ಅಂಗೈ ಆಳತೆಯೆ ವಿಮಾನಗಳು!

ಅಂಗೈ ಆಳತೆಯೆ ವಿಮಾನಗಳು!

ಅಂಗೈ ಅಳತೆಯ ವಿಮಾನಗಳನ್ನು ಕಲ್ಪಿಸುವುದು ಅಸಾಧ್ಯ. ಆಟಿಕೆ ಸಾಮಾನಗಳಲ್ಲಿ ಇಂಥಹ ಮಾದರಿಯನ್ನು ಕಾಣಬಹುದಷ್ಟೇ. ಇದೆಲ್ಲ ವಿಜ್ಞಾನದ ಆವಿಷ್ಕಾರಗಳಿಂದ ಸಾಧ್ಯವಾಗುತ್ತಲಿದೆ. ಈ ವಿಮಾನಗಳಿಗೆ “ಮೈಕ್ರೋವೆಹಿಕಲ್ಸ್”(ಎಂ ಎ ವಿ) ಅಥವಾ “ಕಿರುವಾಯು ವಾಹನಗಳು” ಎಂದು ಹೆಸರಿಸಲಾಗಿದೆ. ದೊಡ್ಡಗಾತ್ರದ ವಿಮಾನಗಳಲ್ಲಿ ಯಾವ ಯಂತ್ರದ ಬಿಡಿಭಾಗಗಳು ಸಮುಚ್ಚಯಗೊಂಡಿರುತ್ತದೆಯೋ ಅದೆಲ್ಲಾ ಸಣ್ಣದಾಗಿ ಈ ಮೈಕ್ರೋ ವಿಮಾನದಲ್ಲಿದೆ. ಅಂಥದ್ದೇ ಯಂತ್ರ. ಪುಟಾಣಿ ವಿಡಿಯೋ ಕ್ಯಾಮರಾಗಳು ಎಲ್ಲವೂ ಇವುಗಳಲ್ಲಿ ಇರುತ್ತದೆ. ಕೇವಲ ೬ ಅಂಗುಲಗಳಷ್ಟು ಗಾತ್ರದ ಈ ವಾಯು ವಾಹನಗಳು ಅಗ್ಗವಾಗಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಬೆಳಕಿಗೆ ಬರುತ್ತವೆ.

ಒಬ್ಬ ಸೈನಿಕನು ಇದನ್ನು ತನ್ನ ಹೆಗಲ ಚೀಲದ ಹಾಗೆ ಸಾಗಿಸಿಕೊಂಡು ಹೋಗಬಹುದು ಅದನ್ನು ಹೂರ ತೆಗೆದು ಹಾರಿಬಿಟ್ಟು ದೂರ ನಿಯಂತ್ರಣದಿಂದ ಇದನ್ನು ಗಮನಿಸಿಬಹುದು. ಗುಡ್ಡಬೆಟ್ಟಗಳಲ್ಲಿಯ ದುರ್ಗಮ ವಾತಾವರಣವನ್ನು, ಭೂಮಿಯಲ್ಲಿ ಅಡಗಿದ ಬಾಂಬುಗಳನ್ನು ಈ ಪುಟ್ಟ ವಿಮಾನ ಪತ್ತೆ ಹಚ್ಚುತ್ತದೆ. ರಾಸಾಯನಿಕ ಇಲ್ಲವೆ, ಜೈವಿಕ ಅಸ್ತ್ರಗಳ ಅಡಗು ಸ್ಥಾನಗಳನ್ನು ಸಹ ಇದು ಗುರುತಿಸುತ್ತದೆ.

ನಾಗರಿಕ ವಿಮಾನಯಾನಕ್ಕಾಗಿ ಇವುಗಳನ್ನು ಬಳಸಿದರೆ ಗಾಳಿಯ ಮಾಲಿನ್ಯವನ್ನು ಪರೀಕ್ಷಿಸಬಹುದು. ಬೆಂಕಿ ಹತ್ತಿದ ಕಟ್ಟಡಗಳನ್ನು ಪ್ರವೇಶಿಸಿ ಅಪಾಯಕ್ಕೊಳಗಾದವರನ್ನು ಗುರುತು ಹಚ್ಚಬಹುದು. ನಿರ್ಗಾವಣೆಗಾಗಿಯೂ ಇಂಥವುಗಳನ್ನು ಬಳಸಬಹುದು.

ಇವುಗಳ ವಿನ್ಯಾಸಗಳಲ್ಲಿ ಅನೇಕ ತೊಡಕುಗಳಿವೆ ಎಂದು ವಿನ್ಯಾಸಕರು ಹೇಳುತ್ತಾರೆ. ಸಾಮಾನ್ಯವಾಗಿ ಮಾಮೂಲ ವಿಮೂನಗಳ ರೆಕ್ಕೆಗಳು ಹಾರಾಟದಲ್ಲಿ ಒಂದೇ ಆಕಾರದಲ್ಲಿರುತ್ತವೆ. ಅದರ ಕಿರು ವಿಮಾನಗಳ ರೆಕ್ಕೆಗಳ ಆಕಾರವು ವೇಗಕ್ಕೆ ಬದಲಾಗುತ್ತವೆ. ಇಂಥಹ ಕಿರು ವಿಮಾನಗಳು ವಿಶ್ವದಲ್ಲೆಡೆ ಉಪಯೋಗಗೊಂಡರೆ ಅಸಂಖ್ಯಾತ ದುರಂತಗಳನ್ನು ತಡೆಯಬಹುದು. ಜೈ ಪುಟಾಣಿ ವಿಮಾನ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವರಾಣೆ ಮಾಡಿ?
Next post ಆರುವ ಮುನ್ನ ದೀಪವು

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

cheap jordans|wholesale air max|wholesale jordans|wholesale jewelry|wholesale jerseys