Home / ಲೇಖನ / ವಿಜ್ಞಾನ / ಬಂಜೆಯರಿಗೆ ತೊಟ್ಟಿಲು ಭಾಗ್ಯದ ಪ್ರಣಾಳ ಶಿಶುಗಳು

ಬಂಜೆಯರಿಗೆ ತೊಟ್ಟಿಲು ಭಾಗ್ಯದ ಪ್ರಣಾಳ ಶಿಶುಗಳು

ಪ್ರಣಾಳ ಶಿಶುಗಳಿಂದರೆ ಗಾಜಿನ ಬಾಟಲಿಗಳಲ್ಲಿ ಸ್ತ್ರೀ ಅಂಡಾಣು ಗಂಡಿನ ಅಂಡಾಣುಗಳನ್ನು ಗರ್ಭಕೋಶದ ಹೊರಗೆ ಫಲೋತ್ಪತ್ತಿ ಮಾಡಿ, ಭ್ರೂಣವನ್ನು ಉಂಟುಮಾಡಿ ಶಿಶುಗಳನ್ನು ಪಡೆಯಲಾಗುವುದಕ್ಕೆ ಪ್ರಣಾಳ ಶಿಶು ಎಂದು ಕರೆದರೂ ಸಹ ಈ ವಿಜ್ಞಾನವು ಈ ಮಾನವನಿಗೆ ಎಟಕಲಿಕ್ಕಿಲ್ಲವೆಂದು ವಿಜ್ಞಾನಿಗಳೇ ಅಭಿಪ್ರಾಯಪಡುತ್ತಾರೆ.

ವಾಸ್ತವವಾಗಿ ಹೆಣ್ಣಿನ ಅಂಡಾಣುಗಳನ್ನು ಗಂಡಿನ ವೀರ್ಯಾಣುಗಳೊಂದಿಗೆ ಒಂದು ಗಾಜಿನ ಪಾತ್ರೆಯಲ್ಲಿ ಫಲೋತ್ಪಾದನೆ ಮಾಡಿ ಸಾಮಾನ್ಯ ಗರ್ಭಧಾರಣೆಯಂತೆ ಮಗುವು ಬೆಳೆಯಲು ತಾಯಿಯ ಗರ್ಭಕೋಶದೊಳಕ್ಕೆ ಇದನ್ನು ಇಡಲಾಗುವುದು. ಭ್ರೂಣವು ಆ ಗರ್ಭಕೋಶದಲ್ಲಿ ೯ ತಿಂಗಳು ಬೆಳವಣಿಗೆ ಹೊಂದಿ ನಂತರ ಜನಿಸುತ್ತದೆ. ಇಂತಹ ಮಗುವಿಗೆ (ಮಾತ್ರ) ಇಂದು ಪ್ರಣಾಳ ಶಿಶು ಎನ್ನಲಾಗುತ್ತದೆ. ಪ್ರತಿ ಹತ್ತು ಹೆಂಗಸರಲ್ಲಿ ಒಬ್ಬರು ಬಂಜೆಯಾಗಿರುತ್ತಾರೆಂದು ತಜ್ಞರ ಅಭಿಪ್ರಾಯ. ಸಾಮಾನ್ಯವಾದ ಕಾರಣವೇನೆಂದರೆ ಅಂಡಕೋಶಗಳಿಂದ ಗರ್ಭಕೋಶಕ್ಕೆ ಇರುವ ಮಾರ್ಗದಲ್ಲಿನ ಎರಡು ಅಂಡಾಶಯದ ನಾಳಗಳು
ತಡೆಯಲ್ಪಡುತ್ತವೆ. ಇಂತಹ ಸಂದರ್ಭಗಳಲ್ಲಿ ಗಂಡಿನ ವೀರ್ಯಾಣುವು ಹೆಣ್ಣಿನ ಅಂಡಾಣುವನ್ನು ತಲುಪುವುದಿಲ್ಲವಾದ್ದರಿಂದ ಗರ್ಭಧಾರಣೆ ಸಾಧ್ಯವಿಲ್ಲ ಆಗ ಆ ಹೆಣ್ಣು ಬಂಜೆಯಾಗುತ್ತಾಳೆ. ಆಗ ಇಂಥವರು ಮೂಢ ನಂಬಿಕೆಗಳಿಗೆ ಬಲಿಯಾಗುತ್ತಾರೆ. ಮರ ಸುತ್ತುವುದು, ದೇವರಿಗೆ ಹರಕೆ ಹೊರುವುದು, ನಾಗರಪ್ರತಿಷ್ಠೆ ಮಾಡುವುದು, ಉರುಳುಸೇವೆ ಮಾಡುವುದು, ನವಗ್ರಹ ಪೂಜೆ, ತೀರ್ಥಯಾತ್ರೆ ದೇವರ ತೀರ್ಥವನ್ನು ತಲೆಯ ಮೇಲೆ ಪೂಜಾರಿಗಳಿಂದ ಕೊಡಗಟ್ಟಲೆ ಹಾಕಿಸಿಕೊಳ್ಳುವುದನ್ನೂ ಮಾಡಲಾಗುತ್ತದೆ. ಬಂಜೆಯಾದವಳು ಅಶುಭದ ಸಂಕೇತವೆಂದು ಜರಿಯುತ್ತಾರೆ. ಹೀಗೆಲ್ಲ ಮಾಡುವುದರಿಂದ ಮಕ್ಕಳಾಗದಿದ್ದರೆ ಜಗತ್ತಿನಲ್ಲಿ “ಬಂಜೆ” ಎಂಬ ಪದವೇ ಇರುತ್ತಿರಲ್ಲಿಲ್ಲ. ಪ್ರಾಪ್ತ ವಯಸ್ಕಳಾಗುವ ಹೆಣ್ಣಿನ ಹಾರ್ಮೋನುಗಳಲ್ಲಿ ಉಂಟಾಗುವ
ವ್ಯತ್ಯಾಸಗಳಿಂದ ನಾಳಗಳು ತಡೆಯಲ್ಪಡುತ್ತವೆ ಎಂಬ ವಾಸ್ತವವನ್ನು ನಮ್ಮ ಗ್ರಾಮೀಣ ಜನ ಅರಿಯುವುದೇ ಇಲ್ಲ.

ಕೊನೆಗೊಂದು ದಿನ ಈ ಪ್ರನಾಳ ಶಿಶುವಿನ ಜನನದ ಸಂಶೋಧನೆಯನ್ನು ಶರೀರ ವಿಜ್ಞಾನಿ ರಾಬರ್ಟ್ ಎಡ್ವರ್ಡ್ ಮತ್ತು ಪ್ರಸೂತಿ ಶಾಸ್ತ್ರಜ್ಞ ಪ್ಯಾಟರಿಕ್ ಎಂಬ ಬ್ರಿಟಿಷ್ ತಂಡವು ವರ್ಷಗಳ ಪ್ರಯೋಗದ ನಂತರ ಯಶಸ್ಸು ಪಡೆಯಿತು. ಹೆಂಗಸಿನಿಂದ ಆಂಡಾಣುಗಳನ್ನು ಹೊರತೆಗೆದು ಒಂದು ಗಾಜಿನ ಪಾತ್ರೆಯಲ್ಲಿ ಜೀವಂತವಾಗಿಟ್ಟು ಗಂಡಿನ ವೀರ್ಯಾಣುಗಳ ಜೊತೆಯಲ್ಲಿ ಗರ್ಭಧಾರಣೆ ಮಾಡಿಸಿ ನಂತರ ಹೆಂಗಸಿನ ಗರ್ಭಕೋಶದೊಳಕ್ಕೆ ಸ್ಥಾಪಿಸುವಂತಹ
ವಿಧಾನವಮ್ನ ಇವರು ಕಂಡು ಹಿಡಿದರು. ೧೯೭೮ರಲ್ಲಿ ಈ ಸಂಶೋಧಕ ವಿಜ್ಞಾನಿಗಳು ತಮ್ಮ ಸಂಶೋಧನೆಯಲ್ಲಿ ಸಫಲರಾದರು. ಒಂದು ಅಂಡಾಣುವಿನ ಜೊತೆಯಲ್ಲಿ ಒಂದು ವೀರ್ಯಾಣುವು ಫಲೋತ್ಪಾದನೆಯಾಗುವ ವಿಧಾನಕ್ಕೆ ಇನ್ ವಿಟ್ರೋ ಗರ್ಭಧಾರಣೆ ವಿಧಾನ ಎಂದು ಹೆಸರು. ಗರ್ಭನಾಳವು ತುಂಬ ಕಿರಿದಾಗಿರುವ ಹೆಂಗಸರಿಗೆ ಮಾತ್ರವಲ್ಲದೇ ತನ್ನ ಗಂಡನ ಬೀಜಾಣುಗಳಲ್ಲಿ ಸಾಕಷ್ಟು ಶಕ್ತಿ ಇಲ್ಲದಿರುವಂತಹ ಸ್ಥಿತಿಯಲ್ಲಿ ಕೂಡ ಈ ವಿಜ್ಞಾನದಿಂದ ಮಗುವನ್ನು
ಪಡೆಯಬಹುದು. ಆದರೆ ಆ ಹೆಂಗಸಿನ ಗಂಡನ ವೀರ್ಯಾಣುವಿನಿಂದಲ್ಲದೇ ಬೇರೆ ಗಂಡಸಿನ ವೀರ್ಯಾಣುವಿನೊಂದಿಗೆ ಅಂಡವು ಫಲೋತ್ಸದಿಸಿದರೆ ಆಗ ಸಾಮಾಜಿಕ, ನೈತಿಕ, ಕಾನೂನಿನ ತೊಂದರೆಗಳು ಉದ್ಭವಿಸಬಹುದೆಂಬ ಕಾರಣವು ಸಮಾಜ ನೀತಿಯಾಗಿದೆ.

ಗರ್ಭಧರಿಸಿದ ಅಂಡವನ್ನು ದ್ರವ ಸಾರಜನಕ ಉಷ್ಟತೆಯಲ್ಲಿ ಕಾಪಾಡಿ ಇಡಲಾಗುತ್ತದೆ. ಬೇಕೆನಿಸಿದಾಗ ಅವುಗಳನ್ನು ಹೆಂಗಸಿನ ಗರ್ಭಕೋಶದಲ್ಲಿ ಇಡಲಾಗುತ್ತದೆ. ಇದು ಮುಂದುವರೆದ ಸಂಶೋಧನೆಯಾಗಿದ್ದು ದುಬಾರಿ ಖರ್ಚಿನ ಕೆಲಸವಾಗಿದೆ. ಇದಕ್ಕಾಗಿ ಬೇರೆ ಹೆಂಗಸಿನ ಗರ್ಭಕೋಶದಲ್ಲಿ ಬೆಳೆಸಿ, ಮಗುವನ್ನು ಹೆತ್ತು ಕೊಡುವ ಬಾಡಿಗೆ ತಾಯಂದಿರೂ ಇದ್ದಾರೆ. ಅತಿ ಹೆಚ್ಚಿನ ಬಾಡಿಗೆ ಶುಲ್ಕವನ್ನು ಬೇಡಿಕೆಯ ಮೇರೆಗೆ ಬದಲಿ ತಾಯಂದಿರನ್ನು ಬಾಡಿಗೆ ಕೊಡುವ
ಸಂಸ್ಥೆಗಳೂ ಇವೆಯಂತೆ.

ಗಂಡನಲ್ಲಿ ತಾಯಿಯಲ್ಲಿ ನ್ಯೂನ್ಯತೆಗಳಿದ್ದು ಎಂದಿಗೂ ಮಕ್ಕಳಾಗುವುದಿಲ್ಲ ಎಂಬ ವಾದಕ್ಕೆ ವಿಜ್ಞಾನವು ಇಂತಹ ಪ್ರಣಾಳ ಶಿಶುಗಳ ಕೊಡುಗೆಯನ್ನು ನೀಡಿದೆ. ಇದು ನಮ್ಮ ದೇಶಕ್ಕೆ ವ್ಯಾಪಕವಾಗಿ ಇನ್ನೂ ಬಂದಿರುವುದಿಲ್ಲ.
*****

ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...