ಆರುವ ಮುನ್ನ ದೀಪವು

ಆರುವ ಮುನ್ನ ದೀಪವು
ಹೊಳೆದಂತೆ ಮಾಡದಿರೆನ್ನ ತಂದೆ ನೀನು|
ಸಮಯವಿರುವಾಗಲೆ
ಸದಾಕಾಲ ಬೆಳಗಿಸೆನ್ನನು ನೀನು||

ಚಿಂತಿಸಿ ನಾನಾ ತರದಲಿ ಜಗದಿ
ಎನನೂ ಮಾಡಲಾಗದ ನನ್ನ
ಭಯವನು ಹೊಡೆದೋಡಿಸು ನೀನು|
ನೀ ದಾರಿದೀಪವಾಗೆನಗೆ ಕೃಪೆಯನು
ತೋರಿ ನನ್ನ ಕತ್ತಲೆ ಓಡಿಸು ನೀನು||

ಬದುಕಲಿ ಬೆರಳೆಣಿಕೆಯಷ್ಟು
ಜನ ಸಾದಕರಲಿ ನನ್ನನು ನೀ ಬೆರೆಸು|
ಕಾರಣ ಹುಡುಕಿ ಸಮಯಕೆ ಕಾಯದಂತೆನ್ನ
ಕಾರ್ಯೋನ್ಮುಖನಾಗಿಸು ನೀನು||

ಕಾಲನ ಧೂತರ ಕೈಯಲಿ ಸಿಕ್ಕಿಸಿ
ಕಳವಳಪಡಿಸದಿರೆನ್ನನು ನೀನು|
ನಾ ದೀನರಿಗೆ ನೆರವಾಗುವಂತೆನ್ನ
ಬಿಡದಲೆ ಬಳಸಿಕೊ ನೀನು|
ಕಬ್ಬಿನಲಿ ಸಿಹಿಯ ಸಂಪೂರ್ಣತೆಯಂತೆ
ಕರ್ಪೂರವು ಸಮರ್ಪಕವಾಗಿ ಬೆಳಗುವಂತೆ
ನನ್ನನು ಪರಿಪೂರ್ಣಗೊಳಿಸು ನೀನು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂಗೈ ಆಳತೆಯೆ ವಿಮಾನಗಳು!
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೯೮

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

cheap jordans|wholesale air max|wholesale jordans|wholesale jewelry|wholesale jerseys