್ಲಿ ನಾವು ಮಾಡಿದ ಲೆಕ್ಕಪತ್ರಗಳನ್ನು ಹಾರ್ಡ್‌ಡಿಸ್ಕಿನಲ್ಲಿ ಶೇಖಕರಿಸುತ್ತವೆ. ಹೀಗೆ ಶೇಖರವಾಗಿರುವ ಪ್ರತಿ ಕಡತಕ್ಕೂ ಒಂದು ಹೆಸರು ನೀಡಬೇಕು. ನಾವು ನೀಡುವ ಹೆಸರಿನ ಮುಂದೆ ಆ ಕಡತಕ್ಕೆ ಅನ್ವಯವಾಗುವ ರೀತಿಯಲ್ಲಿ ಮೂರು ಅಕ್ಷರಗಳ ವಿಸ್ತರಣಾ ಹೆಸರನ್ನು ಕಂಪ್ಯುಟರ್ ನೀಡುತ್ತದೆ. ಈ ರೀತಿಯ ವಿಸ್ತೀರ್ಣಗಳಲ್ಲಿ COM ಮತ್ತು EXE ಇದೆ. ಫೈಲ್ ವೈರಸ್‌ಗಳು ಈ ವಿಸ್ತೀರ್ಣ ನಾಮಧೇಯವುಳ್ಳ ಕಡತಗಳನ್ನು ನಾಶಗೆಡವುತ್ತದೆ. ಬೂಟ್‌ಸೆಕ್ಟರ್ ವೈರಸ್‌ಗಳು ಪ್ಲಾಪಿಡಿಸ್ಕಿನ ಬೂಟ್ ಸೆಕ್ಟರ್‌ನಲ್ಲಿ ಸೇರಿಕೊಂಡು ಅಲ್ಲಿಂದ ಎಲ್ಲೆಡೆ ಪಸರಿಸುತ್ತವೆ.

ಈ ವೈರಸ್‌ಗಳ ದುರುದ್ದೇಶಗಳು : ಮಾಹಿತಿಗಳನ್ನು ಮತ್ತು ಶೇಖರಣಾ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸುವುದು. ಕಂಪ್ಯೂಟರ್ ಕಾರ್ಯನಿರ್ವಹಣಾ ವೇಗವನ್ನು ಕಡಿತಗೊಳಿಸುವುದು. ಕಂಪ್ಯೂಟರ್‌ನ ಶೇಖರಣಾ ಸಾಮರ್ಥ್ಯವನ್ನು ಕಡಿಮೆ ಮಾಡುವುದು. ಮಾನೀಟರ್ ತೆರೆಯ ಮೇಲೆ ಚಿತ್ರ ವಿಚಿತ್ರ ಸಂಕೇತಗಳನ್ನು ಮೂಡಿಸಿ ಬಳಕೆದಾರನಿಗೆ ಗಲಿಬಿಲಿಯುಂಟು ಮಾಡುವುದೇ ಆಗಿದೆ. ಆಗ ಕಂಪ್ಯೂಟರ್ ರೋಗಗ್ರಸ್ತವಾಗುತ್ತದೆ.

ಈ ವೈರಸ್ ತಡೆಯುವ ಕ್ರಮಗಳು : ಕಂಪ್ಯೂಟರ್ ವೈರಸ್ – ಎಲ್ಲರನ್ನೂ ಎಲ್ಲ ಕಂಪ್ಯೂಟರ್‌ಗಳನ್ನು ಚಿಂತೆಗೀಡು ಮಾಡಬಲ್ಲದು. ಆದರೆ ಸಾಕಷ್ಟು ಮುಂಜಾಗ್ರತೆ ವಹಿಸಿದಲ್ಲಿ ಇದರ ಹಾವಳಿಯಿಂದ ತಪ್ಪಿಸಿಕೊಳ್ಳಬಹುದು.
೧. ಸಾಧ್ಯವಿದ್ದಷ್ಟು ಬೇರೆಯವರ ಪ್ಲಾಪಿಗಳನ್ನು ಬಳಸಬಾರದು.
೨. ಕಂಪ್ಯೂಟರ್‌ನ್ನು ಪ್ಲಾಪಿಯಿಂದ ಆರಂಭಿಸಬಾರದು (ಬೂಟ್ ಮಾಡಬಾರದು)
೩. ಪ್ರತಿ ಪ್ಲಾಪಿಯಲ್ಲಿಯೂ ‘ರೈಟ್ ಪ್ರೊಟೆಕ್ಟ್‌’ ಎಂಬ ಸೌಲಭ್ಯವಿದೆ. ಈ ಸೌಲಭ್ಯವನ್ನು ಉಪಯೋಗಿಸಿದರೆ ಅಂತಹ ಪ್ಲಾಪಿಯ ಮೇಲೆ ಯಾವುದೇ ರೀತಿಯಲ್ಲಿ ವೈರಸ್ ಬರಲಾರವು.
೪. ಬೇರೆಯವರ ಅಧಿಕೃತ ಸಾಫ್ಟ್‌ವೇರ್ ಅನ್ನು ನಕಲು ಮಾಡಿದರೆ ಅದರಲ್ಲಿವೈರಸ್ ಇಲ್ಲ ಎಂದು ಖಚಿತಪಡಿಸಿಕೊಳ್ಳಬೇಕು.
೫. ವೈರಸ್‌ಗಳ ವಿರುದ್ಧ ಸಮರ ಸಾರಿರುವ ಕಂಪನಿಗಳು ರೂಪಿಸಿರುವ ವೈರಸ್ ವಿರೋಧಿ ಪ್ರೋಗ್ರಾಂಗಳನ್ನು ಕೊಳ್ಳಬೇಕು.
೬. ಪ್ರತಿಪ್ಲಾಪಿಗಳಲ್ಲಿಯೂ ವೈರಸ್‌ಗಳ ನಕಲಿ ಸಹಿಯನ್ನು ಹಾಕಿಡಬೇಕು. ವೈರಸ್‌ಗಳು ಅಂತಹ ಪ್ಲಾಪಿಗೆ ವರ್ಗಾವಣೆಯಾಗುವುದಿಲ್ಲ.

ವೈರಸ್ ಪತ್ತೆದಾರಿ: ಕಂಪ್ಯೂಟರ್ ವೈರಸ್‌ಗಳು ತಮ್ಮಸಂಖ್ಯೆಯನ್ನು ದ್ವಿಗುಣಗೂಳಿಸಿ ಕೊಳ್ಳುವಾಗ ಒಂದೇ ರೀತಿಯ ಸಂಕೇತಗಳನ್ನು ಉಳಿಸಿಕೊಳ್ಳುತ್ತವೆ. ಒಂದೇ ರೀತಿಯ ಸಂಕೇತಾಕ್ಷರಗಳು ಅಸಂಖ್ಯವಿದ್ದಾಗ ಕಂಪ್ಯೂಟರ್‌ನ ಶೇಖರಣಾ ಸಾಮರ್ಥ್ಯ ತಗ್ಗುತ್ತದೆ. ವೈರಸ್‌ನ ಒಂದೇ ರೀತಿಯ ಸಂಕೇತಾಕ್ಷರಗಳನ್ನು ಅದರ ಸಹಿ ಅಥವಾ ‘ವೈರಸ್ ಸಿಗ್ನೇಚರ್’ ಎಂದು ಕರೆಯುತ್ತಾರೆ. ಈ ಸಿಗ್ನೇಚರ್‌ಗಳನ್ನು ಗುರುತಿಸುವುದರ ಮೂಲಕ ಎಂತಹ ವೈರಸ್ ಇದೆ ಎಂದು ಕಂಡು ಹಿಡಿಯಬಹುದು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...