Home / ಲೇಖನ / ವಿಜ್ಞಾನ / ಜೀವಾಣುಗಳಿಂದ ವಿದ್ಯುತ್ ಉತ್ಪಾದನೆಯ ಶೋಧ

ಜೀವಾಣುಗಳಿಂದ ವಿದ್ಯುತ್ ಉತ್ಪಾದನೆಯ ಶೋಧ

ಸಾಮಾನ್ಯವಾಗಿ ಜಲವಿದ್ಯುತ್ ಶಕ್ತಿಯನ್ನು ಕಂಡಿದ್ದೇವೆ. ಗೋಬರ್ ಗ್ಯಾಸ್ ಉತ್ಪಾದನೆಯನ್ನು ಅರಿತಿದ್ದೇವೆ. ಆದರೆ ಜೀವಾಣುಗಳಾದ ಬ್ಯಾಕ್ಟೀರಿಯಾಗಳಿಂದ ವಿದ್ಯುತ್ತನ್ನು ಉತ್ಪಾದಿಸಲಾಗುತ್ತದೆ ಎಂಬ ಅಂಶ ಹೊಸದು.  ಬ್ಯಾಕ್ಟೀರಿಯಾಗಳನ್ನು ಬಳಸಿ ವೇಗವರ್ಧನೆ ಯನ್ನು ಹೆಚ್ಚಿಸಲು ಸಾಧ್ಯವೆಂದು ಡಾ|| ಸಿಸ್ಲರ್ ಎಂಬ ವಿಜ್ಞಾನಿಯು ಪತ್ತೆಹಚ್ಚಿದ್ದಾರೆ.

ಸಮುದ್ರದ ಹಸಿರು ಪಾಚಿಯಲ್ಲಿರುವ “ಅಲ್ಗೆ” ಎಂಬ ಜೀವಾಣುಗಳನ್ನು ಕಂಡು ಹಿಡಿದರು. ಸೂರ್ಯನ ಬಿಸಿಲನ್ನೇ ಇಂಧನವನ್ನಾಗಿ ಪಡೆದು ವಿದ್ಯುತ್‌ನ್ನು ಉತ್ಪಾದಿಸುವ ಸಾಮರ್ಥ್ಯ ಪಡೆಯಲಾಗಿದೆ. ಬ್ಯಾಕ್ಟೀರಿಯಾದ ಮೂಲಕ ವಿದ್ಯುತ್ತನ್ನು ಪಡೆಯುವುದಾದಲ್ಲಿ ಅದು ಬಳಸುವ ಇಂಧನದಲ್ಲಿ ಶೇ. 50ರಷ್ಟು ಮಾತ್ರ ವಿದ್ಯುತ್ ಆಗಿರುತ್ತದೆ. ಆಗ ಅದಕ್ಕೆ ಇಂಧನವಾಗಿ ಸತು ಇಂಗಾಲ ಬೇಕಿಲ್ಲ. ಸೂರ್ಯನ ಬೆಳಕು, ಗಾಳಿ, ಕಡಲಿನ ನೀರು ಮುಂತಾದ ಬಂಡವಾಳ- ವಿಲ್ಲದೇ ಸಿಗುವ ವಸ್ತುಗಳೇ ಇಂಧನವಾಗಿರುವುದೊಂದು ವಿಶೇಷ. ಇದರಿಂದ ಸುಲಭವಾಗಿ ವಿದ್ಯುತ್‌ಶಕ್ತಿ  ಕೈಸೇರುತ್ತ ದೆಂದು ವಿಜ್ಞಾನಿಗಳು ಹೇಳುತ್ತಾರೆ. ಅಮೇರಿಕಾದ ‘ನಾಸಾ’ ಸಂಸ್ಥೆಯು ಅಕಾಶಯಾನಕ್ಕೆ ಸಜೀವಕೋಶ- ಗಳು ಉತ್ಪಾದಿಸುವ ವಿದ್ಯುತ್‌ನ್ನು ಬಳೆಸಿಕೊಳ್ಳಬಹುದೇ ಎಂಬುದನ್ನು ಯೋಚಿಸುತ್ತದೆ. ಮುಂದಿನ ದಿನಗಳಲ್ಲಿ ನಿರುಪಯುಕ್ತವಾಗಿ, ಕಶ್ಮಲವಾಗಿ, ಅಸಹ್ಯವಾಗಿ ಹರಿದು ಹೋಗುವ ಚರಂಡಿ ನೀರು, ಕೊಳಚೆ ನೀರಿನಲ್ಲಿರುವ ಜೀವಾಣುಗಳಿಂದ (ಬ್ಯಾಕ್ಟೀರಿಯಾಗಳಿಂದ) ವಿದ್ಯುತ್ತನ್ನು ಉತ್ಪಾದಿಸಿ ಕತ್ತಲೆಯ ಸಮಸ್ಯೆಗ ಪರಿಹಾರ
ಕಂಡುಹಿಡಿಯಬಹುದು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...