Home / ಲೇಖನ / ವಿಜ್ಞಾನ / ಜೈವ ತಂತ್ರಜ್ಞಾನದಿಂದ ರಕ್ತದ ಸೃಷ್ಟಿ

ಜೈವ ತಂತ್ರಜ್ಞಾನದಿಂದ ರಕ್ತದ ಸೃಷ್ಟಿ

ಅಶಕ್ತರೋಗಿಗಳಿಗೆ, ಅಥವಾ ಗಂಭೀರ ಕಾಯಿಲೆ ಇದ್ದವರಿಗೆ ರಕ್ತವನ್ನು ಕೊಡುವುದು ಅನಿವಾರ್ಯವಾಗಿರುತ್ತದೆ. ಆದರೆ ರೋಗಿಗೆ ಸರಿ ಹೊಂದುವ ರಕ್ತದ ಕೊರತೆ ಒಂದೆಡೆಯಾದರೆ ರಕ್ತದ ವಿರಳತೆಯಿಂದಾಗಿ ಕೊಡಲಾಗದೇ ರೋಗಿ ಸಾಯಬೇಕಾಗುತ್ತದೆ ಅಥವಾ ಸಹಸ್ರಾರು ರೂ.ಗಳನ್ನು ಸುರಿದು (Blood Bank) ನಲ್ಲಿ ರಕ್ತ ತಂದು ಪೂರೈಸ- ಬೇಕಾಗುತ್ತದೆ. ಇದೆಲ್ಲ ಕಷ್ಟಕರವಾದ ಕೆಲಸವೆ. ಆದರೆ ತಂತ್ರಜ್ಞಾನದಿಂದ ರಕ್ತವೂ ಸೃಷ್ಟಿಯಾಗಿ  ಬೇಕಾದವರಿಗೆ ಅಂಗಡಿಯಲ್ಲಿ ಸಿಗುವಂತಾದರೆ ಅದಕ್ಕಿಂತಲೂ ಇನ್ನೇನು ಬೇಕು. ರೋಗಿಯ ಪುಣ್ಯ ರಕ್ತಕ್ಕಾಗಿ ಅಲೆಯುವ ಸಮಸ್ಯೆಯೇ ಇರಲಾರದು. ಇಂತಹ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ‘ವಿಟ್‌ವೈಸ್’ ಎಂಬ ವಿಜ್ಞಾನಿ ಜೈವ ತಂತ್ರಜ್ಞಾನ ಸಾಧನೆಯಿಂದ ರಕ್ತದ ಸೃಷ್ಟಿಯನ್ನು ಕಂಡು ಹಿಡಿದರು. ಕೆಂಬ್ರಿಡ್ಜ್ ಮಸಾಚುಸೆಟ್ಟ್‌ನಲ್ಲಿರುವ  ಆಂಟೋಜೆನಿ ಎಂಬ ಜೈವ ತಾಂತ್ರಿಕ ಸಂಸ್ಥೆಯಲ್ಲಿ ಸಂಶೋಧಕ ವ್ಶೆದ್ಯರಾಗಿ ಇವರು ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಪಥಮವಾಗಿ ಆದಿಕೋಶಗಳನ್ನು ಗುರುತಿಸಿ, ಪ್ರತ್ಯೇಕಿಸಿ ಪ್ರಯೋಗಾಲಯದ ಪ್ಲಾಸ್ಟಿಕ್ ತಟ್ಟೆಯೊಂದರಲ್ಲಿ ಅವನ್ನು ಬಿತ್ತಿದರು. ಅವಕ್ಕೆ ಪೋಶಾಕಾಂಶಗಳನ್ನು ಒದಗಿಸಿದರು. ಸೂಕ್ತಜನಕಾಣುಗಳನ್ನು ಪೂರೈಸಿದರು. ಕೆಲವೇ ದಿನಗಳಲ್ಲಿ ನಿಬ್ಬೆರಗಿನ ಫಲಿತಾಂಶವನ್ನು ನೋಡಿ ಕುಣಿದಾಡಿದರು. ಆದಿಕೋಶವು ಕೆಂಗಣಗಳನ್ನು ಉತ್ಪಾದಿಸಲಾಂಭಿಸಿತು. ರಕ್ತವು ಸ್ಪಷ್ಟಿಯಾಯಿತು. ಈ. ಸೂತ್ರವನ್ನು ಅನುಸರಿಸಿ ಸಂಶೋಧಕರು ರಕ್ತವನ್ನು ಸೃಷ್ಟಿಸಿ ಅಶಕ್ತ ರೋಗಿಗಳಿಗೆ ಈ ರಕ್ತವನ್ನು ಪೂರೈಸುತ್ತಾರೆ ಎಂಬ ದಿನಗಳು ಬರುತ್ತವೆ !

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...