ಅಂಗೈ ಆಳತೆಯೆ ವಿಮಾನಗಳು!

ಅಂಗೈ ಆಳತೆಯೆ ವಿಮಾನಗಳು!

ಅಂಗೈ ಅಳತೆಯ ವಿಮಾನಗಳನ್ನು ಕಲ್ಪಿಸುವುದು ಅಸಾಧ್ಯ. ಆಟಿಕೆ ಸಾಮಾನಗಳಲ್ಲಿ ಇಂಥಹ ಮಾದರಿಯನ್ನು ಕಾಣಬಹುದಷ್ಟೇ. ಇದೆಲ್ಲ ವಿಜ್ಞಾನದ ಆವಿಷ್ಕಾರಗಳಿಂದ ಸಾಧ್ಯವಾಗುತ್ತಲಿದೆ. ಈ ವಿಮಾನಗಳಿಗೆ “ಮೈಕ್ರೋವೆಹಿಕಲ್ಸ್”(ಎಂ ಎ ವಿ) ಅಥವಾ “ಕಿರುವಾಯು ವಾಹನಗಳು” ಎಂದು ಹೆಸರಿಸಲಾಗಿದೆ. ದೊಡ್ಡಗಾತ್ರದ ವಿಮಾನಗಳಲ್ಲಿ ಯಾವ ಯಂತ್ರದ ಬಿಡಿಭಾಗಗಳು ಸಮುಚ್ಚಯಗೊಂಡಿರುತ್ತದೆಯೋ ಅದೆಲ್ಲಾ ಸಣ್ಣದಾಗಿ ಈ ಮೈಕ್ರೋ ವಿಮಾನದಲ್ಲಿದೆ. ಅಂಥದ್ದೇ ಯಂತ್ರ. ಪುಟಾಣಿ ವಿಡಿಯೋ ಕ್ಯಾಮರಾಗಳು ಎಲ್ಲವೂ ಇವುಗಳಲ್ಲಿ ಇರುತ್ತದೆ. ಕೇವಲ ೬ ಅಂಗುಲಗಳಷ್ಟು ಗಾತ್ರದ ಈ ವಾಯು ವಾಹನಗಳು ಅಗ್ಗವಾಗಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಬೆಳಕಿಗೆ ಬರುತ್ತವೆ.

ಒಬ್ಬ ಸೈನಿಕನು ಇದನ್ನು ತನ್ನ ಹೆಗಲ ಚೀಲದ ಹಾಗೆ ಸಾಗಿಸಿಕೊಂಡು ಹೋಗಬಹುದು ಅದನ್ನು ಹೂರ ತೆಗೆದು ಹಾರಿಬಿಟ್ಟು ದೂರ ನಿಯಂತ್ರಣದಿಂದ ಇದನ್ನು ಗಮನಿಸಿಬಹುದು. ಗುಡ್ಡಬೆಟ್ಟಗಳಲ್ಲಿಯ ದುರ್ಗಮ ವಾತಾವರಣವನ್ನು, ಭೂಮಿಯಲ್ಲಿ ಅಡಗಿದ ಬಾಂಬುಗಳನ್ನು ಈ ಪುಟ್ಟ ವಿಮಾನ ಪತ್ತೆ ಹಚ್ಚುತ್ತದೆ. ರಾಸಾಯನಿಕ ಇಲ್ಲವೆ, ಜೈವಿಕ ಅಸ್ತ್ರಗಳ ಅಡಗು ಸ್ಥಾನಗಳನ್ನು ಸಹ ಇದು ಗುರುತಿಸುತ್ತದೆ.

ನಾಗರಿಕ ವಿಮಾನಯಾನಕ್ಕಾಗಿ ಇವುಗಳನ್ನು ಬಳಸಿದರೆ ಗಾಳಿಯ ಮಾಲಿನ್ಯವನ್ನು ಪರೀಕ್ಷಿಸಬಹುದು. ಬೆಂಕಿ ಹತ್ತಿದ ಕಟ್ಟಡಗಳನ್ನು ಪ್ರವೇಶಿಸಿ ಅಪಾಯಕ್ಕೊಳಗಾದವರನ್ನು ಗುರುತು ಹಚ್ಚಬಹುದು. ನಿರ್ಗಾವಣೆಗಾಗಿಯೂ ಇಂಥವುಗಳನ್ನು ಬಳಸಬಹುದು.

ಇವುಗಳ ವಿನ್ಯಾಸಗಳಲ್ಲಿ ಅನೇಕ ತೊಡಕುಗಳಿವೆ ಎಂದು ವಿನ್ಯಾಸಕರು ಹೇಳುತ್ತಾರೆ. ಸಾಮಾನ್ಯವಾಗಿ ಮಾಮೂಲ ವಿಮೂನಗಳ ರೆಕ್ಕೆಗಳು ಹಾರಾಟದಲ್ಲಿ ಒಂದೇ ಆಕಾರದಲ್ಲಿರುತ್ತವೆ. ಅದರ ಕಿರು ವಿಮಾನಗಳ ರೆಕ್ಕೆಗಳ ಆಕಾರವು ವೇಗಕ್ಕೆ ಬದಲಾಗುತ್ತವೆ. ಇಂಥಹ ಕಿರು ವಿಮಾನಗಳು ವಿಶ್ವದಲ್ಲೆಡೆ ಉಪಯೋಗಗೊಂಡರೆ ಅಸಂಖ್ಯಾತ ದುರಂತಗಳನ್ನು ತಡೆಯಬಹುದು. ಜೈ ಪುಟಾಣಿ ವಿಮಾನ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವರಾಣೆ ಮಾಡಿ?
Next post ಆರುವ ಮುನ್ನ ದೀಪವು

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…