ಎಲ್ಲರನೊಂದೆ ಪಡಿಯಚ್ಚಿನಲಿ ಕೂಡಿಸುವುದು
ಎಲ್ಲ ಬೇಲಿಗಳ ಕಿತ್ತೊಗೆದು ಬಯಲಿನಲ್ಲೆಲ್ಲರ ಬೆವರ
ಹನಿಗಳಾಗಿಸುವುದು
ಭ್ರಮೆಗುಳ್ಳೆಗಳನಡಗಿಸಿ ಕಡಲೊಡಲಲ್ಲಿ ನಿಲಿಸುವುದು
ಎಲ್ಲರ ನೆಲದ ಹಾಸಿಗೆಯ ಮೇಲೆ ಮಲಗಿಸಿ
ಆಗಸವ ಹೊದಿಸಿ ಗಾಳಿ ಜೋಗುಳ ಹಾಡಿ ತಟ್ಟುವ
ಖನಿಜಗಳನೆಲ್ಲ ಉರಿಯಲ್ಲಿ ಸುಟ್ಟು ಪುಟವಿಟ್ಟು
ಎಷ್ಟೆಷ್ಟಾಣೆ ಬಣ್ಣಗಳೆಂದು ಒರೆಗೆ ಹಚ್ಚುವುದು,
ಇಂಥ ಆದರ್ಶಗಳ ತುಂಬಿಕೊಂಡವನು
ಈ ಗುಂಪುಗೂಳಿತನ, ಈ ನಾಯಿನರಿಗಳೂಳಿತನಗಳಲ್ಲಿ ಸಿಕ್ಕು
ಭೀಮನೋ ಟಾರ್ಝನನೋ ನಿಸ್ಸಹಾಯನಾಗುವನು
ಧರ್ಮನೋ ಮಹಾತ್ಮನೋ ಏಕಾಂತನಾಗುವನು
ಕುಚೇಲನಾಗಿ ನಿಶ್ಚೇಷ್ಟನಾಗಿ ಕೂಡುವ ದೃಶ್ಯ
ಹೆಜ್ಜೆ ಹೆಜ್ಜೆಗೆ ಹೃದಯ ಕಲಕುತ್ತದೆ
ವಿವೇಕ ಹಕ್ಕಿ ಒಳಗೇ ಚಡಪಡಿಸುತ್ತದೆ.
*****
Related Post
ಸಣ್ಣ ಕತೆ
-
ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು
ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…
-
ಏಡಿರಾಜ
ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…
-
ಆಮಿಷ
ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…
-
ದಾರಿ ಯಾವುದಯ್ಯಾ?
ಮೂವತೈದು ವರ್ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…
-
ಜುಡಾಸ್
"ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…