ಆರುವ ಮುನ್ನ ದೀಪವು

ಆರುವ ಮುನ್ನ ದೀಪವು
ಹೊಳೆದಂತೆ ಮಾಡದಿರೆನ್ನ ತಂದೆ ನೀನು|
ಸಮಯವಿರುವಾಗಲೆ
ಸದಾಕಾಲ ಬೆಳಗಿಸೆನ್ನನು ನೀನು||

ಚಿಂತಿಸಿ ನಾನಾ ತರದಲಿ ಜಗದಿ
ಎನನೂ ಮಾಡಲಾಗದ ನನ್ನ
ಭಯವನು ಹೊಡೆದೋಡಿಸು ನೀನು|
ನೀ ದಾರಿದೀಪವಾಗೆನಗೆ ಕೃಪೆಯನು
ತೋರಿ ನನ್ನ ಕತ್ತಲೆ ಓಡಿಸು ನೀನು||

ಬದುಕಲಿ ಬೆರಳೆಣಿಕೆಯಷ್ಟು
ಜನ ಸಾದಕರಲಿ ನನ್ನನು ನೀ ಬೆರೆಸು|
ಕಾರಣ ಹುಡುಕಿ ಸಮಯಕೆ ಕಾಯದಂತೆನ್ನ
ಕಾರ್ಯೋನ್ಮುಖನಾಗಿಸು ನೀನು||

ಕಾಲನ ಧೂತರ ಕೈಯಲಿ ಸಿಕ್ಕಿಸಿ
ಕಳವಳಪಡಿಸದಿರೆನ್ನನು ನೀನು|
ನಾ ದೀನರಿಗೆ ನೆರವಾಗುವಂತೆನ್ನ
ಬಿಡದಲೆ ಬಳಸಿಕೊ ನೀನು|
ಕಬ್ಬಿನಲಿ ಸಿಹಿಯ ಸಂಪೂರ್ಣತೆಯಂತೆ
ಕರ್ಪೂರವು ಸಮರ್ಪಕವಾಗಿ ಬೆಳಗುವಂತೆ
ನನ್ನನು ಪರಿಪೂರ್ಣಗೊಳಿಸು ನೀನು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂಗೈ ಆಳತೆಯೆ ವಿಮಾನಗಳು!
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೯೮

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…