ಏಕಿಷ್ಟು ದೂರ ಮಾಡಿದೆ ಎನ್ನ?

ಏಕಿಷ್ಟು ದೂರ ಮಾಡಿದೆ ಎನ್ನ
ಸಣ್ಣದೊಂದು ಮಾತಿಗೆ|
ನಮ್ಮ ಮಧುರ ಪ್ರೀತಿಯನೇ
ಮರೆತುಬಿಟ್ಟೆಯಾ ನನ್ನೊಂದು
ಹುಸಿ ಪಿಸುಮಾತಿಗೆ||

ನೀನು ಎಷ್ಟಾದರೂ…ಹೇಗಾದರೂ
ತಮಾಷೆ ಮಾಡಿ ನಗಬಹುದು |
ನೀನು ಏನಾದರು
ಅನ್ನಬಹುದು ನನ್ನಮೇಲೆ|
ಆದರೆ ನಾನು ಮಾತ್ರ ಊ ಹ್ಞೂ..!
ಕೋಪ ನಿನ್ನ ಮೂಗಿನ ತುದಿಮೇಲೆ||

ಹೆಣ್ಣೆಂದರೆ ಅಗ್ಗದ ವಸ್ತುವು ನಿನಗೆ
ಹೆಣ್ಣೆಂದರೆ ತಮಾಷೆ ಸರಕು ಗಂಡಿಗೆ|
ಈ ತಾರತಮ್ಯ ಬೇಧ ಸಾಕು
ನಮಗೂ ಸಮಾನತೆ,
ಸ್ವಾತಂತ್ರ ವಿರಬೇಕು||

ಕೋಪದಲಿ ಕೊಯ್ದ ಮೂಗು
ಶಾಂತಿಯಲಿ ಬರುವುದೆ?
ಒಮ್ಮೆ ಮುತ್ತು ಒಡೆದಮೇಲೆ
ಬೆಸೆಯಲದು ಚೆಂದವೇ?|
ಒಮ್ಮೆ ಹೃದಯಬಂಧ
ಮುರಿದಾದ ಮೇಲೆ
ಅದು ಬೆಸೆಯಲದು ಸಾಧ್ಯವೇ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಲ್ಕಾ ವೃಷ್ಟಿ!!
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೯

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…