Home / ಲೇಖನ / ವಿಜ್ಞಾನ / ಜೀವಾಣುಗಳಿಂದ ವಿದ್ಯುತ್ ಉತ್ಪಾದನೆಯ ಶೋಧ

ಜೀವಾಣುಗಳಿಂದ ವಿದ್ಯುತ್ ಉತ್ಪಾದನೆಯ ಶೋಧ

ಸಾಮಾನ್ಯವಾಗಿ ಜಲವಿದ್ಯುತ್ ಶಕ್ತಿಯನ್ನು ಕಂಡಿದ್ದೇವೆ. ಗೋಬರ್ ಗ್ಯಾಸ್ ಉತ್ಪಾದನೆಯನ್ನು ಅರಿತಿದ್ದೇವೆ. ಆದರೆ ಜೀವಾಣುಗಳಾದ ಬ್ಯಾಕ್ಟೀರಿಯಾಗಳಿಂದ ವಿದ್ಯುತ್ತನ್ನು ಉತ್ಪಾದಿಸಲಾಗುತ್ತದೆ ಎಂಬ ಅಂಶ ಹೊಸದು.  ಬ್ಯಾಕ್ಟೀರಿಯಾಗಳನ್ನು ಬಳಸಿ ವೇಗವರ್ಧನೆ ಯನ್ನು ಹೆಚ್ಚಿಸಲು ಸಾಧ್ಯವೆಂದು ಡಾ|| ಸಿಸ್ಲರ್ ಎಂಬ ವಿಜ್ಞಾನಿಯು ಪತ್ತೆಹಚ್ಚಿದ್ದಾರೆ.

ಸಮುದ್ರದ ಹಸಿರು ಪಾಚಿಯಲ್ಲಿರುವ “ಅಲ್ಗೆ” ಎಂಬ ಜೀವಾಣುಗಳನ್ನು ಕಂಡು ಹಿಡಿದರು. ಸೂರ್ಯನ ಬಿಸಿಲನ್ನೇ ಇಂಧನವನ್ನಾಗಿ ಪಡೆದು ವಿದ್ಯುತ್‌ನ್ನು ಉತ್ಪಾದಿಸುವ ಸಾಮರ್ಥ್ಯ ಪಡೆಯಲಾಗಿದೆ. ಬ್ಯಾಕ್ಟೀರಿಯಾದ ಮೂಲಕ ವಿದ್ಯುತ್ತನ್ನು ಪಡೆಯುವುದಾದಲ್ಲಿ ಅದು ಬಳಸುವ ಇಂಧನದಲ್ಲಿ ಶೇ. 50ರಷ್ಟು ಮಾತ್ರ ವಿದ್ಯುತ್ ಆಗಿರುತ್ತದೆ. ಆಗ ಅದಕ್ಕೆ ಇಂಧನವಾಗಿ ಸತು ಇಂಗಾಲ ಬೇಕಿಲ್ಲ. ಸೂರ್ಯನ ಬೆಳಕು, ಗಾಳಿ, ಕಡಲಿನ ನೀರು ಮುಂತಾದ ಬಂಡವಾಳ- ವಿಲ್ಲದೇ ಸಿಗುವ ವಸ್ತುಗಳೇ ಇಂಧನವಾಗಿರುವುದೊಂದು ವಿಶೇಷ. ಇದರಿಂದ ಸುಲಭವಾಗಿ ವಿದ್ಯುತ್‌ಶಕ್ತಿ  ಕೈಸೇರುತ್ತ ದೆಂದು ವಿಜ್ಞಾನಿಗಳು ಹೇಳುತ್ತಾರೆ. ಅಮೇರಿಕಾದ ‘ನಾಸಾ’ ಸಂಸ್ಥೆಯು ಅಕಾಶಯಾನಕ್ಕೆ ಸಜೀವಕೋಶ- ಗಳು ಉತ್ಪಾದಿಸುವ ವಿದ್ಯುತ್‌ನ್ನು ಬಳೆಸಿಕೊಳ್ಳಬಹುದೇ ಎಂಬುದನ್ನು ಯೋಚಿಸುತ್ತದೆ. ಮುಂದಿನ ದಿನಗಳಲ್ಲಿ ನಿರುಪಯುಕ್ತವಾಗಿ, ಕಶ್ಮಲವಾಗಿ, ಅಸಹ್ಯವಾಗಿ ಹರಿದು ಹೋಗುವ ಚರಂಡಿ ನೀರು, ಕೊಳಚೆ ನೀರಿನಲ್ಲಿರುವ ಜೀವಾಣುಗಳಿಂದ (ಬ್ಯಾಕ್ಟೀರಿಯಾಗಳಿಂದ) ವಿದ್ಯುತ್ತನ್ನು ಉತ್ಪಾದಿಸಿ ಕತ್ತಲೆಯ ಸಮಸ್ಯೆಗ ಪರಿಹಾರ
ಕಂಡುಹಿಡಿಯಬಹುದು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...